
ಹಳಿಯಾಳ:- ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ
ಮತ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ
ಆರ್ ಎಂ ಕುಬೇರಪ್ಪ ಅವರ ಗೆಲುವು ನಿಶ್ಚಿತ ಎಂದು ಹಳಿಯಾಳ
ಶಾಸಕ ಆರ್ ವಿ ದೇಶಪಾಂಡೆ ಭವಿಷ್ಯ ನುಡಿದರು.
ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆಯ
ಹಿನ್ನೆಲೆ ಹಳಿಯಾಳದ ಮಿನಿ ವಿಧಾನಸೌಧದಲ್ಲಿಯ ತಹಶೀಲ್ದಾರ್
ಕಚೇರಿಯಲ್ಲಿ ತೆರೆಯಲಾದ ಮತಗಟ್ಟೆ ಸಂಖ್ಯೆ 110 ರಲ್ಲಿ
ತಮ್ಮ ಹಕ್ಕನ್ನು ಚಲಾಯಿಸಿ ಬಳಿಕ ಮಾಧ್ಯಮದವರೊಂದಿಗೆ
ಮಾತನಾಡಿದ ಅವರು ಕಳೆದ 2 ವರ್ಷಗಳಿಂದ ಕುಬೆರಪ್ಪ
ಅವರು ಪದವಿಧರರ ಹಲವು ಸಮಸ್ಯೆಗಳಿಗೆ ಸ್ಪಂದಿಸುವ
ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಮತದಾರರು ಸಹಿತ ಈ ಬಾರಿ
ಬದಲಾವಣೆ ಬಯಸಿದ್ದು ಕುಬೇರಪ್ಪ ಗೆಲುವು ನಿಶ್ಚಿತ ಎಂದರು.
ಪ್ರತಿಯೊಂದು ಚುನಾವಣೆಯಲ್ಲಿ ಜನರು ಮತದಾರರ
ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಬೇಕು ಹಾಗೂ
ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿನಂತಿಸಿದ
ದೇಶಪಾಂಡೆ ಅವರು ಈಗಾಗಲೇ ತಾವು ಎಲ್ಲೆಡೆ ಪ್ರಚಾರಕ್ಕಾಗಿ
ಸುತ್ತಾಡಿದ್ದು ಕುಬೇರಪ್ಪ ಪರ ಉತ್ತಮ ಒಲವನ್ನು
ಪ್ರಜ್ಞಾವಂತ ಮತದಾರರು ವ್ಯಕ್ತಪಡಿಸಿದ್ದರಿಂದ ಈ ಬಾರಿ ಪಶ್ಚಿಮ
ಮತದಾರರ ಕ್ಷೇತ್ರ ಕಾಂಗ್ರೇಸ್ ಪಾಲಾಗಲಿದೆ ಎಂದರು.

Leave a Comment