ಗೋಣಿಕೊಪ್ಪಲು (ಕೊಡಗು ಜಿಲ್ಲೆ) : ತಿತಿಮತಿ ಸಮೀಪದ ದೇವರಪುರ ಪಂಜಾಯಿತಿಗೆ ಒಳಪಡುವ ಹೆಬ್ಬಾಲೆ ಕಾಯಂಬೆಟ್ಟ ಎಸ್ಟೇಟ್ನಲ್ಲಿ ಮೂರು ಹಸುಗಳಿಗೆ ಗುಂಡಿಕ್ಕಿ, ಕತ್ತಿನ ಬಾಗವನ್ನು ಕೊಯ್ದು ಹತ್ಯೆ ಮಾಡಲಾಗಿದೆ. ಕಳೇಬರ ಅಲ್ಲೇ ಬಿಟ್ಟು ಹೋಗಿದ್ದು ಮಾಂಸಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ಹಸುಗಳು ಕಳ್ಳಿಚಂಡ ಗಣಪತಿ, ಸುಬ್ರ ಅವರಿಗೆ ಸೇರಿವೆ ಭಾನುವಾರ ಸಂಜೆ ಆರು ಗಂಟೆಗೆ ಎಸ್ಟೇಟ್ ಒಳಗೆ ಗುಂಡಿನ ಸದ್ದು ಕೇಳಿತು ಎಂದು ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಚೆಗೆ ಕೈಕೇರಿಯ ಗುಡ್ಡೆಮನೆ ಪ್ರಾಣೇಶ್, ಹಸು ಕಾಣೆಯಾಗಿದ್ದಾಗಿ ದೂರು ನೀಡಿದ್ದರು.
Leave a Comment