ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ, ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಯಶ್ವಸಿಯಾಗಿ ಸಂಪನ್ನಗೊಂಡ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಉತ್ತರಕನ್ನಡ ಜಿಲ್ಲೆಯ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ರವರು ಹೊನ್ನಾವರ ತಾಲೂಕಿನ ಸಾಲ್ಕೋಡ್ ಹಾಗೂ ಕಡ್ಲೆ ಪಂಚಾಯತ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಸರ ಹಾಗೂ ಆಹಾರ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ನರೇಂದ್ರ ಮೋದಿಯವರ ನಾಯಕತ್ವದ ಸರ್ಕಾರ ಎರಡನೇ ಅವಧಿಯಲ್ಲಿ ಎರಡು ವರ್ಷ ಸಂಪನ್ನಗಳಿಸಿದ ನಮಗೆ ಒಂದು ವಿಶೇಷವಾದ ದಿನವಾಗಿದೆ. ಎರಡನೇ ಅವಧಿಯಲ್ಲಿ ಎರಡು ವರ್ಷ ಆಡಳಿತವನ್ನು ಬಹಳ ಅಚ್ಚುಕಟ್ಟಾಗಿ ಪೂರೈಸಿದೆ ಎಂಬ ವಿಷಯ ಭಾರತೀಯ ಜನತಾ ಪಾರ್ಟಿಯ ಪ್ರತಿಯೊಬ್ಬ ಕಾರ್ಯಕರ್ತರ ಮನದಾಳದ ಮಾತಾಗಿದೆ.2014 ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಅಧಿಕಾರ ಸ್ವೀಕರಿಸಿದ ನಂತರ 7 ವರ್ಷ ಕಳೆದಿದೆ, ಸಹಜವಾದ ಸಂದರ್ಭ ಆಗಿದ್ದರೇ ನಮ್ಮ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಬೇಟಿ ನೀಡಿ ಸರ್ಕಾರದ ಸಾಧನೆಯನ್ನು ತಿಳಿಸುವ ಕಾರ್ಯ ನಡೆಯುತಿತ್ತು. ಕಳೆದ ವರ್ಷ ವಿಶ್ವದಾದ್ಯಂತ ಪಸರಿಸಿದ ಕೋವಿಡ್-19 ನಂತಹ ಮಹಾಮಾರಿಯ ರೋಗದ ಸಂದರ್ಭದಲ್ಲಿ ನಮ್ಮ ದೇಶದ ನಾಗರಿಕರ ರಕ್ಷಣೆಗಾಗಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಆಡಳಿತ ನಡೆಸಿದೆ ಎಂಬ ಹೆಮ್ಮೆ ಪಡುವ ನಮಗೆ, ಸಂಭ್ರಮಿಸುವ ವಿಷಯವಾದರೂ ಸಂಭ್ರಮಪಡುವ ಸಮಯವಲ್ಲಾ, ಏಕೆಂದರೆ ಕಳೆದ ವರ್ಷ ಜಗತ್ತಿಗೆ ಪಸರಿಸಿದ ಕೋವಿಡ್-19 ಎಂಬ ಮಹಾಮಾರಿಯನ್ನು ತಡೆಯಲು ಜಗತ್ತಿನ ಮುಂದುವರಿದ ದೇಶಗಳಾದ ಅಮೇರಿಕಾ ಆಗಲಿ, ವೈದ್ಯಕೀಯ ವ್ಯವಸ್ಥೆಯಲ್ಲಿ ಅತ್ಯಂತ ಬಲಿಷ್ಠವಾದ ಯೂರೋಪಿನ ರಾಪ್ಟ್ರಗಳಾಗಬಹುದು ಕೊರೋನಾ ರೋಗವನ್ನು ನಿಯಂತ್ರಿಸುವಲ್ಲಿ ಹೆಣಗಾಡುವ ಸಂದರ್ಭದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನತೆಯ ರಕ್ಷಣೆಮಾಡುವಲ್ಲಿ ಬಹಳ ಉತ್ತಮ ಆಡಳಿತ ನೀಡಿದ್ದಾರೆ ಎಂಬುದು ಜನರ ಅಭಿಪ್ರಾಯವಾಗಿದೆ.
ಇಂತಹ ಸಂದರ್ಭದಲ್ಲಿ ನಾವು ಭಾರತೀಯ ಜನತಾ ಪಾರ್ಟಿಯ ಮೂಲಕ ಈ ದಿನವನ್ನು ಪಂಚಾಯತ ವ್ಯಾಪ್ತಿಯ, ಬೂತ್ ಮಟ್ಟದಲ್ಲಿ ಹಲವು ರೀತಿಯ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ, ಅವುಗಳಲ್ಲಿ ಮುಖ್ಯವಾಗಿ ಕೊರೋನಾ ವಾರಿಯರ್ಸಗಳಿಗೆ ಗೌರವ ಸಲ್ಲಿಸುವುದು, ಕೋವಿಡ್-19 ತಗುಲಿ ಮೃತ ಪಟ್ಟವರ ಕುಟುಂಬಗಳಿಗೆ ಬೇಟಿ ನೀಡಿ ಸಾಂತ್ವನ ಹೇಳುವುದು, ಆಹಾರ ಕಿಟ್ ನೀಡುವುದು, ನಗರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಗಿಡ ನೆಡುವ ಕಾರ್ಯ, ಮಾಸ್ಕ ವಿತರಣೆ, ಕಷಾಯ ಕುಡಿಯುವ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಹೀಗೆ ಹಲವು ರೀತಿಯ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.ಈ ಸಂದರ್ಬದಲ್ಲಿ ಜಿಲ್ಲಾ ಬಿಜಪಿ ಕಾರ್ಯದರ್ಶಿ ಎನ್.ಎಸ್.ಹೆಗಡೆ, ಮಂಡಲಧ್ಯಕ್ಷ ರಾಜೇಶ ಭಂಡಾರಿ, ಮಂಡಲ ಪ್ರಭಾರಿ ಶಿವಾನಿ ಶಾಂತರಾಮ, ಮುಗ್ವಾ ಶಕ್ತಿ ಕೇಂದ್ರದ ಅಧ್ಯಕ್ಷ ರವಿ ಹೆಗಡೆ, ರೈತ ಮೊರ್ಚಾ ಅಧ್ಯಕ್ಷ ಎನ್.ಎಸ್.ಹೆಗಡೆ ಹಾಜರಿದ್ದರು.
Leave a Comment