
ಸಮಾಜದ ಸ್ವಾಭಿಮಾನ ಹಾಗೂ ಒಗ್ಗಟ್ಟಿನ ಪ್ರತೀಕವಾಗಿ ಎರಡು ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅಂದಾಜು ನಾಲ್ಕು ಕೋಟಿ ವೆಚ್ಚದ ಸಮುದಾಯಭವನ ನಿರ್ಮಾಣಗೊಂಡು ಲೋಕರ್ಪನೆಗೊಂಡಿರುವುದು ನಮಗೆಲ್ಲರಿಗೂ ಅತೀವ ಸಂತಸವನ್ನುಂಟುಮಾಡಿದೆ. ಜಾತಿ ಧರ್ಮ ಎಂದು ಭೇದ ಮಾಡದೇ ಎಲ್ಲಾ ಸಮಾಜದವರ ಶ್ರಮದಿಂದ ತಾಲೂಕಾ ಒಕ್ಕಲಿಗರ ಸಮುದಾಯಭವನ ಲೋಕೋರ್ಪಣಾ ಕಾರ್ಯಕ್ರಮವನ್ನು ಫೆಬ್ರವರಿ 12ರಂದು ಶ್ರೀಗಳ ಅಮೃತಹಸ್ತದಿಂದ ಉದ್ಘಾಟನೆಗೊಳಲಿದೆ ಎಂದು ತಾಲೂಕ ಒಕ್ಕಲಿಗ ಅಧ್ಯಕ್ಷ ಟಿ.ಜೆ.ಗೌಡ ಮಾಹಿತಿ ನೀಡಿದರು.
ಹೊನ್ನಾವರ ತಾಲೂಕಿನ ಕೇಳಗಿನೂರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ತಾಲೂಕಾ ಒಕ್ಕಲಿಗರ ಸಮುದಾಯ ಭವನ ಲೋಕಾರ್ಪಣೆಗೆ ಸಜ್ಜಾಗಿದೆ ಬೆಳಿಗ್ಗೆ 9ಗಂಟೆಯಿಂದ ಕಾರ್ಯಕ್ರಮ ಜರುಗಲಿದ್ದು ಹಲವು ಗಣ್ಯರು, ಸಮಾಜ ಭಾದಂವರು ಭಾಗವಹಿಸಲಿದ್ದಾತರೆ ಎಂದು ಒಕ್ಕಲಿಗರ ಸಂಘದ ಪದಾದಿಕಾರಿಗಳು ಮಧ್ಯಮಗೊಷ್ಟಿಯಲ್ಲಿ ಮಾಹಿತಿ ನೀಡಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ಜೆ.ಗೌಡ ಮಾತನಾಡಿ ತಾಲೂಕಾ ಒಕ್ಕಲಿಗರ ಸಂಘ ದಿವಂಗತ ಎಮ್ ಎಚ್ ಗೌಡರ ಅಧ್ಯಕ್ಷತೆಯಲ್ಲಿ ಅಡಿಗಲು ಸಮಾರಂಭವನ್ನು ಪ್ರಾರಂಭಿಸಿದ ಬಳಿಕ ಕಾರ್ಯ ಆರಂಭಗೊಂಡು ಇದೀಗ ಉದ್ಘಾಟನೆಗೆ ಸಜ್ಜುಗೊಂಡಿದೆ. ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಪುಣ್ಯ ಕರಕಮಲಗಳಿಂದ 12ರಂದು ನೆರವೇರಲಿದೆ. ಈ ಸಂಧರ್ಭದಲ್ಲಿ ಶ್ರೀರಾಮಕ್ಷೇತ್ರ ನಿತ್ಯಾನಂದ ನಗರ ಉಜಿರೆ ಇದರ ಪೀಠಾದೀಶರಾದ ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯ ಸಾನಿಧ್ಯ ಕರುಣಿಸಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳೂ ಉತ್ತರಕನ್ನಡ ಹಾಗೂ ಶಿವಮೊಗ್ಗಾ ಜಿಲ್ಲಾ ಶಾಖಾ ಮಠಾದೀಶರಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಸಾನಿಧ್ಯವಹಿಸಿ ಮಾರ್ಗದರ್ಶನ ಮಾಡಲಿದ್ದಾರೆ. ಆದಿಚುಂಚನಗಿರಿ ಶ್ರೀಮಠದ ಎಲ್ಲಾ ಶಾಖಾ ಮಠಾದೀಶರು ಆಗಮಿಸಲಿದ್ದಾರೆ. ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥನಾರಾಯಣ ಅವರು, ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು, ಮಾಜಿ ಶಾಸಕರಾದ ಅರಗ ಜ್ಞಾನೇಂದ್ರ ಅವರು, ಕುಮಟಾ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರುಗಳಾದ ಶ್ರೀ ದಿನಕರ ಶೆಟ್ಟಿ ಮತ್ತು ಶ್ರೀ ಸುನಿಲ್ ನಾಯ್ಕ ಅವರು ಆಗಮಿಸಲಿದ್ದಾರೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕರೂ ಸಮುದಾಯಭವನ ನಿರ್ಮಾಣದಲ್ಲಿ ಸಮಾಜದ ಜೊತೆನಿಂತು ಸಹಕಾರ ನೀಡಿದ ಶ್ರೀ ಮಂಕಾಳ ಎಸ್ ವೈದ್ಯ ಅವರನ್ನು ಸನ್ಮಾನಿಸಲಾಗುವುದು. ಕ.ರ.ವೇ ಅಧ್ಯಕ್ಷರಾದ ಟಿ.ಎ.ನಾರಾಯಣ ಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ವಿವಿಧ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಲೋಕಾರ್ಪಣಾ ಕಾರ್ಯಕ್ರಮದಂದು ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಮಾಡಲಾಗಿದೆ.
