ಹೊನ್ನಾವರ: ಪಟ್ಟಣದ ಕುಡಿಯುವ ನೀರು ಕಾಮಗಾರಿ ಚಾಲನೆ ನೀಡಿದ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿ ಸಚೀವ ಬಿಸಿ ಪಾಟೀಲ ವಾಕ್ಸಿನ ಮನೆ ಬಾಗಿಲಿಗೆ ತರಸಿಕೊಂಡು ಪಡೆದ ಬಗ್ಗೆ ಪ್ರಶ್ನಿಸಿದಾಗ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಕೆಲಸ ನಾನು ಮಾಡುವುದಿಲ್ಲ.
ಆರೊಗ್ಯ ಸಚೀವರು ತಪ್ಪು ಎಂದು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ ಎಂದಾಗ ಅವರ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ ಅವರು ಪ್ರತಿಕ್ರಿಯೆ ನೀಡಿರಬಹುದು. ನನ್ನ ಜಿಲ್ಲೆಯ ಅಭಿವೃದ್ದಿ ಹಾಗೂ ಇಲಾಖೆಯ ಸಮಸ್ಯೆ ಬಗ್ಗೆ ಮಾತ್ರ ಉತ್ತರಿಸುತ್ತೇನೆ ಎಂದರು. ಕಾಸರಕೋಡು ಖಾಸಗಿ ಬಂದರು ನಿರ್ಮಾಣ ವಿಷಯದಲ್ಲಿ ಪ್ರತಿಭಟನೆ ನಡೆಯುತ್ತಿರದನ್ನು ಪ್ರಶ್ನಿಸಿದಾಗ ಈಗಾಗಲೇ ಸ್ಥಳಿಯರು, ಮೀನುಗಾರರು ಮನವಿ ನೀಡಿದ್ದು, ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳಕ್ಕೆ ಮುಂದಿನ ದಿನದಲ್ಲಿ ಭೇಟಿ ನೀಡಲಿದ್ದು, ಸಮಸ್ಯೆ ಬಗೆಹರಿಸುದಾಗಿ ಭರವಸೆ ನೀಡಿದರು.
Leave a Comment