• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರ್ಥಿಕ ವರ್ಷ 2022 ರಲ್ಲಿ 16.5 ಲಕ್ಷ ರೂ ಕೃಷಿ ಸಾಲ ಗುರಿ ಹೆಚ್ಚಳ

February 2, 2021 by Sachin Hegde Leave a Comment

ಕೃಷಿ ಕ್ಷೇತ್ರವನ್ನು ಬೆಂಬಲಿಸುವ ಹಂತಗಳಲ್ಲಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಕೇಂದ್ರ ಆಯವ್ಯಯ 2021-22 ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸುವಾಗ ಮಹತ್ವಾಕಾಂಕ್ಷೆಯ ಭಾರತದ ಸಮಗ್ರ ಅಭಿವೃದ್ಧಿಯ ಅಂಗವಾಗಿ ಕೃಷಿ ಕ್ಷೇತ್ರಕ್ಕೆ 9 ಕ್ರಮಗಳನ್ನು ಘೋಷಿಸಿದರು.

ಕೃಷಿ ಸಾಲ ಗುರಿ

ಸ್ವಾಮಿತ್ವ ಯೋಜನೆ

ಶ್ರೀಮತಿ ನಿರ್ಮಲಾ ಸೀತಾರಾಮನ್ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಾಮಿತ್ವ ಯೋಜನೆಯನ್ನು ವಿಸ್ತರಿಸುವ ಕುರಿತು ಪ್ರಸ್ತಾಪಿಸಿದರು. ಈ ವರ್ಷದ ಆರಂಭದಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಳ್ಳಿಗಳಲ್ಲಿ ಆಸ್ತಿ ಮಾಲೀಕತ್ವದಲ್ಲಿ ಪಾರದರ್ಶಕತೆ ತರಲು ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದ್ದರು. ಯೋಜನೆಯಡಿ, ಹಳ್ಳಿಗಳಲ್ಲಿನ ಆಸ್ತಿ ಮಾಲೀಕರಿಗೆ ಹಕ್ಕುಗಳ ದಾಖಲೆಯನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೆ, 1,241 ಹಳ್ಳಿಗಳಲ್ಲಿ ಸುಮಾರು 1.80 ಲಕ್ಷ ಆಸ್ತಿ ಮಾಲೀಕರಿಗೆ ಕಾರ್ಡ್‌ಗಳನ್ನು ನೀಡಲಾಗಿದೆ.
ಹಣಕಾಸು ವರ್ಷ 2022 ರಲ್ಲಿ ಕೃಷಿ ಸಾಲದ ಗುರಿಯನ್ನು 16.5 ಲಕ್ಷ ರೂ.ಗೆ ಹೆಚ್ಚಿಸಲಾಗುವುದು

ರೈತರಿಗೆ ಸಮರ್ಪಕ ರೀತಿಯಲ್ಲಿ ಸಾಲ ನೀಡಲು ಹಣಕಾಸು ಸಚಿವರು ಕೃಷಿ ಸಾಲ ಗುರಿಯನ್ನು ಹಣಕಾಸು ವರ್ಷ 22 ರಲ್ಲಿ 16.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆಗೆ ಹೆಚ್ಚಿನ ಸಾಲದ ಹರಿವನ್ನು ಖಾತ್ರಿಪಡಿಸುವತ್ತ ಸರ್ಕಾರ ಗಮನ ಹರಿಸಲಿದೆ ಎಂದು ಶ್ರೀಮತಿ. ಸೀತಾರಾಮನ್ ಹೇಳಿದರು.

ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿ ಶೇ.33ಕ್ಕೆ ಏರಿಕೆ

ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಗೆ ಹಂಚಿಕೆಯನ್ನು ರೂ 30,000 ಕೋಟಿಯಿಂದ ರೂ 40,000 ಕೋಟಿಗೆ ಹೆಚ್ಚಿಸಲಾಗಿದೆ ಎಂದು ವಿತ್ತ ಸಚಿವರು ಘೋಷಿಸಿದರು.

