• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಂತೆ ಕೆಲಸ ನಿರ್ವಹಿಸಿ- ಮಾತೆ ನಿರ್ಮಲಾನಂದದೇವಿ

October 27, 2020 by Yogaraj SK Leave a Comment

ಹಳಿಯಾಳ:- ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾಗಿ ಹಳಿಯಾಳದ ಸಮಾಜ ಸೇವಕ, ಹಿಂದೂ ಮೂಖಂಡ ರಾಜೂ ಬಾಬುರಾವ್ ಧೂಳಿ ಅವರನ್ನು ಆಯ್ಕೆ ಮಾಡಿರುವುದು ಹಳಿಯಾಳ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಾಲೂಕಿನ ಯಡೋಗಾ ಗ್ರಾಮದ ಸಿದ್ದಾರೂಢಮಠದ ಮಾತೆ ನಿರ್ಮಲಾನಂದದೇವಿ ಅಭಿಪ್ರಾಯಪಟ್ಟರು.

watermarked 26 hly 7


ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ರಾಜೂ ಬಿ ಧೂಳಿ ಅವರಿಗೆ ಪಟ್ಟಣದ ಬಾಬುರಾವ್ ಸಂಕೀರ್ಣದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಧರ್ಮದ ಕೆಲಸದಲ್ಲಿ ಸದಾ ತೊಡಗಿಸಿಕೊಂಡವರು ಎಲ್ಲಿಯಾದರೂ ಸನ್ಮಾನಕ್ಕೆ ಅರ್ಹರು. ರಾಜು ಧೂಳಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ರಾಜ್ಯಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಅವರು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿ, ಧರ್ಮ, ರಾಷ್ಟ್ರ ಸೇವೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಳಿಯಾಳದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ಯಲಿ ಎಂದು ಮಾತೆ ಹಾರೈಸಿದರು.
ಗೋಸಾವಿ ಸಮಾಜದ ಮುಖಂಡ ಸತ್ಯಜೀತ ಗಿರಿ ಮಾತನಾಡಿ ರಾಜು ಧೂಳಿ ಅವರು ರಾಜ್ಯಾಧ್ಯಕ್ಷ ಹುದ್ದೇಗೆ ಅರ್ಹರಿದ್ದು ಅವರು ಹಳಿಯಾಳದಲ್ಲಿ ಎಂದೂ ಜಾತಿ ರಾಜಕಾರಣ, ಧರ್ಮಗಳ ನಡುವೆ ಒಡುಕು ಮೂಡಿಸುವ ಕೆಲಸ ಮಾಡಿಲ್ಲ ಬದಲಾಗಿ ಎಲ್ಲರನ್ನೂ ಒಂದು ಮಾಡುವ ಕೆಲಸ ಮಾಡಿದ್ದು ಅವರ ಸೇವೆ ಅಭಿನಂದನಾರ್ಹವಾಗಿದೆ ಎಂದರು.


