ವಿಜಯದಶಮಿ ಪ್ರಯುಕ್ತ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಹಾಸತಿ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
ನವರಾತ್ರಿಯ ನಿಮಿತ್ತ ಪ್ರತಿದಿನ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ವಿಜಯದಶಮಿ ಪ್ರಯುಕ್ತ ಶ್ರೀ ಯಕ್ಷಿ ಮತ್ತು ಮಹಾಸತಿ ದೇವಿಗೆ ವಿಷೇಶ ಹೂವಿನ ಅಲಂಕಾರ, ಪ್ರಸಾದ ನೈವೇದ್ಯ ಮಾಡಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು. ಭಕ್ತಾದಿಗಳು ಶ್ರೀ ಮಹಾಸತಿ ದೇವಿಯ ದರ್ಶನ ಪಡೆದು ಕೊರೊನಾ ಮಹಾಮಾರಿ ಕಾಯಿಲೆ ದೂರವಾಗಿ ಜನರಿಗೆ ಒದಗಿಬಂದಂತಹ ಕಷ್ಟಗಳೆಲ್ಲಾ ಪರಿಹಾರವಾಗಿ ಸುಖ-ಶಾಂತಿ ಲಭಿಸಬೇಕು ಎಂದು ಭಕ್ತರು ಶ್ರೀದೇವರಲ್ಲಿ ಪ್ರಾರ್ಥಿಸಿಕೊಂಡರು. ದೇವಾಲಯದ ಅರ್ಚಕ ಗಣೇಶ ಗೌಡ ಅವರು ಪ್ರಾರ್ಥನೆ ಸಲ್ಲಿಸಿದರು. ಊರಿನ ಹಿರಿಯ-ಕಿರಿಯರು, ರೈತಬಾಂಧವರು, ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು ಪಾಲ್ಗೊಂಡಿದ್ದರು.
Leave a Comment