ಹೊನ್ನಾವರ: ಬಸ್ ನಿಲ್ದಾಣ ಸಮೀಪದ ಶನೇಶ್ವರ ದೇವಾಲಯದ ಪಕ್ಕ ಅಶೋಕ ವೆಂಕಟೇಶ ಮಹಾಲೆ ಮಾಲಿಕತ್ವದ ಕಿರಾಣಿ ಅಂಗಡಿಯಲ್ಲಿ ಸೋಮವಾರ ಬೆಳಗಿನ ಜಾವ ವಿದ್ಯುತ್ ಅವಘಡ ಸಂಭವಿಸಿದ್ದು ಅಂಗಡಿಯಲ್ಲಿದ್ದ ಕಿರಾಣಿ ಸಾಮಗ್ರಿಗಳು ಸುಟ್ಟು ಕರಕಲಾಗಿದೆ.
ಅಂಗಡಿಯ ಒಂದು ಭಾಗದಲ್ಲಿ ಬೆಳಗಿನ ಜಾವ 4;30ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಕಿರಾಣಿ ಸಾಮಗ್ರಿಗಳಿಗೆ ತಗುಲಿದ ಪರಿಣಾಮ ಬೆಂಕಿ ಸಂಪೂರ್ಣ ಅಂಗಡಿಗೆ ವ್ಯಾಪಿಸಿತು. ಕ್ಷಣಾರ್ಧದಲ್ಲಿ ಬೆಂಕಿ ಅಂಗಡಿಗೆ ಆವರಿಸಿದ ಪರಿಣಾಮ ಅಂಗಡಿಯಲ್ಲಿದ್ದ ಕಿರಾಣಿ ಸಾಮಗ್ರಿಗಳು, ತೆಂಗಿನಕಾಯಿ ಸೇರಿದಂತೆ ವಿವಿಧ ವಸ್ತುಗಳು ಸುಟ್ಟು ಕರಕಾಗಲಿದೆ.
ಕೂಡಲೇ ಅಂಗಡಿ ಮಾಲಿಕರಿಗೆ ಹಾಗೂ ಅಗ್ನಿಶಾಮಕದಳದವರಿಗೆ ವಿಷಯ ತಿಳಿಸಿದ ಪರಿಣಾಮ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶ್ವಸಿಯಾದರು.
ಕಿರಾಣಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಸುಟ್ಟು ಕರಕಾಲಿಗಿದೆ 5 ಲಕ್ಷಕ್ಕೂ ಅಧಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಸ್ಥಳವನ್ನು ಅಧಿಕಾರಿಗಳು ಪಂಚನಾಮೆ ನಡೆಸಿದ್ದಾರೆ.
Leave a Comment