ಭಟ್ಕಳ : ತಾಲೂಕಿನ ಯಲ್ವಡಿಕವೂರ್ ಪಂಚಾಯತ್ ವ್ಯಾಪ್ತಿಯ ಸರ್ಪನಕಟ್ಟೆ ಭಾಗದ ಜನತೆಯ ಮತ್ತು ಮೀನು ಮಾರಾಟಗಾರ ಮಹಿಳೆಯರ ಬಹುದಿನಗಳ ಬೇಡಿಕೆಯಾದ ನೂತನ ಸುಸಜ್ಜಿತ ಮೀನುಮಾರುಕಟ್ಟೆ ನಿರ್ಮಾಣ ಕಾರ್ಯಕ್ಕೆ ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಸರ್ಪನಕಟ್ಟೆ ಭಾಗದಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಇರುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಸುಮಾರು 20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೀನುಮಾರುಕಟ್ಟೆ ನಿರ್ಮಾಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಿಯಾಗಿದ್ದು. ಇಂದು ಅದರ ಗುದ್ದಲಿ ಪೂಜೆಯನ್ನು ಸರ್ಪನಕಟ್ಟೆಯ ಸಾರ್ವಜನಿಕರು ಹಾಗೂ ಮೀನು ಮಾರಾಟ ಮಾಡುವ ಮಹಿಳೆಯರ ಸಮ್ಮುಖದಲ್ಲೂ ನೆರವೇರಿಸಿದ್ದು .ಇನ್ನು ಒಂದು ವರ್ಷದೊಳಗಾಗಿ ಕಟ್ಟಡ ನಿರ್ಮಾಣಗೊಂಡು ಮೀನು ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿ ಕೊಡಲಾಗುವುದು ಎಂದರು
ಅದೇ ರೀತಿ ಈ ಭಾಗದಲ್ಲಿ ಬಹುದಿನದ ಬೇಡಿಕೆಯಂತೆ ಅನೇಕ ಕಾಮಗಾರಿಗಳು ನೆರವೇರಿದ್ದು .ಪ್ರಮುಖವಾಗಿ ಮೀನು ಮಾರುಕಟ್ಟೆ ಹಾಗೂ ಹುಲ್ಮುಡಿ ರಸ್ತೆ ಕಾಮಗಾರಿ ಈಗಾಲೇ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು .ನನ್ನ ಕ್ಷೇತ್ರದಲ್ಲಿ ಸಂಪೂರ್ಣ ಅಭಿವೃದ್ಧಿ ಕಾಮಗಾರಿ ನೆರವೇರಿಸುದಾಗಿದ್ದು. ಪ್ರಮುಖವಾಗಿ ರಸ್ತೆ ಹಾಗೂ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡುವ ಬರವಸೆ ನೀಡಿದ್ದು ಮುಂದಿನ ದಿನಗಳಲ್ಲಿ ಭಟ್ಕಳ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಕಾಮಗಾರಿ ನೆರವೇರಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲುಕಾಧ್ಯಕ್ಷ ಸುಬ್ರಾಯ ದೇವಾಡಿಗ, ಕೆ.ಕೆ.ಮೋಹನ ನಾಯ್ಕ, ಲಕ್ಷ್ಮಿ ನಾರಾಯಣ ನಾಯ್ಕ, ಮಹೇಂದ್ರ ನಾಯ್ಕ, ಸಂತೋಷ ನಾಯ್ಕ, ವೆಂಕಟೇಶ ನಾಯ್ಕ ಮೂಡಭಟ್ಕಳ ಸೇರಿದಂತೆ ಬಿಜೆಪಿ ಪ್ರಮುಖರು, ಅಲ್ಲಿನ ಸ್ಥಳೀಯ ಮೀನು ಮಹಿಳಾ ವ್ಯಾಪಾರಿಗಳು ಇದ್ದರು.
Leave a Comment