ಹೊನ್ನಾವರ: “ಸಂಘಟನೆಯಲ್ಲಿ ಒಗ್ಗಟ್ಟಿದ್ದರೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಸಂಘಟನೆಯಿಂದ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಅಳ್ಳಂಕಿ ಡಾ.ಬಿ.ಆರ್ ಅಂಬೇಡ್ಕರ್ ಹಳ್ಳೇರ್ ಸಮಾಜ ಮತ್ತು ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಮಾದರಿಯಾಗಿದೆ” ಎಂದು ಹೆರಂಗಡಿ ಗ್ರಾ.ಪಂ ಅಧ್ಯಕ್ಷ ಪ್ರಮೋದ್ ನಾಯ್ಕ ಅಭಿಪ್ರಾಯಪಟ್ಟರು.
ತಾಲೂಕಿನ ಅಳ್ಳಂಕಿಯ ಡಾ.ಬಿ.ಆರ್ ಅಂಬೇಡ್ಕರ್ ಹಳ್ಳೇರ್ ಸಮಾಜ ಮತ್ತು ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘದ ಸಭಾಭವನದಲ್ಲಿ ಹೆರಂಗಡಿ ಗ್ರಾಮ ಪಂಚಾಯತ ವತಿಯಿಂದ ವಸೂಲಾದ ತೆರಿಗೆಯಲ್ಲಿ ಪರಿಶಿಷ್ಟ ಜಾತಿ ಅನುದಾನದಡಿಯಲ್ಲಿ ನೀಡುವ ಸೌಲಭ್ಯ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಅವರು ಮಾತನಾಡಿದರು. ಸರ್ಕಾರದಿಂದ ಬರುವ ಎಲ್ಲಾ ಸೌಕರ್ಯ,ಸೌಲಭ್ಯಗಳನ್ನು ಹಳ್ಳೇರ್ ಸಮಾಜವು ದುರುಪಯೋಗಪಡಿಸಿಕೊಳ್ಳದೇ ಸದ್ಬಳಕೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಸಮಾಜ ಉತ್ತಮವಾಗಿ ರೂಪೂಗುಳ್ಳುತ್ತಿದೆ. ತಮ್ಮ ಸಮುದಾಯದ ಕ್ರಿಡಾಪಟು ಒರ್ವ ಮ್ರತನಾದರು ಆತನ ಹೆಸರಲ್ಲಿ ಕ್ರೀಡೆ ಆಯೋಜಿಸುವ ಮೂಲಕ ಅದರಿಂದ ಒಟ್ಟೂಗೂಡಿದ ಹಣವನ್ನು ಆತನ ಕುಟುಂಬಕ್ಕೆ ನೀಡುವ ಮೂಲಕ ನೆರವಾಗಿರುವುದು ಶ್ಲಾಘನೀಯ ಎಂದರು.
ಹೆರಂಗಡಿ ಗ್ರಾಮ ಪಂಚಾಯತನಿಂದ ಪರಿಶಿಷ್ಟ ಕಲ್ಯಾಣ ನಿಧಿಯಿಂದ ಹಳ್ಳೇರ್ ಸಮಾಜ ಮಂದಿರಕ್ಕೆ ಬಂದಂತಹ ಗ್ರೈಂಡರ್,ಉಟದ ಟೆಬಲ್,ಒಲೆ ಮತ್ತಿತರ ಪರಿಕರವನ್ನು ಗ್ರಾಮ ಪಂಚಾಯತ ವತಿಯಿಂದ ಸಂಘಕ್ಕೆ ಹಸ್ತಾಂತರ ಮಾಡಲಾಯಿತು.
ತಾಲೂಕ ಯುವ ಒಕ್ಕೂಟದ ಅಧ್ಯಕ್ಷ ಹಾಗೂ ಹೆರಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿನಾಯಕ್ ನಾಯ್ಕ ಮಾತನಾಡಿ ಅಳ್ಳಂಕಿಯ ಡಾ.ಬಿ.ಆರ್ ಅಂಬೇಡ್ಕರ್ ಹಳ್ಳೇರ್ ಸಮಾಜ ಮತ್ತು ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ತಾಲೂಕಿನ ಅತ್ಯಂತ ಕ್ರಿಯಾಶೀಲ ಸಂಘ ಎಂದು ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಚಾರ. ಸಂಘವು ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರಿಸದೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದು ಅಭಿನಂದನಿಯ. ನಿಧನರಾದವರ ಹೆಸರಿನಲ್ಲಿ ಕ್ರೀಡೆ ಆಯೋಜಿಸಿ ಕುಟುಂಬಕ್ಕೆ ನೆರವಾಗಿರುವುದು ಒಂದು ಉತ್ತಮ ವಿಚಾರ ಎಂದರು.
ಸಂಘದ ಸಕ್ರಿಯ ಸದಸ್ಯರು ಹಾಗೂ ಕ್ರಿಡಾಪಟುವಾಗಿದ್ದ ನಿಧನರಾದ ಜಗದೀಶ್ ನಾರಾಯಣ ಹಳ್ಳೇರ್ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಿಸಿದರು.ಅವರ ಸಹಾಯರ್ಥ ನಡೆಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟೂಗೂಡಿದ ಹತ್ತುಸಾವಿರ ಹಣವನ್ನು ‘ಅಂಬೇಡ್ಕರ್ ‘ಎ’ಅಳ್ಳಂಕಿ’ ತಂಡವು ದಿವಂಗತ ಜಗದೀಶ್ ಅವರ ಕುಟುಂಬ ವರ್ಗಕ್ಕೆ ನೀಡಿದರು.
ಮಾಜಿ ಗ್ರಾಮ ಪಂಚಾಯತ ಸದಸ್ಯರು ಹಾಗೂ ಸಂಘದ ಅಧ್ಯ ಕ್ಷರಾದ ಜಿ.ಟಿ ಹಳ್ಳೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹೆರಂಗಡಿ ಗ್ರಾ.ಪಂ ಪಿಡಿಓ ಪಿಡಿಒ ಉದಯ್ ಬಾಂದೇಕರ್ಸದಸ್ಯರಾದ ಗಣೇಶ ಹಳ್ಳೇರ್ ಮೇರಿ ಡಾಯಸ್ ,ಶಾರದಾ ಹಳ್ಳೇರ, ಸಮಾಜದ ಮುಖಂಡರಾದ ಈರಾ, ಹಳ್ಳೇರ,ನಾಗರಾಜ.ಗೌಡ,ಅಣ್ಣಪ್ಪ ಹಳ್ಳೇರ,ಗಣೇಶ ಹಳ್ಳೇರ,ಮಾರುತಿ.ಹಳ್ಳೇರ ಹಾಜರಿದ್ದರು.
Leave a Comment