• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮನಗುತಿಯಲ್ಲಿ ಶಿವಾಜಿ ಮಹಾರಾಜರ ಮೂರ್ತಿ ತೆರವಿಗೆ- ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಖಂಡನೆ

August 11, 2020 by Yogaraj SK Leave a Comment

ಹಳಿಯಾಳ:- ಬೆಳಗಾವಿ ಜಿಲ್ಲೆ ಹುಕ್ಕೇರಿಯ ಮನಗುತಿ ಗ್ರಾಮದಲ್ಲಿ ಪರವಾನಿಗೆ ಪಡೆದು ಸ್ಥಾಪಿಸಿದ್ದ ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ತೆರವುಗೊಳಿಸಿರುವುದನ್ನು ಹಳಿಯಾಳ ಮರಾಠಾ ಸಮಾಜ ಸೇರಿದಂತೆ ಎಲ್ಲ ಸಮಾಜದವರು ತೀವೃವಾಗಿ ಖಂಡಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.
ಪಟ್ಟಣದ ತಮ್ಮ ಕರ‍್ಯಾಲಯದಲ್ಲಿ ಸೋಮವಾರ ಸಾಯಂಕಾಲ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಛತ್ರಪತಿ ಶಿವಾಜಿ ಮಹಾರಾಜರು ಜಗತ್ತಿಗೆ ಅಜರಾಮರ ನಾಯಕರು, ಜಗತ್ತೀನ ಹಲವು ದೇಶಗಳು ಇಂದಿಗೂ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಪಾಲಿಸುತ್ತೀವೆ. ಅವರು ಕೇವಲ ಒಂದು ಮತ, ಪಂಥ, ಜಾತಿ ಅಥವಾ ಧರ್ಮಕ್ಕೆ ಸೀಮಿತರಾದವರಲ್ಲ. ಅವರು ಎಲ್ಲ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ರಾಜ್ಯಭಾರ ಮಾಡಿದ ಮಹಾನ್ ನಾಯಕರಾಗಿದ್ದಾರೆ.
ಇಂತಹ ಮಹಾನ್ ನಾಯಕರ ಪ್ರತಿಮೆಯನ್ನು ಮನಗುತಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಎಲ್ಲ ಪರವಾನಿಗೆ ಪಡೆದು ಪ್ರತಿಷ್ಠಾಪಿಸಲಾಗಿತ್ತು. ಆದರೇ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಮಾಜದಲ್ಲಿ ಒಡಕುಂಟು ಮಾಡುವ ಉದ್ದೇಶದಿಂದ ರಾತ್ರೋ ರಾತ್ರಿ ಮಹಾರಾಜರ ಮೂರ್ತಿಯನ್ನು ತೆರವುಗೊಳಿಸುವ ಮೂಲಕ ಅವರಿಗೆ ಅಗೌರವ ತೊರಿಸಿದ್ದಾರೆ. ಮಾತ್ರವಲ್ಲದೇ ಶಿವಾಜಿ ಆರಾಧಕರಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಕಿಡಿ ಕಾರಿದ ಘೊಟ್ನೇಕರ ಮುಂದಿನ ೨ ದಿನಗಳಲ್ಲಿ ಅದೇ ಸ್ಥಳದಲ್ಲಿ ಸಕಲ ಗೌರವಗಳೊಂದಿಗೆ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಬೇಕು. ಮೂರ್ತಿ ಪ್ರತಿಷ್ಠಾಪನೆ ಮಾಡದೆ ಇದ್ದರೇ ಮುಂದಿನ ಸೋಮವಾರ ಹಳಿಯಾಳದಲ್ಲಿ ಎಲ್ಲ ಸಮಜಾದವರು ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದುತ್ವದ ಬಗ್ಗೆಯೇ ಭಾಷಣ ಬಿಗಿಯುವ ಬಿಜೆಪಿ ಪಕ್ಷದವರು ರಾಷ್ಟçಪುರುಷ ಶಿವಾಜಿ ಮಹಾರಾಜರಿಗೆ ಅಗೌರವ ತೊರಿರುವ ಇಂತಹ ವಿಷಯದಲ್ಲಿ ಏಕೆ ಮೌನ ವಹಿಸಿದ್ದಾರೆ ? ಈ ಬಗ್ಗೆ ಬಿಜೆಪಿ ನಿಲುವೇನು ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದ ಘೊಟ್ನೇಕರ ಚುನಾವಣೆ ಬಂದಾಗ ಹಿಂದುತ್ವ, ಶೀವಾಜಿ ಮಹಾರಾಜರ ಹೆಸರನ್ನು ಬಳಸುವುದು ಆಮೇಲೆ ಅವರನ್ನು ಮರೆಯುವುದು ಇಂತಹ ಧೋರಣೆ ಮೊದಲು ಬಿಡಲಿ ಎಂದು ಕರೆ ನೀಡಿದರು.
ಹಳಿಯಾಳ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಾ ಸಮುದಾಯದವರೇ ವಾಸಿಸುತ್ತಿದ್ದು ಛತ್ರಪತಿ ಶಿವಾಜಿ ಮಹಾರಾಜರ ಮೇಲೆ ಅಪಾರ ಗೌರವ, ಶೃದ್ದೆ ಹೊಂದಿದ್ದು ಅವರ ವಿಷಯದಲ್ಲಿ ಇಂತಹ ಘಟನೆಗಳು ನಡೆದರೇ ನಾವು ಎಂದಿಗೂ ಸಹಿಸುವುದಿಲ್ಲ ಎಂದ ಮರಾಠಾ ಸಮಾಜದ ಹಿರಿಯ ಮುಖಂಡರು ಆಗಿರುವ ಘೊಟ್ನೇಕರ ಒಮ್ಮೆ ಮೂರ್ತಿಗಳು ಪ್ರತಿಷ್ಠಾಪನೆ ಆದ ಬಳಿಕ ಅದನ್ನು ತೆರವುಗೊಳಿಸುವುದು ನೋವಿನ ಸಂಗತಿ ಹಾಗೂ ಖಂಡನೀಯ ಕರ‍್ಯವಾಗಿದೆ ಎಂದರು.
ಹಳಿಯಾಳ ಕ್ಷೇತ್ರಾದ್ಯಂತ ಕಾನೂನಿನ ಪರವಾನಿಗೆ ಪಡೆದು ಈಗಾಗಲೇ ೩೮ ಶಿವಾಜಿ ಮೂರ್ತೀಗಳನ್ನು ಪ್ರತಿಷ್ಠಾಪಿಸಲಾಗಿದೆ. ಮುಂದೆಯು ಪ್ರತಿಷ್ಠಾಪಿಸಲಾಗುವುದು ಇದರೊಂದಿಗೆ ದಿ.ಅಬ್ದುಲ್ ಕಲಾಂ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿಆರ್ ಅಂಬೇಡ್ಕರ್ ಸೇರಿದಂತೆ ಅನೇಕರ ಪ್ರತಿಮೆಗಳನ್ನು ಸ್ಥಾಪಿಸುವ ಬಗ್ಗೆ ಯೋಚನೆ ಇದೆ ಎಂದರು.

