• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ರಾಜಕೀಯ ಭಿಷ್ಮ, ಅಜಾತಶತ್ರು ಮಾಜಿ ವಿಪ‌‌ ಸದಸ್ಯ ವಿಡಿ ಹೆಗಡೆಗೆ 81 ನೇ‌ ಜನ್ಮದಿನದ ಸಂಭ್ರಮ.

January 21, 2020 by Yogaraj SK Leave a Comment

watermarked 1212 1

ಹಳಿಯಾಳ:- ಜಿದ್ದಾಜಿದ್ದಿನ ಹಾಗೂ ಹಗೆತನದ ರಾಜಕಾರಣಕ್ಕೆ ಹೆಸರಾದ ಹಳಿಯಾಳ ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ಸೇರಿದಂತೆ ಎಲ್ಲ ವರ್ಗದವರಿಂದಲೂ ಗೌರವಿಸಲ್ಪಡುವ ಹಳಿಯಾಳದ ಅಜಾತಶತ್ರು ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಅವರು 81 ನೇ ವಸಂತಕ್ಕೆ ಕಾಲಿಡುತ್ತಿದ್ದು ಅವರ ಬಗ್ಗೆ ಒಂದಿಷ್ಟು ಮಾಹಿತಿ ಓದುಗರ ಮುಂದೆ.
ಹಳಿಯಾಳದಲ್ಲಿ ದಿ.21-1-1940ಕ್ಕೆ ಜನಿಸಿದ ವಿಡಿ ಹೆಗಡೆ ಅವರು ದಿ.21-1-2020 ಕ್ಕೆ 81 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಉದ್ಯಮಿ ಆಗಿರುವ ವಿಡಿ ಹೆಗಡೆ ಅವರು ಕರ್ಮಯೋಗಿ, ಸ್ಪಷ್ಟ ಮಾತುಗಾರ, ನೇರ-ನಿಷ್ಟುರವಾದಿ, ಅಭಿವೃದ್ದಿ ಪರ ವಿಚಾರಧಾರೆಯುಳ್ಳ ವ್ಯಕ್ತಿತ್ವ ಹೊಂದಿರುವ ಇವರ ಬಳಿ ಯಾರೇ ಬಂದರು ಮೊದಲು ಕೆಳುವುದು ಉದ್ಯೋಗದ ಕುರಿತು. ಇನ್ನೂ ಇವರು ನಿಷ್ಟುರವಾಗಿ ಮಾತನಾಡಿದರು ಸಹಿತ ಎಲ್ಲರೂ ಇವರನ್ನು ನೆನೆಸುತ್ತಾರೆ ಮಾತ್ರವಲ್ಲದೇ ತುಂಬಾ ಗೌರವದಿಂದ ಕಾಣುವುದು ವಿಡಿ ಹೆಗಡೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಯಶಸ್ವಿ ಉದ್ಯಮಿಯು ಆಗಿರುವ ಅವರು ಹಳಿಯಾಳ ರಾಜಕೀಯ ರಂಗದ ಭೀಷ್ಮರಾಗಿದ್ದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಸದ್ಯ ವಿವಿಧ ಪಕ್ಷಗಳಲ್ಲಿರುವ ಮುಖಂಡರು ಅವರ ರಾಜಕೀಯ ಗರಡಿಯಲ್ಲೇ ಪಳಗಿದವರು. ಅವರು ಕೂಡ ಇಂದಿಗೂ ವಿಡಿ ಹೆಗಡೆ ಅವರನ್ನು ಗೌರವದಿಂದ ಕಾಣುತ್ತಾರೆ.

