ಹೊನ್ನಾವರ : ತಾಲೂಕಿನ ಶರಾವತಿ ನದಿಯ ನಾಲ್ಕು ದಿಕ್ಕಿನಿಂದ ಸುತ್ತುವರೆದಿರುವ ದ್ವೀಪವಾದ ಮೊಳ್ಳೋಡ್ ಗ್ರಾಮಸ್ಥರು ಮರಳು ಗಣಿಗಾರಿಕೆಯಿಂದ ಈ ಹಿಂದಿನಿಂದಲೂ ಸಮಸ್ಯೆ ಅನುಭವಿಸುತ್ತಿದ್ದರು. ಮೊಳ್ಕೋಡ್ ಗ್ರಾಮದ ಸಮೀಪದ ನದಿ ತೀರದ ಪ್ರದೇಶವಾದ ತನ್ಮಡಗಿ, ಹೊಸಪಟ್ಟಣ, ಪಡುಕುಳಿ, ಮಾಳ್ಕೋಡ್, ಬಳಕೂರು ಭಾಗದಲ್ಲಿ ಸತತವಾಗಿ ಮರಳು ತೆಗೆಯುದರಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಮನೆ ಗೋಡೆ ಕುಸಿಯುದೋ ಎನ್ನುವ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ನದಿಯ ದಂಡೆಯಲ್ಲಿ ನಿರ್ಮಿಸಿದ ತಡೆಗೋಡೆಗಳು ಕುಸಿದು ನೀರುಪಾಲಾಗಿದೆ. ಇಂತಹ ಸಮಸ್ಯೆಗಳು ಪ್ರತಿವರ್ಷ ಎದುರಿಸುತ್ತಿದ್ದು, ಜೀವನ ನಡೆಸುತ್ತಿದ್ದು, ಮರಳು ತೆಗೆಯಲು ಜಿಪಿಎಸ್ ಸ್ಥಳ ಬದಲಾವಣೆ ಮಾಡಬೇಕೆಂದು ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಪರ್ಸಿ ಅಂತೋನ್ ಡಯಸ್, ಸುಮಿತ್ರಾ ಅಂಬಿಗ, ನಾಗವೇಣ ಗೌಡ, ಹನುಮಂತ ಗೌಡ, ಗೋಪಾಲ ಶೇಟ್ಟಿ, ಆನಂದ ಶೆಟ್ಟಿ, ಮಾರುತಿ ನಾಯ್ಕ, ಭಾಸ್ಕರ್ ನಾಯ್ಕ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
Leave a Comment