ಹೊನ್ನಾವರ: ಡಾ.ಬಿ.ಆರ್ ಅಂಬೇಡ್ಕರ್ರವರ 130ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ಎಸ್. ಸಿ. ಮೋರ್ಚಾ ಆಯೋಜಿಸಿದ ಭೀಮಯಾತ್ರೆಗೆ ಹೊನ್ನಾವರದಲ್ಲಿ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ ಚಾಲನೆ ನೀಡಿದರು.
ಜಾಥಾ ವಾಹನದ ಅಂಬೇಡ್ಕರ್ ಪ್ರತಿಮೆಗೆ ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ಮಾಲಾರ್ಪಣೆ ಮಾಡಿ ಘೋಷಣೆ ಮೊಳಗಿಸಿದರು. ಜಾಥಾ ಬಗ್ಗೆ ಮಾಹಿತಿ ನೀಡಿದ ಗ್ರಾ.ಪಂ. ಸದಸ್ಯ ಗಣೇಶ ಹಳ್ಳೇರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೊಡುಗೆ ಅನನ್ಯವಾದದು. ಅವರ ತತ್ವಸಿದ್ದಾಂತಗಳನ್ನು ಪಾಲಿಸುದರ ಜೊತೆ ದಿವ್ಯಚೇತನವನ್ನು ಸ್ಮರಿಸಬೇಕಿದೆ. ಮುಂದಿನ ಪೀಳಿಗೆಗೆ ಇವರ ಕೊಡುಗೆಯನ್ನು ಪರಿಚಯಿಸುವ ದೃಷ್ಠಿಯಿಂದ ಈ ಭೀಮಯಾತ್ರೆ ಎನ್ನುವ ಜಾಥಾ ಆಯೋಜಿಸಲಾಗಿದೆ.ಕಾರವಾರ ಅಂಕೋಲಾ ಕುಮಟಾದಲ್ಲಿ ನಿನ್ನೆ ನಡೆದಿದ್ದು, ಇಂದು ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಭಟ್ಕಳಕ್ಕೆ ಬಿಳ್ಕೂಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ, ಸದಸ್ಯ ನಾಗರಾಜ ಭಟ್, ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷ ಉದಯಕುಮಾರ ಬ.ಶೆಟ್ಟಿ, ಮುಖಂಡರಾದ ಎಂ.ಎಸ್.ಹೆಗಡೆ ಕಣ್ಣಿ, ದತ್ತಾತ್ರೆಯ ಮೇಸ್ತ, ಉಮೇಶ ಸಾರಂಗ, ಜಯಂತ ನಾಯ್ಕ, ಯೋಗೀಶ ಮೇಸ್ತ, ಕಾರ್ಯಕರ್ತರು ಹಾಜರಿದ್ದರು.
Leave a Comment