watermarked 1


ಅವರ ನಿಕಟವರ್ತಿಗಳಾದ ಹಳಿಯಾಳ ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಹೂಲಿ ಅವರು ಹೇಳುವ ಹಾಗೆ ವಿಡಿ ಹೆಗಡೆ ಅವರು ಪ್ರಥಮ ಬಾರಿಗೆ ಹಳಿಯಾಳ ನಗರಸಭೆಗೆ 1972 ರಲ್ಲಿ ಆಯ್ಕೆಯಾದರು. ನಗರಸಭಾ ಉಪಾಧ್ಯಕ್ಷರಾಗಿ ಬಳಿಕ ಮತ್ತೊಂದು ಅವಧಿಗೆ ಆಯ್ಕೆಯಾಗಿ ಅಧ್ಯಕ್ಷರಾದರು. ಅಲ್ಲಿಂದ ಶುರುವಾದ ವಿಡಿ ಹೆಗಡೆ ರಾಜಕೀಯ ಪಯನ ಅಂದು ಹಳಿಯಾಳದ ಪ್ರತಿಷ್ಠಿತ ಬ್ಯಾಂಕ್ ಆಗಿದ್ದ ಅರ್ಬನ್ ಬ್ಯಾಂಕ್‍ಗೆ ನಿರ್ದೇಶಕರಾಗಿ ಆಯ್ಕೆಯಾಗಿ ಬಳಿಕ ಬ್ಯಾಂಕ್ ಚೇರಮನ್ ಕೂಡ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
ಬಳಿಕ ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್‍ಗೆ ನಿರ್ದೇಶಕರಾಗಿ ಆಯ್ಕೆಯಾದ ಅವರು ಅಧ್ಯಕ್ಷರಾಗಿಯೂ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರು. ಹೀಗೆ ವಿಡಿ ಹೆಗಡೆ ಅವರು ನಿರಂತರ ಯಶಸ್ಸನ್ನು ಕಾಣುತ್ತಾ 1999 ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ದಿಸಿ ಎಮ್.ಎಲ್.ಸಿ ಆಗಿ ಆಯ್ಕೆಯಾದರು. ಒಮ್ಮೇ ಎಮ್‍ಎಲ್‍ಸಿ ಆಗಿ ಕಾರ್ಯನಿರ್ವಹಿಸಿದ ಅವರಿಗೆ ಬಳಿಕ ರಾಜಕೀಯ ವಿದ್ಯಮಾನಗಳಲ್ಲಿ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾರುವ ಅವಕಾಶವೇ ದೊರೆಯಲಿಲ್ಲ.

watermarked 1212 2


ಈ ನಡುವೆ ಅವರು ತಮ್ಮ ಮಗ ಮಾಜಿ ಶಾಸಕ ಸುನೀಲ್ ಹೆಗಡೆ ಅವರನ್ನು ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಎದುರು ಗೆಲ್ಲಿಸಿ ಒಮ್ಮೆ ಶಾಸಕನಾಗಿ ಮಾಡುವಲ್ಲಿ ಸಫಲರಾಗಿದ್ದು ಇತಿಹಾಸ.
ಹೆಗಡೆ ಅವರು ರಾಜಕೀಯ ಮಾತ್ರವಲ್ಲದೇ ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಆಪಾರ ಆಸಕ್ತಿ ಹೊಂದಿದರಾಗಿದ್ದು ಹಳಿಯಾಳದಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಇನ್ನೂ ಹಳಿಯಾಳದ ಗಣೇಶ ಉತ್ಸವ ಮಂಡಳದ ಸಂಸ್ಥಾಪಕ ಅಧ್ಯಕ್ಷರು ಆಗಿರುವ ವಿಡಿ ಹೆಗಡೆ ಅವರು ದಿ.21 ಕ್ಕೆ 81ನೇ ವಸಂತಕ್ಕೆ ಕಾಲಿಡುತ್ತಿದ್ದು ಮಂಗಳವಾರ ಅವರ ಅಭಿಮಾನಿಗಳು ಪಟ್ಟಣದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ತಮ್ಮ ಹಿರಿಯ ನಾಯಕನ ಹುಟ್ಟುಹಬ್ಬವನ್ನು ಆಚರಿಸುವ ಉತ್ಸಾಹದಲ್ಲಿದ್ದಾರೆ.

watermarked ajatashtru3 1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...