ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಪ್ರವಾದಿ ಮುಹಮ್ಮದ್(ಸ) ಜನ್ಮದಿನ ಪ್ರಯುಕ್ತ ಪ್ರಕಟಿಸಿರುವ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಖಾಸಗಿ ಪತ್ರಿಕೆಯ ವಿಶೇಷ ಪುಟವನ್ನು ಶಮ್ಸುದ್ದೀನ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯದ್ಯಂತ ಅ.23 ರಿಂದ ನ.5 ವರೆಗೆ ಪ್ರವಾದಿಯನ್ನು ಮುಹಮ್ಮದ್ ರನ್ನು ಪರಿಚಯಿಸಲು ಸೀರತ್ ಅಭಿಯಾನ ಹಮ್ಮಿಕೊಂಡಿದೆ. ಅಭಿಯಾನದ ಮೂಲಕ ಪ್ರವಾದಿ ಮುಹಮ್ಮದರು ಮನುಷ್ಯ ಕಲ್ಯಾಣಕ್ಕಾಗಿ ಮಾಡಿದ ಕೆಲಸಗಳನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಅಲ್ಲದೆ ಅವರ ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದರು. ಇಂದಿನ ಪ್ರಜಾವಾಣಿಯಲ್ಲಿ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು ತಮ್ಮ ಲೇಖನಿಯ ಮೂಲಕ ಪೈಗಂಬರರ ಬದುಕು ಸಂದೇಶಗಳ ಕುರಿತು ಅರ್ಥಪೂರ್ಣ ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ರ ಜೀವನ ಮತ್ತು ಸಂದೇಶ ಕುರಿತ ಮಾಹಿತಿ ಪುಸ್ತಕಗಳನ್ನು ಜನರಿಗೆ ವಿತರಿಸಿ ಸಿಹಿ ಹಂಚುವುದರ ಮೂಲಕ ಮಿಲಾದುನ್ನಬಿ ಸಂದೇಶವನ್ನು ಸಾರಿದರು.
Leave a Comment