ಹೊನ್ನಾವರ: ಪಟ್ಟಣ ಹಾಗೂ ಮಾರ್ಗಮಧ್ಯೆಯ 9 ಗ್ರಾಮಗಳಿಗೆ ಶರಾವತಿ ಕುಡಿಯುವ ನೀರು ಯೋಜನೆಯನ್ನು ಸಚೀವರು ಚಾಲನೆ ನೀಡಿದ್ದು, 9 ಗ್ರಾಮದಲ್ಲಿ ಒಂದಾದ ಹೊಸಾಕುಳಿ ಗ್ರಾಮವು ಒಂದಾಗಿದೆ. ಇದು ಅರೇಅಂಗಡಿ ಭಾಗದವರಿಗೆ ಹೋಗಲಿದ್ದು ಸಾಲಕೋಡ ಗ್ರಾಮ ಪಂಚಾಯತಿ ಮುಂಭಾಗದವರಿಗೆ ನೀರು ಸರಬರಾಜು ಆಗುದರಿಂದಒಂದು ಪೈಪ್ ಲೈನ್ ಸಂಪರ್ಕ ಸಾಲ್ಕೋಡ್ ಗ್ರಾಮಕ್ಕೆ ನೀಡಬೇಕು. ಇದರಿಂದ ಈ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿ ನಾಯ್ಕ ಮುಂದಾಳತ್ವದಲ್ಲಿ ಸದಸ್ಯರು ಸಚೀವ ಬಸವಾರಾಜು ಹಾಗೂ ಶಿವರಾಮ ಹೆಬ್ಬಾರ ಇವರಿಗೆ ಮನವಿ ಸಲ್ಲಿಸಿದರು. ಸಾಲ್ಕೋಡ್ ಗ್ರಾಮ ಚಾವಡಿ ಕುಸಿದು ಬಿಳುವ ಹಂತ ತಲುಪಿದ್ದು, ಕಂದಾಯ ಭೂಮಿಯಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ ಆಗ್ರಹಿಸಿದರು. ಈ ಎರಡು ಸಮಸ್ಯೆ ಬಗ್ಗೆ ಸಚೀವರು, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪ್ರೀಯಾಂಗ ಎಂ. ಅವರಿಗೆ ಎರಡು ಸಮಸ್ಯೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ವರದಿ ಪಡೆದು ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
Leave a Comment