• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೊರೊನಾ ಆತಂಕ – ಹಳಿಯಾಳದಲ್ಲಿ ಭಾರಿ ಮುಂಜಾಗೃತಾ ಕ್ರಮ. ವಾರದ ಸಂತೆ ರದ್ದು, ಚೆಕ್ ಪೊಸ್ಟಗಳಲ್ಲಿ ಪ್ರವಾಸಿಗರ ತಪಾಸಣೆ.

March 21, 2020 by Yogaraj SK Leave a Comment

corona - Vishesha agatya krama kaigonda yela elakhegalu

ಹಳಿಯಾಳ:- ಚೆಕ್‍ಪೊಸ್ಟ್‍ಗಳಲ್ಲೇ ಪ್ರವಾಸಿಗರ ಪರಿಶೀಲನೆ, ಹಳಿಯಾಳ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯಿಂದ ಹಾಗೂ ಹಳಿಯಾಳ ಪುರಸಭೆಯಲ್ಲಿ, ಪುರಸಭೆಯಿಂದ ಕರೊನಾ ಕುರಿತು ಜಾಗೃತಿಗಾಗಿ ಹೆಲ್ಫ್ ಡೆಸ್ಕ್, ವಾರದ ಸಂತೆ ನಾಲ್ಕೂ ಕಡೆ ವಿಭಜಿಸಲು ತಿರ್ಮಾಣ ಇದು ಹಳಿಯಾಳದಲ್ಲಿ ತಾಲೂಕಾಡಳಿತ, ಆರೋಗ್ಯ ಇಲಾಖೆವರು ಹಾಗೂ ಪುರಸಭೆಯವರು ಕೈಗೊಂಡಿರುವ ಮುಂಜಾಗೃತ ಕ್ರಮಗಳು.
ಕೊರೊನಾ ಮಹಾಮಾರಿಗೆ ಜಗತ್ತೇ ಕಂಗಾಲಾಗಿದೆ. ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರು ದೇಶದಲ್ಲಿಯೂ ಸೊಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಕಠಿಣ ಮಾರ್ಗಸೂಚಿ ಹಾಗೂ ನಿರ್ದೇಶನಗಳನ್ನು ಸರ್ಕಾರಿ ಇಲಾಖೆಗಳಿಗೆ ದಿನಂಪ್ರತಿ ನೀಡುತ್ತಿದೆ. ಇನ್ನೂ ಜಿಲ್ಲಾಧಿಕಾರಿಗಳು ಪ್ರತಿದಿನ ಸಭೆ ನಡೆಸಿ ಸಾಕಷ್ಟು ನಿರ್ದೇಶನಗಳನ್ನು ತಾಲೂಕಾಡಳಿತಗಳಿಗೆ ನೀಡುತ್ತಿದ್ದಾರೆ.

