ಹೊನ್ನಾವರ: ಗ್ರಾಮಗಳ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತು ಸಮಸ್ಯೆ ಬಗೆಹರಿಸುವಲ್ಲಿ ಶಾಸಕ ಸುನೀಲ ನಾಯ್ಕ ಮುಂಚೂಣಿಯಲ್ಲಿರುತ್ತಾರೆ ಎನ್ನುವ ಕ್ಷೇತ್ರದ ಮತದಾರ ಮಾತಿಗೆ ಪುಷ್ಟಿ ನೀಡುವಂತೆ ತಾಲೂಕಿನ ಕೊಡಗಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ ಈ ಹಿಂದೆ ನೀಡಿದ ಭರವಸೆ ವಿದ್ಯುತ್ ಸಮಸ್ಯೆ ಬಗ್ಗೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ಚಿಕ್ಕನಕೋಡ ಪಂಚಾಯತಿ ವ್ಯಾಪ್ತಿಯ ತುತ್ತತುದಿಯಲ್ಲಿರು ಕೊಡಗಿ ಗ್ರಾಮದಲ್ಲಿ 400ರಿಂದ 500 ಜನಸಂಖ್ಯೆ ಇದೆ. ಸಿದ್ದಾಪುರ ಹಾಗೂ ಹೊನ್ನಾವರ ತಾಲೂಕಿನ ಗಡಿಯಲ್ಲಿರುವ ಈ ಗ್ರಾಮಕ್ಕೆ ಇದುವರೆಗೂ ಜನಪ್ರತಿನಿಧಿಗಳು ಭೇಟಿ ನೀಡಿರುವುದು ವಿರಳ. ಅದರಲ್ಲಿಯೂ ಶಾಸಕರಾದವರು ಹೋದ ಉದಾಹರಣೆಯೇ ಇಲ್ಲ. ಅಂತಹ ಸ್ಥಳಕ್ಕೆ ಶಾಸಕ ಸುನೀಲ ನಾಯ್ಕ ಬೈಕ್ ಚಲಾಯಿಸಿಕೊಂಡು ಹೋಗಿ ಅಲ್ಲಿಯ ಸಾರ್ವಜನಿಕರರೊಂದಿಗೆ ಸಮಸ್ಯೆ ಆಲಿಸಿದ್ದಾರೆ. ಈಗ್ರಾಮದವರಿಗೆ ವಿದ್ಯುತ್ ಸಂಪರ್ಕದ ಬಗ್ಗೆ ನೀಡಿದ ಭರವಸೆಯಂತೆ 220 ಕಂಬಗಳು ಈಗಾಗಲೇ ಸ್ಥಳಕ್ಕೆ ತಲುಪಿದ್ದು, ಅಳವಡಿಕೆ ಕಾರ್ಯ ಆರಂಭಗೊಂಡಿರುದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಭಾಗಕ್ಕೆ ಸಂಚಾರಕ್ಕೆ ಅನೂಕೂಲವಾಗಲು 2 ಸೇತುವೆ ಹಾಗೂ 700 ಮೀಟರ್ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಮಂಜೂರು ಮಾಡಿಸಿಕೊಂಡು ಬಂದಿರುದರಿಂದ ಕೇಲವೆ ದಿನದಲ್ಲಿ ಈ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ತಮ್ಮೂರಿಗೆ ಬಂದ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿ ಗ್ರಾಮದ ಹಲವು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ಬಳಿಕ ಶಾಸಕ ಸುನೀಲ ನಾಯ್ಕ ಮಾತನಾಡಿ ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯದಿಂದ ವಂಚಿತವಾದ ಪ್ರದೇಶಕ್ಕೆ ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸಿದ ತೃಪ್ತಿ ನನಗಿದೆ. ಮುಂಬರುವ ದಿನದಲ್ಲಿ ಸಂಪೂರ್ಣ ರಸ್ತೆ ಸಂಪರ್ಕ ಕಲ್ಪಿಸಲಿದ್ದೇನೆ. ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಜಿರ್ಣೋದ್ದಾರಕ್ಕೆ ಧನಸಹಾಯ ನೀಡುವ ಜೊತೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಾಮಣಿಕವಾಗಿ ಪ್ರಯತ್ನಿಸುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ವಿಘ್ನೇಶ್ವರ ಹೆಗಡೆ, ಗಣಪತಿ ನಾಯ್ಕ ಬಿಟಿ, ಗ್ರಾಮ ಪಂಚಾಯತ್ ಸದಸ್ಯ ನಾಗೇಶ ಹಾಜರಿದ್ದರು.
Leave a Comment