ಬಂದವರೆಲ್ಲರಿಗೆ ಉಪಾಹಾರ, ಮದ್ಯಾಹ್ನದ ಪ್ರಸಾದ ಭೋಜನ ವ್ಯವಸ್ಥೆಮಾಡಲಾಗುವುದು. ತಾಲೂಕಿನ ಸಮಸ್ತ ಸಮಾಜ ಬಾಂಧವರು ಮತ್ತು ಎಲ್ಲಾ ಸಮಾಜದ ಸಮಾಜ ಬಾಂದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮುದಾಯ ಭವನ ಲೋಕಾರ್ಪಣಾ ಕಾರ್ಯಕ್ರಮವನ್ನು ಯಶಸ್ವೀಗೊಳಿಸುವಂತೆ ಕೋರಿದರು.
ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ಮಾತನಾಡಿ ಉತ್ತರ ಕನ್ನಡ ಜಿಲ್ಲೆಗೆ ಆದಿಚುಂಚನಗಿರಿ ಸಂಸ್ಥಾನ ಮಠ 1988 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ಜಿಲ್ಲೆಯ ಒಕ್ಕಲಿಗರಲ್ಲಿ ಸಂಘಟನೆಯನ್ನು ಶಕ್ತಿಯನ್ನ ಸೃಷ್ಠಿಸಿ ಶ್ರೀ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಪರಿಶ್ರಮದ ಫಲವಾಗಿ ಜಿಲ್ಲೆಯಲ್ಲಿ ಒಕ್ಕಲಿಗ ಸಂಘಟನೆಗಳು ಹುಟ್ಟಿಕೊಂಡು ಕುಮಟಾದಲ್ಲಿಯು ಒಂದು ಸಮುದಾಯ ಭವನವನ್ನು ಸಜ್ಜಾಗಿದೆ. 28 ತಿಂಗಳಿನಲ್ಲಿ ಈ ಸಮುಧಾಯ ಭವನವನ್ನು ಪುರ್ಣಗೊಳಿಸಿ ಲೋಕಾರ್ಪಣೆಗೆ ಎದುರಾಗುತ್ತಿದ್ದೆವೆ. ಈ ಸಮುಧಾಯ ಭವನ ನಿರ್ಮಾಣದಲ್ಲಿ ಹಲವಾರಿ ದಾನಿಗಳು ನಮಗೆ ಸಹಾಯವನ್ನು ನೀಡಿದ್ದಾರೆ. ಕರ್ನಾಟಕ ಸರ್ಕಾರದಿಂದ 50 ಲಕ್ಷ ತಾಲೂಕಾ ಪಂಚಾಯತನಿಂದ 10 ಲಕ್ಷ ಶ್ರೀಮಠ 20 ಲಕ್ಷ ನೀಡಿದ್ದು ಸಮಾಜ ಭಾಂದವರು ಬೇರೆ ಬೇರೆ ಸಮಾಜದ ಗಣ್ಯರು ಕಡಿಮೆ ಅವದಿಯಲ್ಲಿ ನಿರ್ಮಾಣ ಮಾಡಲೂ ಸಹಾಯ ಸಹಕಾರ ನೀಡಿದ್ದಾರೆ. ಎಲ್ಲರಿಗು ಅಭಿನಂದನೆಗಳು ಬೆಳಿಗ್ಗೆ 9 ಗಂಟೆಗೆ ಹೊನ್ನಾವರದಿಂದ ಬೈಕ್ ರ್ಯಾಲಿಯ ಮೂಲಕ ಕಾಸರಕೋಡವರೆಗೆ ಕರೆ ತಂದು ನಂತರ ಅಲ್ಲಿಂದ ಪೂರ್ಣ ಕುಂಭ ಮೆರವಣಿಗೆಯ ಮೂಲಕ ಸಮುದಾಯ ಭವನಕ್ಕೆ ಸ್ವಾಗತಿಸಲಾಗುವುದು ಈ ಎಲ್ಲಾ ಕಾರ್ಯಕ್ರಮಕ್ಕೆ ಎಲ್ಲಾ ಸಮಾಜ ಬಾಂದವರು ಆಗಮಿಸಿ ಸಹಕರಿಸುವಂತೆ ಕೋರಿದರು.
ಮಾಧ್ಯಮಗೋಷ್ಠಿಯಲ್ಲಿ ಸಂಘದ ತಾಲೂಕಾ ಪಂಚಾಯತ ಸದಸ್ಯ ಗಣಪಯ್ಯ ಗೌಡ, ಉಪಾದ್ಯಕ್ಷ ಮಾಭ್ಲಾ ಗೌಡ, ಪದಾದಿಕಾರಿಗಳಾದ ತಿಮ್ಮಪ್ಪ ಗೌಡ, ರಾಮಾ ಗೌಡ, ಮಹೇಶ ಗೌಡ, ಗಣಪತಿ ಗೌಡ, ನಾರಾಯಣ ಗೌಡ, ಮುಂತಾದವರು ಇದ್ದರು.

Leave a Comment