ಹೊನ್ನಾವರ: ಸೇವಾ ಚಟುವಟಿಕೆ ಮೂಲಕ ಜಗತ್ತಿಗೆ ಮಾದರಿಯಾದ ಲಯನ್ಸ ಸಂಸ್ಥೆ ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದಿದೆ ಎಂದು ಕರ್ನಾಟಕ ವಿಕೇಂದ್ರಿಕರಣ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಹೇಳಿದರು. ಅವರು ಹೊನ್ನಾವರದ ಲಯನ್ ಸಭಾಭವನದಲ್ಲಿ ಲಯನ್ಸ ಪ್ರಾದೇಶಿಕ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ರಿಚ್ ದ ನೀಡಿ” ಎನ್ನುವ ಆಶಯದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮ ವಿಭಿನ್ನವಾಗಿದೆ. ಲಯನ್ಸ್ ಸೇವಾ ಸಂಸ್ಥೆ ಜಗತ್ತಿನಾದ್ಯಂತ . ಕಷ್ಟದಲ್ಲಿರುವವರ ಸಹಾಯಕ್ಕೆ ದಾವಿಸಿ ಅವರಿಗೆ ನೆರವಾಗಿದೆ. ತಮ್ಮ ದುಡಿತದ ಹಣವನ್ನೇ ಖರ್ಚು ಮಾಡಿ ಸಂಸ್ಥೆಯನ್ನು ನಡೆಸುವವರು ಜಗತ್ತಿನಲ್ಲಿ ಯಾರಾದರೂ ಇದ್ದರೆ ಅದು ಲಯನ್ ಸಂಸ್ಥೆ. ಈ ಸಂಸ್ಥೆಯಲ್ಲಿರುವವರು ಕೈ ಚಾಚಿದವರಿಗೆ ನೆರವಾಗುತ್ತಾರೋ ಹೊರತು ತಾವು ಕೈ ಚಾಚುವವರಲ್ಲ. ದಾನ ಯಾರು ಕೂಡ ಮಾಡಬಹುದು. ಅದಕ್ಕೆ ಬಡವ -ಬಲ್ಲಿದ ಎನ್ನುವ ಬೇದವಿಲ್ಲ ಆದರೆ ಅದಕ್ಕೆ ಮನಸ್ಸು ಬೇಕು. ದಾನ ಚಿಕ್ಕ ದಾಗಿರಬಹುದು. ದೊಡ್ಡದಾಗಿರಬಹುದು. ತನ್ನ ಕೈಲಾದ ಸಹಾಯ ಮಾಡುವದು ಮನುಷ್ಯನ ಧರ್ಮ, ಅದರಲ್ಲಿರುವ ಸಂತೋಷ ಬೇರೆ ಯಾವುದರಲ್ಲೂ ಇಲ್ಲ. ಜಗತ್ತು ಲಯನ್ ಸೇವಾ ಸಂಸ್ಥೆಯನ್ನು ಹೆಮ್ಮೆಯಿಂದ ನೋಡುತ್ತದೆ. ತಮ್ಮ ಅನೇಕ ಸೇವಾ ಚಟುವಟಿಕೆಗಳ ಮೂಲಕ ಜಗತ್ತಿಗೆ ಮಾದರಿಯಾಗಿದೆ. ಸೇವಾ ಸಂಸ್ಥೆಗಳು ಇನ್ನಷ್ಟು ಬೆಳೆಯಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಕುರಿತು ದಿಕ್ಸುಚಿ ಮಾತನಾಡಿದ ರವಿ ಹೆಗಡೆ ಹೂವಿನಮನೆ ಲಯನ್ ಸೇವಾ ಸಂಸ್ಥೆ ತನ್ನ ಸೇವೆಗೆ ಹೆಸರುವಾಸಿಯಾದ ಸಂಸ್ಥೆ. ಮುಖ್ಯವಾಗಿ ತನ್ನ ಡಿಸ್ಟಿçಕ್ಟ್ಗೆ ಒಳಪಡುವ ಎಲ್ಲಾ ಕ್ಲಬ್ಗಳು ಅತ್ಯುತ್ತಮವಾದ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಜನರು ಹೆಮ್ಮೆಯಿಂದ ಗೌರವಿಸುವಂತೆ ಮಾಡಿದೆ. ಸೇವೆ ಎನ್ನುವದು ಬರಿ ಬಾಯಿ ಮಾತಿನಿಂದಲ್ಲ. ಅದನ್ನು ಕಾರ್ಯಗತ ಮಾಡಿ ತೋರಿಸುವುದು ಮುಖ್ಯ, ಆ ಕೆಲಸವನ್ನು ಲಯನ್ ಸಂಸ್ಥೆ ಜಗತ್ತಿನಾದ್ಯಂತ ಮಾಡುತ್ತದೆ. ಇವತ್ತಿನ “ರೀಚ್ ದ ನೀಡಿ” ಅನ್ನುವ ಆಶಯ ನಿಜವಾದ ಸಹಾಯದ, ಅಗತ್ಯತೆ ಇರುವವರಿಗೆ ಮಾಡಿದಾಗ ಮಾತ್ರ ಅದು ಸಾರ್ಥಕತೆ ಕಾಣುತ್ತದೆ. ಆ ಸೇವೆಗೊಂದು ಅರ್ಥ ಬರುತ್ತದೆ. ಅಂಥಹ ಕೆಲಸವನ್ನು ನಮ್ಮ ಲಯನ್ ಸೇವಾ ಸಂಸ್ಥೆ ಮಾಡುತ್ತಿದೆ. ಲಯನ್ ಸಂಸ್ಥೆಯ ತತ್ವ, ಸಿದ್ಧಾಂತ ಕಾರ್ಯಸೂಚಿಗಳ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪಿ.ಎಮ್. ಜೆ.ಎಫ್ ಲಯನ್ ಗಣಪತಿ ನಾಯಕ ರವರು ಮಾತನಾಡಿ ಲಯನ್ ಸಂಸ್ಥೆ ಸೇವೆಗಳ ಬಗ್ಗೆ ಕೊಂಡಾಡಿ ನನ್ನ ಜೀವನದ ಸಾರ್ಥಕತೆಯನ್ನು ಇದರಲ್ಲಿ ಕಂಡುಕೊ0ಡಿದ್ದೆನೆ. ನಿಜವಾದ ಸೇವೆಯನ್ನು ಮಾಡಬಯಸುವವರು ಲಯನ್ಸ್ನಲ್ಲಿ ಸದಸ್ಯರಾಗಬೇಕು. ಹೊನ್ನಾವರದ ಲಯನ್ಸ್ ಕ್ಲಬ್ ತನ್ನ ಸೇವಾ ಚಟುವಟಿಕೆ ಬಗ್ಗೆ ತುಂಬಾ ಹೆಸರುವಾಸಿಯಾಗಿದೆ. ಅತ್ಯಂತ ಸುಂದವಾಗಿ ಕಾರ್ಯಕ್ರಮ ಸಂಘಟಿಸಲ್ಪಟ್ಟಿದೆ. ಎಂದು ಹೇಳಿದರು.
ಪ್ರಾದೇಶಿಕ ಭಾಗ ೧ ರ ಅಧ್ಯಕ್ಷರಾದ ಪ್ರೊ.ಸುರೇಶ.ಎಸ್. ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದರು.
ವೇದಿಕೆಯಲ್ಲಿ , ಲಯನ್ ಅಧ್ಯಕ್ಷ ಪ್ರದೀಪ ಶೆಟ್ಟಿ, ಕಾರ್ಯದರ್ಶಿ ಎಮ್.ಜಿ.ನಾಯ್ಕ, ಖಜಾಂಚಿ ಎಸ್.ಟಿ.ನಾಯ್ಕ, ಪ್ರಾದೇಶಿಕ ಸಮ್ಮೇಳನ ಕಾರ್ಯಕ್ರಮದ ಕಮಿಟಿಯ ಅಧ್ಯಕ್ಷ ಎಸ್. ಜೆ. ಖೈರನ್. ಕಾರ್ಯದರ್ಶಿ ಶಾಂತರಾಮ ನಾಯ್ಕ, ಖಜಾಂಚಿ ರಾಜೇಶ ಸಾಳೆಹಿತ್ತಲ್ ಲಯನ್ಸ ಸದಸ್ಯರು ಉಪಸ್ಥಿತರಿದ್ದರು.
Leave a Comment