ಭಟ್ಕಳ: ರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಸಿಟೌಟ್ನಲ್ಲಿದ್ದ ನಾಯಿಯ ಕುತ್ತಿಗೆ ಮುರಿದು ಹೊತ್ತೊಯ್ದ ಘಟನೆ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಕಂಡೆಕೊಡ್ಲು ನಡುರಾತ್ರಿ ೨.೩೦ರ ಸುಮಾರಿಗೆ ನಡೆದಿದೆ.
ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನಂತ ದುರ್ಗಪ್ಪ ನಾಯ್ಕ ಎನ್ನುವವರ ಮನೆಗೆ ನುಗ್ಗಿದ ಚಿರತೆ ಸಿಟೌಟ್ನಲ್ಲಿ ಇದ್ದ ನಾಯಿಯ ಮೇಲೆ ಎರಗಿದೆ. ನಾಯಿ ಕಿರುಚಿತ್ತಿದ್ದಾಗ ಮನೆಯವರು ಎಚ್ಚರಗೊಂಡಿದ್ದಾರೆ. ಅಷ್ಟರಲ್ಲೆ ಮನೆಯ ಅಂಗಳಕ್ಕೆ ನಾಯಿಯನ್ನು ಚಿರತೆ ಎಳೆದು ತಂದಿದೆ. ಮನೆಯ ಮಾಲಿಕರು ನೋಡುತ್ತಿರುವಂತೆ ಚಿರತೆ ನಾಯಿಯ ಕುತ್ತಿಗೆ ಮುರಿದು ಹೊತ್ತೋಯ್ದಿದೆ.
ಚಿರತೆಯ ಆವೇಶ ಕಂಡ ಮನೆಯವರು ಬೆಚ್ಚಿಬಿದ್ದಿದ್ದು ಆತಂಕದಲ್ಲಿದ್ದಾರೆ. ವೆಂಕಟಾಪುರ ಗ್ರಾಮವೂ ನಗರಕ್ಕೆ ಹೊಂದಿಕೊಡು ಇದ್ದು, ಇದು ಕಾಡಿನ ಪ್ರದೇಶವೂ ಅಲ್ಲ. ಇಲ್ಲಿಯೂ ಚಿರತೆ ದಾಳಿ ನಡೆಸುತ್ತಿರುವದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮನೆಯ ಮಾಲಿಕ ಅನಂತ ದುರ್ಗಪ್ಪ ನಾಯ್ಕ ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಮುಂಡಳ್ಳಿಯ ಬಳಿಯೂ ಚಿರತೆ ಪ್ರತ್ಯಕ್ಷ :ತಾಲೂಕಿನ ಮುಂಡಳ್ಳಿಯ ನೀರಗದ್ದೆ ಬಳಿಯೂ ಮಾ.೧೨ರ ನಡುರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ. ಸ್ಥಳೀಯರು ಆತಂಕಗೊಡು ಅರಣ್ಯ ಇಲಾಖೆಗೆ ಮಹಿತಿ ನೀಡಿದ್ದಾರೆ. ಆರ್ಎಫ್ಒ ಸವಿತಾ ದೇವಾಡಿಗ ಈ ಕುರಿತುಮಾಹಿತಿ ನೀಡಿದ್ದು ಕಾಡಿನಲ್ಲಿ ನೀರು ದೊರಯದೆ ಪ್ರಾಣಿಗಳು ನಡಿಗೆ ಲಗ್ಗೆ ಇಡುವ ಸಂಭವನಿಯತೆ ಇವೆ.ಈ ಕುರಿತು ಸ್ಥಳೀಯರು ಮಹಿತಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದ್ದಾರೆ.
Leave a Comment