
ಶಬ್ದಗಳ ಮೂಲಕ ಓದುಗರನ್ನು ಹಿಡಿದಿಟ್ಟುಕೊಳ್ಳುವಿಕೆ ಸಾಹಿತಿಗಳಿಂದ ಮಾತ್ರ ಸಾಧ್ಯ. ಆ ಕಾರ್ಯದಲ್ಲಿ ನಾರಾಯಣ ಯಾಜಿ ನೈದಿಲೆಯ ಒಡಲು ಕಥಾಸಂಕಲನದ ಮೂಲಕ ಯಶ್ವಸಿಯಾಗಿದ್ದಾರೆ ಎಂದು ಕಥೆ ಕಾದಂಬರಿಕಾರರಾದ ಡಾ. ಶ್ರೀಧರ ಬಳಗಾರ ಅಭಿಪ್ರಾಯಪಟ್ಟರು.
ಹೊನ್ನಾವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕಾ ವೇದಿಕೆ ಹೊನ್ನಾವರ ಇವರ ಸಹಯೋಗದಲ್ಲಿ ಪಟ್ಟಣ ಪಂಚಾಯತಿಯ ಸಭಾಭವನದಲ್ಲಿ ಶ್ರೀ ನಾರಾಯಣ ಯಾಜಿಯವರ “ನೈದಿಲೆಯ ಓಡಲು” ಕಥಾ ಸಂಕಲನ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿ ಒರ್ವ ತಾಳೆಮದ್ದಲೆ ಅರ್ಥದಾರಿಯಾಗಿಯೂ ಸಾಹಿತ್ಯದಲ್ಲಿಯೂ ಸಾಧನೆ ಮಾಡಿದ್ದಾರೆ. ಅವರ ಕಥಾಸಂಕಲನ ವಿಶಿಷ್ಟವಾಗಿದ್ದು ನಮ್ಮ ನಡುವೆ ನಡೆಯುವ ಹಲವು ಚಿತ್ರಣವನ್ನು ಕಥೆಯ ರೂಪದಲ್ಲಿ ಹೊರ ತಂದಿದ್ದಾರೆ. ಪುಸ್ತಕದಲ್ಲಿನ ಭಾಷಾ ಪ್ರಯೋಗ ವಿರೋಚಿತವಾಗಿದ್ದು ಒಂದಕ್ಕಿಂತ ಒಂದು ಕಥೆ ಕೂತೂಹಲಕಾರಿಯಾಗಿದೆ. ಈ ಪುಸ್ತಕವನ್ನು ಓದುವ ಮೂಲಕ ಇವರ ಸಾಹಿತ್ಯದ ಭವಿಷ್ಯಕ್ಕೆ ಪೊತ್ಸಾಹಿಸೋಣ ಎಂದರು.

ಕೃತಿ ಪರಿಚಯ ನೇರವೇರಿಸಿದ ನಾಗರಿಕ ಪತ್ರಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಸಮಾಜದಲ್ಲಿ ಒಳಿತು ಕೆಡುಕನ್ನು ಬೆಳಕಿಗೆ ತರುವ ನೈದಿಲೆಯ ಒಡಲು ಪುಸ್ತಕ 112 ಪುಟಗಳನ್ನು ಒಳಗೊಂಡಿದ್ದು 9 ಕಥೆಗಳಿಂದ ಕೂಡಿದೆ ಎಂದು ಕೃತಿಯ ಬಗ್ಗೆ ವಿವರಿಸಿದರು.
ಲೇಖಕರಾದ ನಾರಾಯಣ ಯಾಜಿ ಮಾತನಾಡಿ ನಾನು ಕಲಾವಿದನ ಜೊತೆ ಸಾಹಿತ್ಯದ ಆಸಕ್ತಿ ಮೂಡಲು ಹಲವು ಕಾರಣಗಳಿವೆ. ಅವರೆಲ್ಲರ ಸಹಕಾರದ ಮೇರೆಗೆ ಈ ಕೃತಿ ಹೊರಬಮದಿದೆ. ವಿಶೇಷವಾಗಿ ನನ್ನ ಕುಟುಂಬದ ಸಹಕಾರ ಬಹಳಿಷ್ಟಿದೆ. ಹಲವು ಏಳುಬೀಳುಗಳ ಮಧ್ಯೆ ಹೊರ ಬಂದ ಈ ಕೃತಿ ನಿಮ್ಮ ಮುಂದೆ ಇಡುತ್ತಿದ್ದು ಅದನ್ನು ನೀವು ಒಪ್ಪಿಕೊಳ್ಳುತ್ತಿರಿ ಎನ್ನುವ ಆಶಾಭಾವನೆ ನನ್ನದು ಎಂದರು.
ಇದೇ ಸಂದರ್ಭದಲ್ಲಿ ನಾರಾಯಣ ಯಾಜಿ ಕುಟುಂಬದವರ ಸಮ್ಮಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು
ಹಿರಿಯ ಜನಪದ ವಿದ್ವಾಂಸರಾದ ಡಾ. ಎನ್.ಆರ್.ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಖ್ಯಾತ ಬರಹಗಾರರಾದ ಸಚ್ಚಿದಾನಂದ ಹೆಗಡೆ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಭವಾನಿಶಂಕರ್ ಸ್ವಾಗತಿಸಿ ಶಂಕರ ಗೌಡ ವಂದಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.

Leave a Comment