
ಶಾಸಕಿ ರೂಪಾಲಿಯಿಂದ (4) ನೂತನ ಬಸ್ಸ್ ಸಂಚಾರಕ್ಕೆ ಚಾಲನೆ.?
ಇಂದು ಅಂಕೋಲಾದ ಬಸ್ಸ್ ನಿಲ್ದಾಣದಲ್ಲಿ ನಮ್ಮ ಅಂಕೋಲಾ-ಕಾರವಾರ ವಿಧಾನ ಸಭಾ ಕ್ಷೇತ್ರದ ಶಾಸಕಿಯಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ರವರು ನಾಲ್ಕು (4) ಹೊಸ ಬಸ್ಸುಗಳು ಸಂಚಾರಕ್ಕೆ ಚಾಲನೆ ನೀಡಿ, ಮಾತನಾಡಿದ ಶಾಸಕರು ಇಂದು ಚಾಲನೆಗೊಂಡ ಬಸ್ಸುಗಳು ಸದುಪಯೋಗವನ್ನ ಸಾರ್ವಜನಿಕರು ಸರಿಯಾಗಿ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.

ಅದೇ ರೀತಿ ಬಸ್ಸ್ ನಿಲ್ದಾಣದ ಆಮೆಗತಿಯ ಕೆಲಸಕ್ಕೆ ಬೇಸರ ವ್ಯಕ್ತಪಡಿಸಿ ಆದಷ್ಟೂ ಬೇಗ ಈ ಕಾಮಗಾರಿ ಕೆಲಸವನ್ನ ಮುಗಿಸಿಕೊಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿ.ಜೆ.ಪಿ ಮಂಡಳಾದ್ಯಕ್ಷರು ಆದಂತಹ ಶ್ರೀ ಸಂಜಯ ಎಮ್. ನಾಯ್ಕ,ಜಿಲ್ಲಾ ಪಂ. ಸದಸ್ಯರಾದ ಜಗದೀಶ ನಾಯಕ ಮೊಗಟಾ, ಜಿಲ್ಲಾ ಮಹಿಳಾಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಾ ಬಾಲಕೃಷ್ಣ ನಾಯ್ಕ, ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಸದಸ್ಯ ರಾಜೇಂದ್ರ ನಾಯ್ಕ,ಬಾಸ್ಕರ್ ನಾರ್ವೇಕರ, ಯುವಮೋರ್ಚಾ ಅದ್ಯಕ್ಷ ಪ್ರವೀಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಸಂದೀಪ ಗಾವಂಕರ, ಚಂದ್ರಕಾಂತ ನಾಯ್ಕ, ಅರುಣ ನಾಡಕರ್ಣಿ, ರಾಘವೇಂದ್ರ ಭಟ್, ಬಾಲಕೃಷ್ಣ ನಾಯ್ಕ, ನಾಗೇಶ ಕಿಣಿ, ವಿನಾಯಕ ಪಡ್ತಿ, ಪುರಸಭೆ ಸದಸ್ಯರಾದ ಶಾಂತಲಾ ನಾಡಕರ್ಣಿ, ರೇಖಾ ಗಾವಂಕರ, ತಾರಾ ನಾಯ್ಕ, ಶೀಲಾ ಶೆಟ್ಟಿ, ತಾ.ಪಂ ಸದಸ್ಯರಾದ ಸಂಜೀವ ಕುಚನಾಡ, ಗಣಪತಿ ನಾಯ್ಕ( ಸೂಪರ್), ಗಣಪತಿ ನಾಯಕ ಶೀಳ್ಯ, ಅನುರಾದ ಮಹೇಕರ, ಸುರಕ್ಷಾ ಭೋವಿ ಹೂವಾ ಕಂಡೇಕರ್, ಸುಭಾಂಗ ನಾಯ್ಕ, ನಿಲೇಶ ನಾಯ್ಕ, ಸುಬ್ರಮಣ್ಯ ಗಾವಂಕರ, ನಾಗರಾಜ ನಾಯ್ಕ, ಗೋವಿಂದ ನಾಯ್ಕ, ಗಜೇಂದ್ರ ನಾಯ್ಕ, ಇನ್ನಿತರ ಪ್ರಮೂಕರು, ಕಾರ್ಯಕರ್ತರು, ಜನಪ್ರತಿನಿಧಿಗಳು ಊರನಾಗರಿಕರು ಉಪಸ್ಥಿತರಿದ್ದರು.

Leave a Comment