
ಕಲಾಸಿರಿ ರಂಗಭೂಮಿ ಸಾಂಸ್ಕ್ರತಿಕ ಜನಪದ ಹಾಗೂ ಕ್ರೀಡಾವೇದಿಕೆ ವತಿಯಿಂದ ಜಿಲ್ಲಾಮಟ್ಟದ ಆಹ್ವಾನಿತ ಸಾಮಾಜಿಕ ಸ್ಪರ್ಧಾ ನಾಟಕೊತ್ಸವ ಆಯೋಜಿಸಿದ್ದು ಎರಡು ದಿನಗಳ ಕಾಲ ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಸಾಂಸ್ಕ್ರತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಎಂ.ಎನ್.ನಾಯ್ಕ ನಿಲ್ಕೋಡ್ ಮಾಧ್ಯಮಗೊಷ್ಟಿಯಲ್ಲಿ ಮಾಹಿತಿ ನೀಡಿದರು.
ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಜನವರಿ 23 ಮತ್ತು 24ರಂದು ಮೂಡಗಣಪತಿ ಸಭಾಭವನದಲ್ಲಿ ಜಿಲ್ಲಾಮಟ್ಟದ 5 ಆಹ್ವಾನಿತ ತಂಡಗಳ ಸಾಮಾಜಿಕ ಸ್ಪರ್ಧಾ ನಾಟಕೊತ್ಸವದ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ತಾಲೂಕಿನ ಹವ್ಯಾಸಿ ರಂಗಕಲಾವಿದರು ಒಟ್ಟುಗೂಡಿ ಸಾಂಸ್ಕ್ರತಿಕ ಉತ್ಸವ ಮಾಡಬೇಕೆನ್ನುವ ಉದ್ದೇಶದಿಂದ ಕಲಾಸಿರಿ ರಂಗಭೂಮಿ ಸಾಂಸ್ಕ್ರತಿಕ ಹಾಗೂ ಜನಪದ ವೇದಿಕೆ ಎನ್ನುವ ಸಂಘಟನೆಯನ್ನು ಉದ್ಘಾಟನೆ ಮಾಡಲಾಗುವುದು. ಸಂಘಟನೆ ಕೇವಲ ಸಾಂಸ್ಕ್ರತಿಕ ಉತ್ಸವಕ್ಕೆ ಸಿಮೀತವಾಗಿರದೇ ನಶಿಸುತ್ತಿರುವ ರಂಗಭೂಮಿ ಕಲೆ ಉಳಿಸಲು ಹಾಗೂ ಕಲಾವಿದರ ಬಳಗದವರಿಗೆ ಶೈಕ್ಷಣಿಕ, ಆರ್ಥಿಕ, ಹಾಗೂ ದೈಹಿಕವಾಗಿ ತೊಂದರೆ ಬಂದಲ್ಲಿ ಸ್ಪಂದಿಸಿ ಪರಿಹಾರ ನೀಡುವ ಯೋಜನೆ ಇಟ್ಟುಕೊಂಡಿದ್ದೇವೆ. ಜಾತಿ,ಮತ,ಬೇಧವಿಲ್ಲದೆ ಸಂಘ ಕಟ್ಟಿಕೊಂಡಿದ್ದು ಮೊದಲ ಕಾರ್ಯಕ್ರಮವಾದ ಜಿಲ್ಲಾಮಟ್ಟದ 5 ಆಹ್ವಾನಿತ ತಂಡಗಳಿಂದ ನಾಟಕೊತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಲಾಅಭಿಮಾಗಳು ಆಗಮಿಸಿ ತನುಮನಧನದಿಂದ ಸಹಕಾರ ನೀಡುವಂತೆ ಕೋರಿದರು.

ಖಜಾಂಚಿ ನಾಗರಾಜ ದೇವಾಡಿಗ ಮಾತನಾಡಿ ಜಿಲ್ಲೆಯ ಯಲ್ಲಾಪುರ, ಕುಮುಟಾ ಅಂಕೋಲಾ, ಭಟ್ಕಳ ಹಾಗೂ ಹೊನ್ನಾವರದ ತಲಾ ಒಂದು ತಂಡಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು ಮೊದಲ ದಿನ 90 ನಿಮಿಷದ ಅವಧಿಯ ಮೂರು ನಾಟಕ ಹಾಗೂ ಎರಡನೇ ದಿನ 2 ನಾಟಕ ಪ್ರದರ್ಶನಗೊಳ್ಳಲಿದೆ. ಸಾಯಂಕಾಲ 5:30ಕ್ಕೆ ಸಭಾ ಕಾರ್ಯಕ್ರಮದಲ್ಲಿಜನಪ್ರತಿನಿಧಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಎರಡನೇ ದಿನ ಪ್ರಶಸ್ತಿ ವಿತರಣಾ ಕಾರ್ಯಕ್ರಮದ ಬಳಿಕ ಕಲಾಸಿರಿ ಬಳಗದಿಂದ ಈ ಮಡದಿಗೇನು ಗೊತ್ತು ಮಾಂಗಲ್ಯದ ಬೆಲೆ ಎನ್ನುವ ನಾಟಕ ಪ್ರದರ್ಶನಗೊಳ್ಳಲಿದೆ. ಅಲ್ಲದೇ ವಿಜೇತ ಪ್ರಥಮ ತಂಡಕ್ಕೆ 15ಸಾವಿರ ನಗದು ಹಾಗೂ ಟ್ರೂಪಿ, ಎರಡನೇ ತಂಡಕ್ಕೆ 10ಸಾವಿರ ನಗದು ಹಾಗೂ ಟ್ರೂಪಿ ನೀಡಲಾಗುವುದು ಅಲ್ಲದೇ ಉತ್ತಮ ನಾಯಕ,ನಾಯಕಿ,ಕಳನಾಯಕ ಸೇರಿದಂತೆ ವಿವಿಧ ಕಲಾವಿದರಿಗೆ ಇದೆ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಗುವುದು.
ಮಾಧ್ಯಮಗೊಷ್ಟಿಯಲ್ಲಿ ಉಪಾಧ್ಯಕ್ಷ ರಾಜೇಶ ಗುನಗಾ ಕೆಕ್ಕಾರ, ಸಹ ಕಾರ್ಯದಶಿ ರಾಮ ಗೌಡ, ಉಪ ಖಜಾಂಚಿ ಮಾರುತಿ ನಾಯ್ಕ, ಸದಸ್ಯರಾದ ಓಕಾಂರ ನಾಯ್ಕ, ರವಿ ಹೆಗಡೆ, ಶ್ರೀಧರ ನಾಯ್ಕ, ದಿನೇಶ ಪಟಗಾರ, ದಾಮೋದರ ನಾಯ್ಕ, ಪ್ರಕಾಶ ನಾಯ್ಕ ಉಪಸ್ಥಿತರಿದ್ದರು.

Leave a Comment