ಹೊನ್ನಾವರ ಜ. 29 : 2018ರಲ್ಲಿ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಾಯಿತ ಆಸ್ಪತ್ರೆಯಾಗಿರುವ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಈ ಯೋಜನೆಯಲ್ಲಿ ಈವರೆಗೆ 15ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಇವರಲ್ಲಿ 13ಸಾವಿರ ಜನ ಬಿಪಿಎಲ್ ಕಾರ್ಡುದಾರರಾಗಿದ್ದು ಪೂರ್ತಿ ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದು ಗಣರಾಜ್ಯೋತ್ಸವದ ದಿನ ಆಸ್ಪತ್ರೆಗೆ ಪ್ರಮಾಣಪತ್ರ ಲಭಿಸಿದೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 1043 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು 400ಜನ ಐಸಿಯುದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೃದಯ 3000, ಹೃದಯ ಶಸ್ತ್ರಚಿಕಿತ್ಸೆ 555, ನರಶಸ್ತ್ರಚಿಕಿತ್ಸೆ 1055, ಮೂಳೆಶಸ್ತ್ರಚಿಕಿತ್ಸೆ 905, ಮಕ್ಕಳ ಹೃದಯ ಚಿಕಿತ್ಸೆ 140, ನವಜಾತ 415, ಮಕ್ಕಳು 535, ಕ್ಯಾನ್ಸರ್ 900, ಕ್ಯಾನ್ಸರ್ ಪೀಡಿತ ಮಕ್ಕಳು 140, ಈ ರೋಗಿಗಳು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ. ಈ ಅನುಕರಣೀಯ ಗಣನೀಯ ಸೇವೆಗಾಗಿ ಆಸ್ಪತ್ರೆಯ ಪರವಾಗಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಜಿಲ್ಲಾ ಉಸ್ತುವಾರಿ, ಮೀನುಗಾರಿಕೆ ಮತ್ತು ಬಂದರು ಸಚಿವ ಅಂಗರಾ ಎಸ್. ಇವರಿಂದ ಪ್ರಶಸ್ತಿ ಪಡೆದಿದ್ದಾರೆ. 2019ರಲ್ಲಿ ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ನಡೆದ ಆಯುಷ್ ಭಾರತ ಪ್ರಥಮ ವರ್ಷದ ವಾರ್ಷಿಕೋತ್ಸವದಲ್ಲಿ ಮಣಿಪಾಲ ಆಸ್ಪತ್ರೆಯವರನ್ನು ದೆಹಲಿಗೆ ಆಹ್ವಾನಿಸಿ ಗೌರವಿಸಲಾಗಿತ್ತು ಎಂದು ಅಧೀಕ್ಷಕರು ಪ್ರಕಟಿಸಿದ್ದಾರೆ.
Leave a Comment