ಮರಾಠಾ ಸಮಾಜದ ಮುಖಂಡ ಯಲ್ಲಪ್ಪಾ ಮಾಲವನಕರ ಮಾತನಾಡಿ ರಾಜಕೀಯ ಭವಿಷ್ಯ ಲೆಕ್ಕಿಸದೆ ಧರ್ಮ ಸೇವೆ ಮಾಡಿದ ಧೂಳಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ದೊರಕುವ ಮೂಲಕ ಉತ್ತಮ ಗೌರವ ದೊರತಿದೆ ಎಂದರು.
ನಿವೃತ್ತ ಉಪನ್ಯಾಸಕ ಎಸ್‍ಜಿ ಕಡೆಮನಿ ಮಾತನಾಡಿ ಭಾರತೀಯ ಸಂಸ್ಕøತಿ,ಪರಂಪರೆ ಜಗತ್ತಿನಲ್ಲೇ ಉತ್ಕøಷ್ಟತೆ ಹೊಂದಿದ್ದು ಇದನ್ನು ಉಳಿಸಿ ಬೆಳೆಸಬೇಕಾದ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ರಾಜಕಾರಣಿ ಎಸ್‍ಕೆ ಗೌಡಾ ಮಾತನಾಡಿ ರಾಜೂ ಧೂಳಿ ಅವರು ಧರ್ಮ ಸೇವೆ ಸೇರಿದಂತೆ ರಾಜಕೀಯದಲ್ಲೂ ಅಪಾರ ಸೇವೆ ಸಲ್ಲಿಸಿದ್ದು ಇಂದು ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ದೊರೆತಿರುವುದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಧರ್ಮ, ರಾಷ್ಟ್ರ ಸೇವೆಯಲ್ಲಿ ತೊಡಗಲಿ, ಧರ್ಮ ಸಂಘಟನೆ ಮಾಡಲಿ ಎಂದು ಕರೆ ನೀಡಿದರು.
ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕದ ನೂತನ ರಾಜ್ಯಾಧ್ಯಕ್ಷ ರಾಜೂ ಧೂಳಿ ಮಾತನಾಡಿ ಬಿಜೆಪಿ ಪಕ್ಷ ಸೇರಿದಂತೆ ಹಲವು ಸಂಘ,ಸಂಸ್ಥೆಗಳಲ್ಲಿ ತನಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಯಾವುದೇ ಕಪ್ಪು ಚುಕ್ಕೆಗಳಿಲ್ಲದಂತೆ ನಿರ್ವಹಿಸಿದ್ದೇನೆ. ತಾವು ಯಾವುದೇ ಕೆಲಸವನ್ನು ಪಕ್ಷ ನೋಡಿ ಅಳೆಯುವುದಿಲ್ಲ ತನ್ನ ಬಳಿ ಬರುವ ಎಲ್ಲ ವರ್ಗದ ಜನರ ಕೆಲಸವನ್ನು ನ್ಯಾಯಯುತವಾಗಿ ಮಾಡಿಕೊಟ್ಟಿದ್ದೇನೆ. ಕೇವಲ ಕರ್ಮ ಮಾಡುವುದು ನನ್ನ ಕೆಲಸ ಫಲ ದೇವರ ಇಚ್ಚೆ ಎಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ತನಗೆ ರಾಜ್ಯಾಧ್ಯಕ್ಷ ಹುದ್ದೇ ದೊರೆತಿರುವುದು ಅತ್ಯಂತ ಜವಾಬ್ದಾರಿಯುತವಾಗಿ ಹುದ್ದೆಯನ್ನು ನಿರ್ವಹಿಸುವುದಾಗಿ ಭರವಸೆ ನೀಡಿದರು.
ದಸಂಸ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೊಳ್ಳಿ, ನಿವೃತ್ತ ಉಪನ್ಯಾಸಕ ಎಸ್‍ಜಿ ಕಡೆಮನಿ, ವಿವಿಧ ಸಮಾಜ ಮತ್ತು ಸಂಘಟನೆಯ ಮುಖಂಡರಾದ ಜಿಡಿ ಗಂಗಾಧರ, ಎಮ್‍ಬಿ ತೊರಣಗಟ್ಟಿ, ಅಶೋಕ ಪಾಟೀಲ್, ಖಯ್ಯಾಮ ಮುಗದ ಮಾತನಾಡಿದರು. ಪಟ್ಟಣದ ಹಲವಾರು ಸಂಘ-ಸಂಸ್ಥೆ, ವ್ಯಾಪಾರಸ್ಥರು ಇತರರಿಂದ ರಾಜೂ ಧೂಳಿ ಅವರಿಗೆ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಕರ್ಲಕಟ್ಟಾ ಶನಿಧಾಮದ ಬಾಬಾ ಮೇಘನಾಥಜಿ ಮಹಾರಾಜ, ಹಿಂದೂ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹರಿ ನಾಯರ್, ಪ್ರಮುಖರಾದ ಬಸವರಾಜ ಬೆಂಡಿಗೇರಿಮಠ,ನಾರಾಯಣ, ರಫಿಕ ಬಸರಿಕಟ್ಟಿ ಇದ್ದರು. ಕಾರ್ಯಕ್ರಮವನ್ನು ಶ್ರೀನಿವಾಸ ದೊಡ್ಮನಿ, ಪ್ರಸಾದ ಹುನ್ಸವಾಡಕರ, ಪ್ರಕಾಶ ಕಮ್ಮಾರ, ಅನಂತ ಲಾಡ, ರಾಘವೇಂದ್ರ ಆನೆಗುಂದಿ, ಪ್ರಕಾಶ ಗಿರಿ, ರಾಘವೇಂದ್ರ ನಾಯ್ಕ, ಅಶೋಕ ಬೆಳಗಾಂವಕರ ಇತರರು ನಿರ್ವಹಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: President of the Karnataka State of the Mahabharata, Proud of the people of Halilaya, Raju Dhulikaryavaikhari, Vaikhari, ಮಹಾಸಭಾದ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷ, ಯಡೋಗಾ ಗ್ರಾಮದ, ರಾಜು ಧೂಳಿಕಾರ್ಯವೈಖರಿ, ವೈಖರಿಯನ್ನು ಮೆಚ್ಚಿ ರಾಜ್ಯಧ್ಯಕ್ಷ, ಸನ್ಮಾನಕ್ಕೆ ಅರ್ಹರು, ಸಿದ್ದಾರೂಢಮಠ, ಹಳಿಯಾಳ ಜನತೆಗೆ ಹೆಮ್ಮೆಯ ವಿಷಯ, ಹಿಂದೂ ಮೂಖಂಡ ರಾಜೂ ಬಾಬುರಾವ್ ಧೂಳಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...