ಹೊನ್ನಾವರ: ಕಳೆದ ಒಂದು ತಿಂಗಳನಿಂದ ಮೀನುಗಾರರು ಬಂದರು ಕಾಮಗಾರಿ ವಿರೋಧಿಸಿ ಕಾಸರಕೋಡ ಟೋಂಕಾ ಸಮೀಪ ನಡೆಸುತ್ತಿರುವ ಹೋರಾಟಕ್ಕೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಈ ಬಂದರು ನಿರ್ಮಾಣದಿಂದ ಮೀನುಗಾರಿಕೆ ಸಂಕಷ್ಟ ಎದುರಾಗಲಿದೆ. ಜಲಚರಗಳು ವಾಸಿಸುವ ಸ್ಥಳ ಎಂದು ಸ್ಥಳಿಯರು ಈ ಹಿಂದಿನಿಂದಲೂ ಹೇಳುತ್ತಾ ಬಂದಿದ್ದರು. ಕ್ಯಾರೆ ಅನ್ನದೆ ಅಧಿಕಾರಿಗಳಿಗೆ ಕಳೆದ ಹದಿನೈದು ದಿನದ ಹಿಂದೆ ಕಡಲಾಮೆ ಮೊಟ್ಟೆ ದೊರೆತಾಗ ಇರಸುಮುರುಸಾಗಿತ್ತು. ಆದರೆ ಮೊಟ್ಟೆ ಬೇರೆ ಭಾಗದಿಂದ ತಂದು ಇಟ್ಟಿರಬಹುದೆನ್ನುವ ಸಮಜಾಯಿಸಿ ನೀಡಲು ಮುಂದಾಗಿದ್ದರು. ಇದೀಗ ಇದೇ ಮಾರ್ಗದ ಅಣತಿ ದೂರದಲ್ಲೆ ಕಡಲಾಮೆ ಸಂಚಾರವಾಗಿರುದು ಸ್ಥಳಿಯ ಮೀನುಗಾರರು ತಮ್ಮ ಮೊಬೈಲನಲ್ಲಿ ಸೆರೆಹಿಡಿರುವುದರಿಂದ ಈ ಪ್ರದೇಶ ಜಲಚರಗಳು ವಾಸಿಸುವ ಸ್ಥಳ ಎನ್ನುವ ಮೀನುಗಾರರ ವಾದಕ್ಕೆ ಪುಷ್ಠಿ ಬಂದಂತಾಗಿದೆ. ಕೆಲವೇ ದಿನದಲ್ಲಿ ಬಂದರು ನಿರ್ಮಾಣ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ನೀಡುದಾಗಿ ಜಿಲ್ಲಾ ಉಸ್ಯವಾರಿ ಸಚೀವ ಶಿವರಾಮ ಹೆಬ್ಬಾರ ಹೇಳಿದ್ದರು. ಕಳೆದ ವಾರ ಬಂದರು ಕಾಮಗಾರಿ ಸ್ಥಗಿತಗೊಳಿಸುವಂತೆ ಬೃಹತ್ ಪಾದಯಾತ್ರೆಯನ್ನು ಮೀನುಗಾರರು ಕೈಗೊಂಡಿದ್ದರು. ಇದರ ನಡುವೆಯೆ ಈ ಭಾಗದಲ್ಲಿ ಕಡಲಾಮೆ ಸಂಚಾರ ಮೀನುಗಾರರ ಹೋರಾಟಕ್ಕೆ ಇನ್ನಷ್ಟು ಬಲ ತಂದಿದೆ.
Leave a Comment