ಹೊನ್ನಾವರ; ಇಂದು ಗರ್ಭಿಣೆ ಮಹಿಳೆ ಹಾಗೂ ಮಕ್ಕಳ ಆರೊಗ್ಯದಿಂದ ಇದ್ದಾರೆ ಅಂದರೆ, ಅದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ ಎಂದು ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಮೇಧಾ ನಾಯ್ಕ ಅಭಿಪ್ರಾಯಪಟ್ಟರು. ಅವರು
ಪಟ್ಟಣದ ಅಂಬೇಡ್ಕರ್ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಯೋಜಿಸಿದ ಪೆÇೀಷಣ್ ಪಕ್ವಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಹಲವು ಸೌಲಭ್ಯಗಳನ್ನು ಗ್ರಾಮೀಣ ಪಟ್ಟಣ ಭಾಗವೆನ್ನದೆ ಎಲ್ಲಡೆ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿರುದರಲ್ಲಿ ಅಂಗನವಾಡಿ ನೌಕಕರರು ಒರ್ವರು. ಇಂತಹ ಕಾರ್ಯಕ್ರಮದ ಮೂಲಕ ಸೀಮಂತ, ಹುಟ್ಟುಹಬ್ಬ, ಆರೊಗ್ಯ ತಪಾಸಣೆಯಂತಹ ಹಲವು ಕಾರ್ಯಕ್ರಮ ಆಯೋಜಿಸಿರುವುದರಿಂದ ಮಹಿಳೆಯರಿಗೆ ಪೋತ್ಸಾಹ ನೀಡಿದಂತಾಗುತ್ತದೆ ಎಂದರು.
ಪೆÇೀಷಕಾಂಶಯುಕ್ತ ಆಹಾರ ಬಳಸುವ ಕ್ರಮ ಹಾಗೂ ಆರೊಗ್ಯದಿಂದರಲು ಕೈಗೊಳ್ಳಬೇಕಾದ ಕ್ರಮದ ಕುರಿತು ರೂಪಾ ಆರ್ಚಾಯ ವಿಶೇಷ ಉಪನ್ಯಾಸ ನೀಡಿದರು.
ಗರ್ಭಿಣೆ ಮಹಿಳೆಯರಿಗೆ ವೇದಿಕೆಯಲ್ಲಿ ಅರಿಶಿಣ ಕುಂಕುಮ ನೀಡಿ ಸೀಮಂತ ಮಾಡಲಾಯಿತು. ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ವಿತರಿಸಲಾಯಿತು.5 ವರ್ಷದೊಳಗಿನ ಮಕ್ಕಳ ತೂಕ ಹಾಗೂ ಎತ್ತರ ಪರಿಕ್ಷೆ ನಡೆಲಾಯಿತು.
ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಸರ್ಕಾರದ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮುಗಿಸದೇ ಅರ್ಥಪೂರ್ಣವಾಗಿ ಮಾಡಿದ್ದೀರಿ. ಈ ಕಾರ್ಯಕ್ರಮ ನೋಡಿದರೆ ಖಾಸಗಿಯವರಿಗೆ ಸೆಡ್ಡು ಹೊಡೆಯುವ ರೀತಿ ಆಯೋಜನೆ ಮಾಡಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕೋರೋನಾ ಸಮಯದಲ್ಲಿ ಸರ್ಕಾರದ ಹಲವು ಸೌಲಭ್ಯವನ್ನು ಜೀವದ ಹಂಗು ತೊರೆದು
ತಲುಪಿಸುವ ಕಾಐ ಮಾಡಿದ್ದೀರಿ ಎಂದರು.
ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ವಿರುಪಾಕ್ಷಪ್ಪ ಪಾಟೀಲ ಪ.ಪಂ. ಸದಸ್ಯೆ ನಿಶಾ ಶೇಟ್, ನಾಗರತ್ನ ಕೋನೇರಿ, ಶ್ರೀಪಾದ ನಾಯ್ಕ ಜಯಶ್ರೀ ನಾಯ್ಕ ಉಪಸ್ಥಿತರಿದ್ದರು
Leave a Comment