ಹನಿ ನೀರಾವರಿ ನಿಧಿ ದುಪ್ಪಟ್ಟುಗೊಳಿಸಲಾಗಿದೆ

ನಬಾರ್ಡ್ ಅಡಿಯಲ್ಲಿ ರೂ.5,000 ಕೋಟಿಗಳ ಮೂಲ ಬಂಡವಾಳದೊಂದಿಗೆ ಪ್ರಾರಂಭವಾದ ಮೈಕ್ರೋ ನೀರಾವರಿ ನಿಧಿಯನ್ನು ಇನ್ನೂ ರೂ. 5,000 ಕೋಟಿ ಸೇರ್ಪಡೆಗೊಳಿಸುವ ಮೂಲಕ ದ್ವಿಗುಣಗೊಳಿಸುವ ಕುರಿತು ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.

ಆಪರೇಶನ್ ಗ್ರೀನ್ ಯೋಜನೆ – ಇನ್ನೂ 22 ಹೆಚ್ಚಿನ ಹಾಳಾಗದಂತಹ ಪದಾರ್ಥಗಳ ಸೇರ್ಪಡೆಗೆ ಉತ್ತೇಜನ

ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳಲ್ಲಿ ಮೌಲ್ಯವರ್ಧನೆ ಮತ್ತು ಅವುಗಳ ರಫ್ತು ಹೆಚ್ಚಿಸಲು, ಹಾಳಾಗದಂತಹ 22 ಉತ್ಪನ್ನಗಳನ್ನು ಸೇರಿಸಿ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ (ಟಾಪ್ಸ್) ಗೆ ಪ್ರಸ್ತುತ ಅನ್ವಯವಾಗುವ ‘ಆಪರೇಷನ್ ಗ್ರೀನ್ ಸ್ಕೀಮ್’ ವ್ಯಾಪ್ತಿಯನ್ನು ವಿಸ್ತರಿಸಲು ಶ್ರೀಮತಿ ಸೀತಾರಾಮನ್ ಪ್ರಸ್ತಾಪಿಸಿದರು

ಇ ನಾಮ್ ನಲ್ಲಿ ಮತ್ತೆ 1000 ಹೆಚ್ಚುವರಿ ಮಂಡಿಗಳ ಸೇರ್ಪಡೆ

ಸುಮಾರು 1.68 ಕೋಟಿ ರೈತರು ನೋಂದಾಯಿಸಿಕೊಂಡಿದ್ದಾರೆ ಮತ್ತು ಇ-ನಾಮ್‌ಗಳ ಮೂಲಕ ರೂ. 1.14 ಲಕ್ಷ ಕೋಟಿಗಳ ಮೌಲ್ಯದ ವ್ಯಾಪಾರವನ್ನು ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಇ- ನಾಮ್‌ ನಿಂದಾಗಿ ಕೃಷಿ ಮಾರುಕಟ್ಟೆಯಲ್ಲಿ ಸಾಧಿಸಲಾದ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು, ಇಂಥ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ತರಲು ಇ- ನಾಮ್‌ ನಲ್ಲಿ ಇನ್ನೂ 1,000 ಮಂಡಿಗಳ ಸೇರ್ಪಡೆಗೆ ಹಣಕಾಸು ಸಚಿವರು ಪ್ರಸ್ತಾಪಿಸಿದರು.

ಕೃಷಿ ಮೂಲಭೂತ ಸೌಕರ್ಯ ನಿಧಿ ಪಡೆಯಲು ಎಪಿಎಂಸಿ ಗಳಿಗೆ ಅವಕಾಶ

ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಎಪಿಎಂಸಿಗಳಿಗೆ ಕೃಷಿ ಮೂಲಸೌಕರ್ಯ ನಿಧಿ ಲಭ್ಯವಾಗುವಂತೆ ಹಣಕಾಸು ಸಚಿವರು ಪ್ರಸ್ತಾಪಿಸಿದರು.

5 ಪ್ರಮುಖ ಮೀನುಗಾರಿಕಾ ಬಂದರುಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಪ್ರಸ್ತಾಪ

ಆಧುನಿಕ ಮೀನುಗಾರಿಕೆ ಬಂದರುಗಳು ಮತ್ತು ಸಂಗ್ರಹಿಸಿದ ಮೀನು ಇಳಿಸುವ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಕುರಿತು ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು. ಕೊಚ್ಚಿ, ಚೆನ್ನೈ, ವಿಶಾಖಪಟ್ಟಣಂ, ಪ್ಯಾರಾದೀಪ್, ಮತ್ತು ಪೆತುಆಘಾಟ್ ಎಂಬ 5 ಪ್ರಮುಖ ಮೀನುಗಾರಿಕಾ ಬಂದರುಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ನದಿಗಳು ಮತ್ತು ಜಲಮಾರ್ಗಗಳ ತೀರದಲ್ಲಿ ಒಳನಾಡು ಮೀನುಗಾರಿಕೆ ಬಂದರುಗಳು ಮತ್ತು ಮೀನು- ಸಂಗ್ರಹಿಸಿದ ಮೀನು ಇಳಿಸುವ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಕುರಿತು ಕೂಡಾ ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.

ತಮಿಳುನಾಡಿನಲ್ಲಿ ಬಹುಉದ್ದೇಶಿತ ಸೀವೀಡ್ ಪಾರ್ಕ್ ಸ್ಥಾಪನೆಗೆ ಉತ್ತೇಜನ

ಸೀವೀಡ್ ಕೃಷಿಯಲ್ಲಿನ ಸಾಮರ್ಥ್ಯವನ್ನು ಗುರುತಿಸುವುದರ ಮೂಲಕ, ಇದು ಕರಾವಳಿ ಸಮುದಾಯಗಳ ಜೀವನವನ್ನೇ ಪರಿವರ್ತಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಉದಯೋನ್ಮುಖ ವಲಯವಾಗಿದೆ ಎಂದು ಹಣಕಾಸು ಸಚಿವರು ಹೇಳಿದರು – ಇದು ದೊಡ್ಡ ಪ್ರಮಾಣದ ಉದ್ಯೋಗ ಮತ್ತು ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಕಡಲಕಳೆ ಕೃಷಿಯನ್ನು ಉತ್ತೇಜಿಸಲು, ತಮಿಳುನಾಡಿನಲ್ಲಿ ವಿವಿಧೋದ್ದೇಶ ಕಡಲಕಳೆ ಉದ್ಯಾನವನವನ್ನು ಸ್ಥಾಪಿಸಲು ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.

ಹಿಂದಿನ ವರ್ಷಗಳಲ್ಲಿ ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ರೈತರಿಂದ ಗೋಧಿ, ಅಕ್ಕಿ, ದ್ವಿದಳ ಧಾನ್ಯಗಳ ಸಂಗ್ರಹವನ್ನು ಕ್ರಮೇಣ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು. ಎಲ್ಲಾ ಸರಕುಗಳಿಗೆ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಬೆಲೆಯನ್ನು ಖಚಿತಪಡಿಸಲು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿರ್ವಹಣೆ ಸಮುಗ್ರ ಬದಲಾವಣೆಗೆ ಒಳಗಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.

ಹಿಂದಿನ ವರ್ಷಗಳಲ್ಲಿ ರೈತರಿಗೆ ಸಂಗ್ರಹಣೆ ಮತ್ತು ಪಾವತಿಸಿದ ಮೊತ್ತದ ವಿವರಗಳನ್ನು ಒದಗಿಸುವುದು, 2013-2014ರಲ್ಲಿ ಗೋಧಿಯ ಖರೀದಿಯಲ್ಲಿ, ರೈತರಿಗೆ ಪಾವತಿಸಿದ ಒಟ್ಟು ಮೊತ್ತ ರೂ 33,874 ಕೋಟಿ. 2019-2020ರಲ್ಲಿ ರೂ 62,802 ಕೋಟಿ., ಮತ್ತು ಇನ್ನೂ ಹೆಚ್ಚು, 2020-2021ರಲ್ಲಿ ರೈತರಿಗೆ ಪಾವತಿಸಿದ ಈ ಮೊತ್ತವು ರೂ 75,060 ಕೋಟಿ. 2019-20ರ 35.57 ಲಕ್ಷಕ್ಕೆ ಹೋಲಿಸಿದರೆ 2020-21ರಲ್ಲಿ ಲಾಭ ಪಡೆದ ಗೋಧಿ ಬೆಳೆಯುವ ರೈತರ ಸಂಖ್ಯೆ 43.36 ಲಕ್ಷಕ್ಕೆ ಏರಿದೆ.

