ಹೊನ್ನಾವರ: ವಿಶ್ವರಾಮಕ್ಷತ್ರೀಯ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಧರ ನಾಯ್ಕ್ ಇವರಿಗೆ ಮಂಕಿ ಕೊಕ್ಕೆಶ್ವರ ದೇವಸ್ಥಾನದ ಸೇವಾಸಮಿತಿಯವರು ಸನ್ಮಾನಿಸಿ ಗೌರವಿಸಿದರು. ಅವರು ತಾಲೂಕಿನ ಮಂಕಿ ಕೊಕ್ಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ದೇವಸ್ಥಾನದ ಸೇವಾಸಮಿತಿಯವರು ಶಾಲುಹೊದಿಸಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ಶಶಿಧರ ನಾಯ್ಕ ಮಾತನಾಡಿ ನಮ್ಮ ಸಮಾಜದ ಹೆಮ್ಮೆಯ ಪ್ರತೀಕವಾದ ಈ ದೇಗುಲವಾಗಿದೆ.

ಇತ್ತೀಚೀಗೆ ಅದ್ದೂರಿ ರಾಜ್ಯಮಟ್ಟದ ಸಮ್ಮೇಳನ ಮಾಡಿದ ಹಿರಿಮೆ ಈ ಸ್ಥಳಕ್ಕಿದ್ದು, ಸಮಾಜದ ಪ್ರತಿಯೋರ್ವರು ವರ್ಷಕ್ಕೊಮ್ಮೆ ಈ ದೇಗುಲಕ್ಕೆ ಭೇಟಿ ನೀಡಬೇಕು ಮತ್ತು ಸಮಾಜದ ಕಾರ್ಯಕ್ರಮಗಳಿಗೆ ಭಾಗವಹಿಸಿ ಸಲಹೆ ಪೋತ್ಸಾಹ ನೀಡುವಂತೆ ಸಮಾಜ ಬಾದಂವರಿಗೆ ಕರೆನೀಡಿದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಎಚ್.ಆರ್.ನಾಯ್ಕ, ಕಾರ್ಯದರ್ಶಿ ರತ್ನಾಕರ ನಾಯ್ಕ, ಪ್ರಮುಖರಾದ ಆನಂದು ನಾಯ್ಕ ಉದಯ ನಾಯ್ಕ, ಹನುಮಂತ ನಾಯ್ಕ, ಅಣ್ಣಪ್ಪ ನಾಯ್ಕ, ರವಿ ನಾಯ್ಕ, ಗಂಗಾಧರ ನಾಯ್ಕ, ಸುಬ್ಬು ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment