ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಇದರ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ ಜನ್ಮದಿನಾಚರಣೆಯ ಅಂಗವಾಗಿ ಅ.23 ರಿಂದ ನ.5ರವರೆಗೆ ಪ್ರವಾದಿ ಮುಹಮ್ಮದ್(ಸ) ಅವರ ಮಾನವತೆಯ ಮಾರ್ಗದರ್ಶಕ ಎಂಬ ಕೇಂದ್ರಿಯ ವಿಷಯದೊಂದಿಗೆ ಅಭಿಯಾನವನ್ನು ಆಯೋಜಿಸಿದ್ದು ಇದೇ ವಿಷಯದಲ್ಲಿ ಸಾರ್ವಜನಿಕರಿಗಾಗಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗುವುದು ಎಂದು ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಹಾಗೂ ಸಹಸಂಚಾಲಕ ಮೌಲಾನ ಎಸ್.ಎಂ ಸೈಯ್ಯದ್ ಝುಬೇರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧವು ಕೈಬರಹದಲ್ಲಿದ್ದು ಎ4 ಅಳತೆಯ ಹಾಳೆಯಲ್ಲಿ 6 ಪುಟಕ್ಕೆ ಮೀರದಂತಿರಬೇಕು. ಕನ್ನಡದಲ್ಲಿ ಬರೆದ ಪ್ರಬಂಧ ಬರಹವನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಆಸಕ್ತರು ತಮ್ಮ ಪಾಸ್ಪೋರ್ಟ ಸೈಜ್ ಅಳತೆಯ ಭಾವಚಿತ್ರ, ಮೊಬೈಲ್ ಸಂಖ್ಯೆ, ಈಮೇಲ್ ವಿಳಾಸದೊಂದಿಗೆ ಅ.31ರ ಒಳಗೆ ಸಂಚಾಲಕರು, ಸೀರತ್ ಪ್ರಬಂಧ ಸ್ಪರ್ಧೆ, 321 ದಾವತ್ ಸೆಂಟರ್, ಸುಲ್ತಾನ್ ಸ್ಟ್ರೀಟ್, ಭಟ್ಕಳ ಇಲ್ಲಿಗೆ ತಲುಪುವಂತೆ ಅಂಚೆ ಯಾ ಕೋರಿಯರ್ ಮೂಲಕ ಕಳುಹಿಸಬೇಕು.
ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸು, ಉದ್ಯೋಗದ ಮಿತಿ ಇರುವುದಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ವ್ಯಾಪರಸ್ಥರು, ಸಾರ್ವಜನಿಕ ಸ್ತ್ರೀ ಮತ್ತು ಪುರುಷರು ಭಾಗಹಿಸಬಹುದಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ ರೂ.5000, ದ್ವಿತೀಯ ರೂ.3000, ತೃತೀಯ ರೂ.2000 ಹಾಗೂ ತಲಾ ಒಂದು ಸಾವಿರ ರೂಪಾಯಿಗಳ 3 ಸಮಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9886455416ಗೆ ಸಂಪರ್ಕಿಸಬಹುದು ಎಂದೂ ತಿಳಿಸಲಾಗಿದೆ.
Leave a Comment