ಹೊನ್ನಾವರ : ಔಷಧಿ ವ್ಯಾಪಾರಿಗಳ ಅಶೋಷಿಯೇಸನ್ ವತಿಯಿಂದ ತಹಶಿಲ್ದಾರ ವಿವೇಕ ಶೇಣ್ವಿ ಮೂಲಕ ಅಗತ್ಯವಿರುವ ಔಷಧಿಗಳನ್ನು ವಿತರಿಸಿದರು. ಎರಡನೇ ಅಲೆ ತಾಲೂಕಿನಲ್ಲಿ ಕೆಲ ದಿನದಿಂದ ತಾಲೂಕಿನಲ್ಲಿ ಏರುಗತಿಯಲ್ಲಿದ್ದು, ಹೆಚ್ಚಿನ ಸೊಂಕಿತರು ಮನೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.
ಹೊಂ ಐಶೋಲೇಶನ್ ಕ್ವಾರಂಟೈನ್ ಆದ ರೋಗಿಗಳ ಚಿಕಿತ್ಸೆಗಾಗಿ ಬೇಕಾಗಿದ ಔಷಧಿಗಳಲ್ಲಿ ಉಂಟಾಗುತ್ತಿರುವ ಕೊರತೆಯ ಬಗ್ಗೆ ತಹಶೀಲ್ದಾರರು ಈ ಹಿಂದೆ ಚರ್ಚಿಸಿದ್ದರು. ತಕ್ಷಣ ಮನವಿಗೆ ಸ್ಪಂದಿಸಿದ ಸಂಘದವರು ಪ್ಯಾರೆಸಿಟಮಾಲ್, ಚಿಟ್ರೋಸಿನ್ ಮಾತ್ರೆಗಳು, ಕಾಫ್ ಸಿರಪ್ ಹಿಗೆ ಚಿಕಿತ್ಸೆಗೆ ಬೇಕಾದ 50 ಪ್ರತಿಶತಕ್ಕಿಂತ ಅಧಿಕ ಪ್ರಮಾಣದ ಔಷಧಗಳನ್ನು ಮಂಗಳವಾರ ಹಸ್ತಾಂತರಿಸಿದರು.ಮಾಧ್ಯಮದವರೊಂದಿಗೆ ಮಹೇಶ ಕಲ್ಯಾಣಪುರ ಮಾತನಾಡಿ ನಮ್ಮಲ್ಲಿ ಲಭ್ಯವಿರುವ ಔಷಧಿಗಳನ್ನು ವಿತರಿಸಿದ್ದು, ಮುಂದಿನ ದಿನದಲ್ಲಿಯೂ ಅಗತ್ಯವಿರುವ ಎಲ್ಲಾ ರೀತಿಯಲ್ಲಿಯೂ ಸಹಾಯ ಸಹಕಾರ ನೀಡಲು ಅಸೊಶಿಯೇಶನ್ ಸಿದ್ದವಿದೆ ಎಂದು ಭರವಸೆ ನೀಡಿದರು.ಈ ಸಂಧರ್ಬದಲ್ಲಿ ಅಧ್ಯಕ್ಷರಾದ ರಂಗರಾಯ್ ಕಾಮತ, ಜನಾರ್ಧನ್ ಶಾನಭಾಗ, ಕಿರಣ ಪ್ರಭು ಉಪಸ್ಥಿತರಿದ್ದರು.
Leave a Comment