
ಹಳಿಯಾಳ ;
ಕೋವಿಡ್ -19 ವೈರಸ್ನಿಂದ ದೇಶವೆ ಲಾಕ್ಡೌನ್ ಆಗಿದ್ದು ಬಡವರು, ಕೂಲಿಕಾರರು, ದಿನಗೂಲಿಗಳು ರಿಕ್ಷಾ ಚಾಲಕರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು ಹಳಿಯಾಳ ಪಟ್ಟಣದಲ್ಲಿ ರಿಕ್ಷಾ ಚಾಲಕರಿಗೆ ಶಾಸಕ ಆರ್ವಿ ದೇಶಪಾಂಡೆರವರು ಅಲ್ಪ ಪ್ರಮಾಣದ ಆರ್ಥಿಕ ಸಹಾಯ ಮಾಡಿದ್ದಾರೆ.
ಪಟ್ಟಣದ ಒಟ್ಟು 49 ರಿಕ್ಷಾದವರಿಗೆ ತಲಾ 1 ಸಾವಿರ ರೂ ಮೊತ್ತವನ್ನು ನಗದು ರೂಪದಲ್ಲಿ ನೀಡಿದ್ದಾರೆ.
ಶ್ರೀ ರಾಮನವಮಿಯ ದಿನವಾದ ಗುರುವಾರ ಆಯಾ ರಿಕ್ಷಾದವರ ಪ್ರದೇಶಗಳಿಗೆ ತೆರಳಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸತ್ಯಜಿತ್ ಗಿರಿ ರವರು ನಗದು ಸಹಾಯವನ್ನು ಹಸ್ತಾಂತರಿಸಿದರು.
ಪುರಸಭೆ ಸದಸ್ಯೆ ಶಮೀಮಬಾನು ರೆಹಮಾನ ಜಂಬೂವಾಲೆ, ರಿಕ್ಷಾ ಚಾಲಕರ ಸಂಘದ ಅಬ್ದುಲ್ ಸತ್ತಾರ ಶೇಖ, ರವಿ ಚಲವಾದಿ, ರಿಯಾಜ ಅಹ್ಮದ್ ಸಾಂಗೆವಾಲೆ, ಮೌಲಾಲಿ ಮುಲ್ಲಾ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
Leave a Comment