ಯಲ್ಲಾಪುರ:
ಪಟ್ಟಣದ ಐ.ಬಿ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ವಿಷನ್ ಜನ ಪ್ರದೇಶಾಭಿವೃದ್ಧಿ ಸಂಸ್ಥಾನ ಮತ್ತು ರಂಗ ಸಹ್ಯಾದ್ರಿ ಬಳಗದ ವತಿಯಿಂದ ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ ಧ್ವಜಾರೋಹಣ ನೆರವೇರಿಸಿದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್ ಗಾಂವ್ಕರ್, ಪ.ಪಂ ಸದಸ್ಯರಾದ ಸತೀಶ ನಾಯ್ಕ, ಪ್ರಶಾಂತ ತಳವಾರ, ವಿಷನ್ ಬಳಗದ ಕೇಬಲ್ ನಾಗೇಶ, ಅಕ್ಷತಾ ಸತೀಶ ನಾಯ್ಕ, ಮನೋಜ ಪಾಟೀಲ್, ಪ್ರವೀಣ ಇನಾಮ್ದಾರ್, ಶರೀಫ್ ಹಾರ್ಸಿಕಟ್ಟಾ, ಶ್ಯಾಮಲಾ ನಾಗೇಶ್, ಸ್ನೇಹಾ ನಾಗೇಶ್, ಶಶಾಂಕ ನಾಗೇಶ್, ಜಿ.ಎಂ.ತಾಂಡುರಾಯನ್ ಇತರರಿದ್ದರು.
ನಂತರ ರಂಗ ಸಹ್ಯಾದ್ರಿ ಅಡಿಯಲ್ಲಿ ಜರುಗುತ್ತಿರುವ ಸ್ಕೇಟಿಂಗ್ ಶಿಬಿರದ ಮಕ್ಕಳಿಂದ ಮಾಸ್ಕ್ ಜಾಗೃತಿ ಜಾಥಾ ನಡೆಯಿತು. ಇಪ್ಪತ್ತಕ್ಕೂ ಅಧಿಕ ಮಕ್ಕಳು ಸ್ಕೇಟಿಂಗ್ ಮಾಡುತ್ತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಾಸ್ಕ್ ಧರಿಸುವ ಕುರಿತು ಜನರಲ್ಲಿ ಅರಿವು ಮೂಡಿಸಿದರು.
Leave a Comment