ಭಟ್ಕಳ: ತಾಲೂಕಿನ ಬೆಳ್ನಿ ಯಲ್ಲಿ 20 ಅಡಿ ತೆರೆದ ಬಾವಿಯಲ್ಲಿ ಬಿದ್ದ ಆಕಳನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದರೆ
ತಾಲೂಕಿನ ಬೆಳ್ನಿಯಲ್ಲಿ ಅಹ್ಮದ್ ಎಜೆನ್ಸಿ ಯವರಿಗೆ ಸೇರಿದ ಜಾಗದಲ್ಲಿ 20ಅಡಿ ಆಳದ ತೆರೆದ ಬಾವಿಯಲ್ಲಿ ಹಸು ಬಿದ್ದಿದ್ದು ತಕ್ಷಣ ಅಲ್ಲಿನ ಸಾರ್ವಜನಿಕ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದು ಕರೆಗೆ ಸ್ಪಂದಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬಾವಿಯಿಂದ ಆಕಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ಯಶಸ್ವಿ ಯಾಗಿದ್ದರೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಎಸ್ ರಮೇಶ, ಮಾರುತಿ ಆಚಾರಿ,ಶಿವಪ್ರಸಾದ ನಾಯ್ಕ, ನಾರಾಯಣ ಪಟಗಾರ, ಮಾರುತಿ ನಾಯ್ಕ, ಚೇತನ ಪಾಟೀಲ,ಸಚಿನ ರಾಠೋಡ,ಶಂಕರ ಲಮಾಣಿ ಗ್ರಹರಕ್ಷಕ ಅರುಣ ಮುಂತಾದವರು ಉಪಸ್ಥಿತರಿದ್ದರು.
Leave a Comment