
ಹೊನ್ನಾವರದ ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಪ್ರಸಕ್ತ ಸಾಲಿನ ಬಹುಮಾ ವಿತರಣಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಠ್ಯ-ಪಠ್ಯೇತರ ಹಾಗೂ ಪಠ್ಯ ಪೂರಕ ಚಟುವಟಿಕೆಗಳಲ್ಲಿ ಮಾಡಿದ ಸಾಧನೆಗಾಗಿ ಪ್ರಶಸ್ತಿ ಪಡೆದುಕೊಂಡರು. ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತಿಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಶ್ರೀ ಲಕ್ಷ್ಮಣ ಜೆ. ಶ್ಯಾನಭಾಗ ಸರಾಫ್ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನಗಳು ಸಾಂಸ್ಕ್ರತಿಕ ಹಾಗೂ ಕ್ರೀಡಾ ಸಾಧನೆಗಾಗಿ ಬಹುಮಾನ ವಿತರಿಸಿದರು. ಭವಿಷ್ಯದ ಸುಂದರ ಬದುಕಿಗೆ ಸೂಕ್ತ ಅಡಿಪಾಯ ನಿರ್ಮಿಸಿಕೊಳ್ಳುವಂತೆ ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಕ್ಕಳಲ್ಲಿ ಹುದುಗಿರುವ ಸೃಜನಶೀಲತೆಯನ್ನು ಬೆಳೆಸಲು ಶಾಲಾ ಹಸ್ತಪತ್ರಿಕೆ ‘ಮರಿದುಂಬಿ’ ಪ್ರಕಟಗೊಳ್ಳುತ್ತಿದ್ದು ಅದನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಶ್ರೀ ಜಯಂತ ನಾಯಕ, ಶೀ ಸೂರಜ್ ಐಗಳ್ ಮತ್ತು ಲೋಕೇಶ್ ಚಂದಾವರಕರ್ ವಿವಿಧ ಬಹುಮಾನ ಪಟ್ಟಿಗಳನ್ನು ಸಾದರಪಡಿಸಿದರು.

ಶಾಲಾ ಮುಖ್ಯಾಧ್ಯಾಪಕರಾದ ಶ್ರೀ ವಿ.ಎಸ್. ಅವಧಾನಿ ಸ್ವಾಗತಿಸಿ 2019-20 ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಜಗದೀಶ ಪೈ ವಹಿಸಿದ್ದರು. ಶಾಲಾ ವಿಧ್ಯಾರ್ಥಿನಿಯರಾದ ಸಿಂಚನಾ ಮತ್ತು ಮನಸ್ವಿ ಸಂಗಡಿಗರು ಪ್ರಾರ್ಥಿಸಿ ಸ್ವಾಗತಗೀತೆ ಹಾಡಿದರು. ಶ್ರೀ ಅಶೋಕ ನಾಯ್ಕ ವಂದಿಸಿದರು. ಶ್ರೀ ರಾಘವೇಂದ್ರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

Leave a Comment