ಭಟ್ಕಳ: ತಾಲೂಕಿನ ಬ್ಯೆಲೂರು ಗ್ರಾಮದ ನೀರಗದ್ದೆಯಲ್ಲಿ ವಿಷದ ಹಾವು ಕಚ್ಚಿ ಮಹಿಳೆಯೊರ್ವಳು ಮ್ರತಪಟ್ಟ ಘಟನೆ ವರದಿಯಾಗಿದೆ.ಮ್ರತ ಮಹಿಳೆಯನ್ನು ಜಾನಕಿ ರಮೇಶ ನಾಯ್ಕ (೩೭) ಎಂದು ಗುರುತಿಸಲಾಗಿದೆ.ಮಹಿಳೆಯು ಗದ್ದೆ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದ್ದು ತಕ್ಷಣ ಆಕೆಯನ್ನು ಮುರುಡೇಶ್ವರದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿಕ್ಸೆಗೆ ಸ್ಪಂದಿಸದ ಕಾರಣ ಆಕೆಯನ್ನು ಭಟ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಬರುತ್ತುವಾಗ ಮಾರ್ಗದ ಮದ್ಯೆ ಕೊನೆಯುಸಿರೆಳೆದಿದ್ದಾಳೆನ್ನಲಾಗಿದೆ.

Leave a Comment