watermarked 19 hly 5


ಈ ಬಗ್ಗೆ ಮಾಹಿತಿ ನೀಡಿರುವ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ರಾಜ್ಯ ಸರ್ಕಾರ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಟ್ಟು ನಿಟ್ಟಿನ ನಿರ್ದೇಶನದಂತೆ ಹಳಿಯಾಳ ತಾಲೂಕಿನಲ್ಲಿ ಕರೊನಾ ವ್ಯಾಪಿಸದಂತೆ ತಡೆಯಲು ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೇಲಿಂದ ಮೇಲೆ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನಗಳನ್ನು ನೀಡುತ್ತಿರುವ ಕಾರಣ ಹಳಿಯಾಳ-ದಾಂಡೇಲಿಯಲ್ಲಿ ವಿದೇಶಗಳಿಂದ ಬಂದವರ ಮೇಲೆ ಸಾಕಷ್ಟು ನಿಗಾ ಇಡಲಾಗಿದೆ ಅಲ್ಲದೇ ಅವರ ಆರೋಗ್ಯವನ್ನು ಮೇಲಿಂದ ಮೇಲೆ ತಪಾಸಣೆ ಮಾಡಲಾಗುತ್ತಿದೆ ಎಂದಿದ್ದಾರೆ.
ಹಳಿಯಾಳದ 14 ಹಜ್ ಯಾತ್ರಿಗಳ ಮೆಲೆ ನಿಗಾ ಇಡಲಾಗಿದ್ದು ಮನೆಯಿಂದ ಹೊರಗಡೆ ಬರದಂತೆ ಸೂಚಿಸಿದ್ದು ಇವರ ತಪಾಸಣೆ ಮಾಡಲಾಗಿದ್ದು ಇವರಲ್ಲಿ ರೋಗದ ಲಕ್ಷಣಗಳಲ್ಲಿ ಆದ್ದರಿಂದ ಹಳಿಯಾಳದ ಜನ ಭಯಪಡಬೇಕಿಲ್ಲ ಹಾಗೂ ಸುಳ್ಳುಸುದ್ದಿ ವದಂತಿಗಳನ್ನು ಹರಡಬಾರದು ಎಂದು ಗುಳಗುಳೆ ಮನವಿ ಮಾಡಿದರು.
ಬುಧವಾರದಿಂದಲೇ ಹಳಿಯಾಳದ ಧಾರವಾಡ ರಸ್ತೆಯ ಮಾವಿನಕೊಪ್ಪ ಚೆಕ್‍ಪೊಸ್ಟ್, ಕಾವಲವಾಡ ಚೆಕ್‍ಪೊಸ್ಟ್ ಹಾಗೂ ಹಳಿಯಾಳ ಗಡಿಯ ಅರ್ಲವಾಡ ಚೆಕ್‍ಪೊಸ್ಟ್‍ಗಳಲ್ಲಿ ಹೊರಗಡೆಯಿಂದ ಬರುವ ಪ್ರವಾಸಿಗರ ಪರಿಶೀಲನೆ ಮಾಡಲಾಗುತ್ತಿದ್ದು. ಸದ್ಯಕ್ಕೆ ಹಳಿಯಾಳ-ದಾಂಡೇಲಿಯ ಪ್ರವಾಸಿ ತಾಣಗಳು, ರೆಸಾರ್ಟಗಳಿಗೆ ಭೆಟಿ ನೀಡದಂತೆ ಎಚ್ಚರಿಕೆ ನೀಡಲಾಗುತ್ತಿದ್ದು. ಸರ್ಕಾರದ ನಿರ್ದೇಶನಗಳ ಬಗ್ಗೆಯೂ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಅವರು ತಿಳಿಸಿದರು.