20200810 182407 copy 1600x778


ಇನ್ನೂ ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭಿರವಾಗಿ ಪರಿಗಣಿಸಬೇಕು. ಈ ಬಗ್ಗೆ ತಕ್ಷಣ ಕ್ರಮಕ್ಕೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದ ಘೊಟ್ನೇಕರ ಮುಂದುವರಿದು ಮಾತನಾಡಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ೨೪ ಗಂಟೆಯೊಳಗೆ ಮರಾಠಾ ಸಮುದಾಯವನ್ನು ಪ್ರವರ್ಗ ೩ಬಿ ಯಿಂದ ೨ ಎ ಗೆ ಸೇರಿಸಲಾಗುವುದು ಎಂದು ಹಳಿಯಾಳದಲ್ಲಿ ಚುನಾವಣಾ ಭಾಷಣದಲ್ಲಿ ವಚನ(ಮಾತು) ನೀಡಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈವರೆಗೆ ಈ ಕೆಲಸ ಮಾಡಿಲ್ಲ. ಅವರು ಮತ್ತೇ ವಚನ ಭ್ರಷ್ಟರಾಗದೇ ಎಲ್ಲ ಕ್ಷೇತ್ರದಲ್ಲಿ ಹಿಂದೂಳಿದಿರುವ ಮರಾಠಾ ಸಮುದಾಯವನ್ನು ಕೂಡಲೇ ಪ್ರವರ್ಗ ೨ಎ ಗೆ ಮೀಸಲಾತಿ ನೀಡಬೇಕೆಂದು ಘೊಟ್ನೇಕರ ಆಗ್ರಹಿಸಿದರು.
ಸುದ್ದಿಗೊಷ್ಠಿಯಲ್ಲಿ ಪುರಸಭಾ ಸದಸ್ಯ ಸುರೇಶ ವಗ್ರಾಯಿ, ಅನಿಲ ಚವ್ವಾಣ, ಆರ್‌ಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಶಿವಪುತ್ರ ನುಚ್ಚಂಬ್ಲಿ, ಪ್ರಮುಖರಾದ ಸಂತೋಷ ಮಿರಾಶಿ, ಅಶೋಕ ಘೊಟ್ನೇಕರ, ಕೃಷ್ಣಾ ಶಹಾಪುಕರ, ಮುಸ್ಲಿಂ ಸಮುದಾಯದ ಗುಲಾಬಷಾ ಲತಿಫನವರ, ಅಬ್ದುಲ್ ದಲಾಲ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Karnataka News, Trending

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...