ಹೊನ್ನಾವರ; ತಾಲೂಕಿನ ಕರ್ಕಿ ಗ್ರಾಮದ ಕೆಳಗಿನ ಕೇರಿಯಲ್ಲಿನ ಮನೆಯೊಂದಕ್ಕೆ ಹೋಗುವ ಕಾಲು ದಾರಿಯ ಪಕ್ಕದಲ್ಲಿದ್ದ ಹೆಬ್ಬಾವಿನ ಮರಿಯೊಂದು ತನ್ನ ಹೊಟ್ಟೆಯ ಅಳತೆ ಮೀರಿದ ಆಹಾರ ತಿಂದು ಒದ್ದಾಡುತ್ತಿತ್ತು.
ಇದರಿಂದ ಹೊಟ್ಟೆಯೊಳಗೆ ಕರಗಿಸಿಯೂ ಕೊಳ್ಳಲಾಗದಇತ್ತ ಹೊರಗೂ ಸಹ ಹಾಕಲಾಗದೆ ಬಹಳ ಹೊತ್ತಿನಿಂದಲೂ ಇದ್ದ ಸ್ಥಳದಲ್ಲಿ ಹೊರಳಾಡುತ್ತಾ ಯಾತನೆ ಪಡುತ್ತಿತ್ತು. ಇದನ್ನು ಗಮನಿಸಿದ ರವಿ ಮುಕ್ರಿ ಮತ್ತು ಇನ್ನಿಬ್ಬರು ಗೆಳೆಯರು ಆ ಹೆಬ್ಬಾವಿನ ಮರಿಯನ್ನು ಕಂಡು ನಂತರ ಅದನ್ನು ಯಾರು ಓಡಾಡದ ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ ರಕ್ಷಣೆ ಮಾಡಿದ್ದಾರೆ.
Leave a Comment