 corona - Vishesha agatya krama kaigonda yela elakhegalu


ಇನ್ನೂ ಹಳಿಯಾಳ ತಹಶೀಲ್ದಾರ್ ಕಚೇರಿಗೂ ಅವಶ್ಯವಿರುವವರು ಮಾತ್ರ ಬರಬೇಕು ಹಾಗೂ ಸದ್ಯಕ್ಕೆ ಆಧಾರ್ ಹಾಗೂ ಪಡಿತರ ಚೀಟಿಗೆ ಬೆರಳಚ್ಚು ನೀಡುವುದನ್ನು ಮಾರ್ಚ 31 ರವರೆಗೆ ಸರ್ಕಾರದ ನಿರ್ದೇಶನದಂತೆ ಸ್ಥಗಿತಗೊಳಿಸಲಾಗಿದ್ದು ಜನತೆ ಸಹಕರಿಸಬೇಕೆಂದರು.
ಶುಕ್ರವಾರ ತಹಶೀಲ್ದಾರ್ ಕಚೇರಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು ಸಾರ್ವಜನೀಕರಿಗೆ ಮಾಧ್ಯಮದ ಮೂಲಕ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಲಾಗುವುದು ಎಲ್ಲರೂ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಮಾತನಾಡಿ ಹಳಿಯಾಳ-ದಾಂಡೇಲಿಯಲ್ಲಿ ವಿದೇಶದಿಂದ ಮರಳಿದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಈವರೆಗೆ 57 ಜನರ ಮಾಹಿತಿ ದೊರಕಿದ್ದು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು ಅವರಲ್ಲಿ ಯಾರಲ್ಲೂ ಕರೊನಾ ಲಕ್ಷಣಗಳು ಕಂಡು ಬಂದಿಲ್ಲ ಹಾಗೂ ಅವರು ಆರೋಗ್ಯದಿಂದ ಇದ್ದಾರೆ.
ಇನ್ನೂ 30 ಜನರು 48 ದಿನಗಳ ಆರೋಗ್ಯ ನಿಗಾವಹಿಸುವ ಅವಧಿಯನ್ನು ಪೂರೈಸಿದ್ದಾರೆ ಉಳಿದ 27 ಜನರ ಮೇಲೆ ನಿಗಾ ಇಡಲಾಗಿದ್ದು ಅವರಿಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ ಎಂದು ಕದಂ ಮಾಹಿತಿ ನೀಡಿದರು. ಅಲ್ಲದೇ ಪಟ್ಟಣದ ಬಸ್ ನಿಲ್ದಾಣದಲ್ಲಿಯೂ ಹೆಲ್ಪ್ ಡೆಸ್ಕ್ ತೆರೆಯಲಾಗಿದ್ದು ತಪಾಸಣೆ ನಡೆಸಲಾಗುತ್ತಿದೆ ಎಂದರು.
ಸಾವಿರಾರು ಜನರು ಸೇರುವ ಹಳಿಯಾಳದ ರವಿವಾರ ನಡೆಯುವ ವಾರದ ಸಂತೆಯನ್ನು ನಾಲ್ಕೂ ಕಡೆ ವಿಭಜಿಸಿ ನಡೆಸುವ ತಿರ್ಮಾಣ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಹಳಿಯಾಳದ ಧಾರವಾಡ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ(ಎಪಿಎಮ್‍ಸಿ) ಪ್ರಾಂಗಣದಲ್ಲಿ, ಹೊರಗಿನ ಗುತ್ತಿಗೇರಿ, ಕಿಲ್ಲಾ ಕೋಟೆ ಪ್ರದೇಶ ಹಾಗೂ ಯಲ್ಲಾಪುರ ರಸ್ತೆಯ ಆರ್‍ಸೆಟ್ ಸಂಸ್ಥೆಯ ಬಳಿ ಸಂತೆ ನಡೆಸಲು ಸೂಚಿಸಲಾಗಿದ್ದು ಇದಕ್ಕೆ ತಯಾರಿ ಕೂಡ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸದಂತೆ ಸೂಚನೆ ನೀಡಲಾಗಿದ್ದು ಹೆಚ್ಚು ಜನ ಸೇರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿ ನಿಗಾವಹಿಸಲಾಗುತ್ತಿದ್ದು ಪಟ್ಟಣದಲ್ಲಿ ಜಿಮ್‍ಗಳನ್ನು ಸ್ಥಗೀತಗೊಳಿಸಲು ಸೂಚಿಸಲಾಗಿದೆ. ಕೊರೊನಾ ಕುರಿತು ಜನರಲ್ಲಿ ಅರಿವು ಮೂಡಿಸಲು ಹಳಿಯಾಳ ಪುರಸಭೆಯಿಂದ ಹೆಲ್ಪ್ ಡೆಸ್ಕ್ ಸಹ ಬುಧವಾರದಿಂದ ಆರಂಭಿಸಲಾಗಿದೆ ಎಂದು ಮುಖ್ಯಾಧಿಕಾರಿ ಚೌಗಲೆ ತಿಳಿಸಿದರು.

IMG 20200316 WA0100

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಕೊರೊನಾ ಆತಂಕ, ಚೆಕ್ ಪೊಸ್ಟಗಳಲ್ಲಿ, ಜಗತ್ತೇ ಕಂಗಾಲಾಗಿದೆ, ಪಡಿತರ ಚೀಟಿಗೆ ಬೆರಳಚ್ಚು, ಪ್ರವಾಸಿಗರ ತಪಾಸಣೆ, ವಾರದ ಸಂತೆ ರದ್ದು, ವಿದೇಶದಿಂದ ಮರಳಿದವರ, ಸದ್ಯಕ್ಕೆ ಆಧಾರ್, ಹಳಿಯಾಳದಲ್ಲಿ ಭಾರಿ ಮುಂಜಾಗೃತಾ ಕ್ರಮ, ಹೆಲ್ಫ್ ಡೆಸ್ಕ್

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...