ಹೊನ್ನಾವರ: ಕರ್ನಾಟಕ ಬಾರ್ಡೋಲಿ ಎಂದು ಕರೆಸಿಕೊಂಡ ಉತ್ತರಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಸಾರುವ ಚಲನಚಿತ್ರ ದಂಡಿ ಚಿತ್ರದ ಮುಹೂರ್ತ ಸಮಾರಂಭ ಮಾರ್ಚ 18 ಗುರುವಾರ ಬೆಳಿಗ್ಗೆ 9 ಗಂಟೆಗೆ ಪಟ್ಟಣ ಮೂಡಗಣಪತಿ ಸಬಾಭವನದಲ್ಲಿ ನಡೆಯಲಿದೆ ಎಂದು ಚಿತ್ರತಂಡದ ಸದಸ್ಯರು ಮಾಧ್ಯಮಗೊಷ್ಟಿಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಖಾಸಗಿ ಹೋಟೇಲನಲ್ಲಿ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಚಿತ್ರಕಥೆಯ ನಿರ್ದೇಶಕರಾದ ವಿಶಾಲ್ ರಾಜ್ ಮಾತನಾಡಿ ಸ್ವಾತಂತ್ರ್ಯ ಬಂದು 75 ನೇ ವರ್ಷದ ಹೊಸ್ತಿಲಲ್ಲಿರುವಾಗ ಕೃತಿರೂಪದಲ್ಲಿದ್ದ ಸ್ವಾತಂತ್ರ್ಯ ಚಳುವಳಿಯ ಕಥೆಯ ಸಾರವನ್ನೊಳಗೊಂಡ ಡಾ.ರಾಜಶೇಖರ್ ಮಠಪತಿ(ರಾಗಂ) ಇವರ ದಂಡಿ ಹೆಸರಿನ ಕಾದಂಬರಿ ಆಧಾರಿತ ಈ ಚಿತ್ರ ನಿರ್ಮಾಣಗೊಳ್ಳಲಿದೆ. ದಂಡಿ ಸ್ವಾತಂತ್ರ್ಯ ಚಳುವಳಿ ಹಿಂಸಾರೂಪ ತಳೆದಾಗ ಕ್ರಾಂತಿಕಾರಿಯಂತೆ ಕಾಣಿಸಿಕೊಂಡು ಕೊನೆಗೆ ಜಿಲ್ಲೆಯಲ್ಲಿ ನಡೆದ ಅಹಿಂಸಾತ್ಮಕ ಜಂಗಲ್ ಸತ್ಯಗ್ರಹ ಕಾನೂನುಭಂಗ ಚಳುವಳಿ, ಉಪ್ಪಿನ ಸತ್ಯಾಗ್ರಹ ಮೊದಲಾದವುಗಳಿಂದ ಪ್ರೇರಣೆಗೊಂಡು ಗಾಂಧೀಜಿ ಅಹಿಂಸಾಮಾರ್ಗದಲ್ಲಿ ನಡೆಯುವುದು ಚಿತ್ರದ ಕಥಾವಸ್ತು ನಾಯಕರನ್ನು ಎಳೆಯಾಗಿಟ್ಟುಕೊಂಡು ಜಿಲ್ಲೆಯಲ್ಲಿ ನಡೆದ ಎಲ್ಲಾ ಹೋರಾಟಗಳ ಪ್ರಮುಖ ಘಟ್ಟಗಳು ಚಿತ್ರದಲ್ಲಿ ಮೂಡಿಬರಲಿದೆ. ಎಂದರು
ಬೆಂಗಳೂರಿನ ಕಲ್ಯಾಣಿ ಪ್ರೋಡಕ್ಷನ್ ಸಂಸ್ಥೆಯಮುಖ್ಯಸ್ಥರು ಚಿತ್ರ ನಿರ್ಮಾಪಕರಾದ ಉಷಾರಾಣಿ ಎಸ್ ಸಿ. ಮಾತನಾಡಿ ಹೆಸಾರಂತ ನಿರ್ದೇಶಕ ಹಲವು ರಾಷ್ಟ್ರಿಯ ಪ್ರಶಸ್ತಿಗಳನ್ನು ಪಡೆದ ವಿಶಾಲ್ ರಾಜ್ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಕಡಲ ತೀರ ಗ್ರಾಮಿಣ ಭಾಗ ನದಿತೀರದಲ್ಲಿ ಹೋರಾಟಕಾಲ ವಾತಾವರಣ ಮತ್ತು ಸೇಟ್ಗಳನ್ನು ನಿರ್ಮಿಸಿಕೊಂಡು 30 ದಿನಗಳ ಒಂದೆ ಶೆಡ್ಯುಲ್ ನಲ್ಲಿ ಚಿತ್ರ ಮುಗಿಸುವ ಗುರಿ ಇದೆ. ಹೆಸಾರಂತ ನಟಿ ತಾರಾ, ನಟ ಸುಚೇಂದ್ರ ಪ್ರಸಾದ್, ನಟ ಯುವಾನ್ ದೇವ್, ನಟಿ ಶಾಲಿನಿ ಭಟ್ ಮತ್ತು ಸ್ಥಳಿಯರಾದ ದಾಮೋದರ್ ನಾಯ್ಕ, ಪ್ರಮುಖ ಪಾತ್ರಗಳಿದ್ದು ಇತರ ಪಾತ್ರಗಳಿಗೆ ಸ್ಥಳಿಯರನ್ನೆ ಆಯ್ಕೆ ಮಾಡಲಾಗಿದೆ. ಚಿತ್ರ ಜಿಲ್ಲೆಯ ವಿವಿಧ ಭಾಗದಲ್ಲಿ ಚಿತ್ರಕರಣಕ್ಕೆ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು, ಸಾರ್ವಜನಿಕರು ಕಲಾವಿದರು ಸಹಕರಿಸಿ ಬೆಂಬಲಿಸುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರದ ನಟ ಯುವಾನ್ ದೇವ್, ಚಿತ್ರನಟಿ ಶಾಲಿನಿ ಭಟ್, ಜಿಲ್ಲೆಯ ಹೆಸರಾಂತ ರಂಗಭೂಮಿ ಕಲಾವಿದ ದಾಮೋದರ್ ನಾಯ್ಕ ಛಾಯಗ್ರಾಹಕ ವೆಂಕಟೇಶ್, ಬಾಲ ಕಲಾವಿದೆ ದಿಯಾ ವೆಂಕಟೇಶ ಮೇಸ್ತ ಕಲಾವಿದರು ಹಾಜರಿದ್ದರು.
Leave a Comment