ಭತ್ತಕ್ಕೆ 2013-14 ರಲ್ಲಿ ಪಾವತಿಸಿದ ಮೊತ್ತ ರೂ 63,928 ಕೋಟಿ. 2019-2020 ರಲ್ಲಿ ರೂ 1,41,930 ಕೋಟಿ ಮತ್ತು ಅದಕ್ಕೂ ಹೆಚ್ಚು 2020-2021 ರಲ್ಲಿ ಇದು ರೂ 172,752 ಕೋಟಿಗೆ ವೃದ್ಧಿಸಲಿದೆ ಎಂದು ಅಂದಾಜಿಸಲಾಗಿದೆ. ರೈತರ ಲಾಭ 2019-20 ರಲ್ಲಿ 1.24 ಕೋಟಿಯಿಂದ 2020-21 ರಲ್ಲಿ 1.54 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿಯಲ್ಲಿ , ದ್ವಿದಳ ಧಾನ್ಯಗಳಿಗೆ ಸಂಬಂಧಿಸಿದಂತೆ, 2013-14 ರಿಂದ 40 ಪಟ್ಟು ಹೆಚ್ಚಾಗಿದ್ದು, 2013-2014 ರಲ್ಲಿ ಪಾವತಿಸಿದ ಮೊತ್ತ ರೂ 236 ಕೋಟಿ. 2019-20 ರಲ್ಲಿ ಇದು ರೂ 8,285 ಕೋಟಿ. ಈಗ, 2020-2021 ರಲ್ಲಿ ಇದು ರೂ 10,530 ಕೋಟಿಗಳಾಗಿದೆ. ಹತ್ತಿ ರೈತರಿಗೆ ನೀಡಿದ ರಶೀದಿಗಳಲ್ಲಿ 2013-14 ರಲ್ಲಿ ರೂ 90 ಕೋಟಿಗಳಿಂದ ರೂ 25,974 ಕೋಟಿ ಏರಿಕೆ ಕಂಡಿದೆ (27 ಜನವರಿ 2021 ರಂತೆ).

ರೈತರಿಗೆ ಪಾವತಿ ಮಾಡಿರುವುದರಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದನ್ನು ಈ ಕೆಳಗೆ ತೋರಿಸಲಾಗಿದೆ

(ರೂ ಕೋಟಿಗಳಲ್ಲಿ)

 2013-142019-202020-21
ಗೋಧಿರೂ  33,874ರೂ  62,802ರೂ  75,060
ಭತ್ತರೂ  63,928ರೂ  1,41,930ರೂ  172,752
ದ್ವಿದಳ ಧಾನ್ಯಗಳುರೂ  236ರೂ  8,285ರೂ  10,530

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending, ಕೃಷಿ Tagged With: ಆಧುನಿಕ ಮೀನುಗಾರಿಕೆ, ಬಂದರುಗಳು, ಮಹತ್ವಾಕಾಂಕ್ಷೆಯ ಭಾರತದ, ರೈತರ ಕಲ್ಯಾಣ, ರೈತರಿಗೆ ಸಂಗ್ರಹಣೆ ಮತ್ತು ಪಾವತಿಸಿದ ಮೊತ್ತ, ಸಂಗ್ರಹಿಸಿದ ಮೀನು ಇಳಿಸುವ ಕೇಂದ್ರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...