ಭಟ್ಕಳ: ಭಟ್ಕಳ ಶಾಸಕರಿಗೆ ತಿಳುವಳಿಕೆ ಕಡಿಮೆ ಹೊಸದಾಗಿ ಆಯ್ಕೆಯಾದ ಶಾಸಕರಾಗಿದ್ದಕ್ಕೆ ಅನುಭವವಿಲ್ಲ ಹಾಗೂ ಪ್ರಚಾರಕ್ಕೆ ಹೇಳಿಕೆ ನೀಡಿರಬಹುದು ಎಂದು ಮಾಜಿ ಉಸ್ತುವಾರಿ ಸಚಿವ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಅವರ ಹೇಳಿಕೆಗೆ ಶಾಸಕ ಸುನೀಲ ನಾಯ್ಕ ನೀವೇ ಹೆದ್ದಾರಿ ಅಗಲೀಕರಣದ ಗೊಂದಲಕ್ಕೆ, ಜನರಿಗೆ ಸಮಸ್ಯೆಯಾಗಿದಕ್ಕೆ ಹೊಣೆಗಾರರು, ಹಾಗೂ ನಿಮ್ಮ ರಾಜಕೀಯ ಅನುಭವಕ್ಕೆ ಇಷ್ಟು ದಿನದಲ್ಲಿ ಜಿಲ್ಲೆಯಲ್ಲಿ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬಹುದಾಗಿತ್ತು ಎಂದು ತಿರುಗೇಟು ನೀಡಿದ್ದಾರೆ.
ಅವರು ಮಂಗಳವಾರದಂದು ಸರಕಾರಿ ಆಸ್ಪತ್ರೆಯಲ್ಲಿ ಭಟ್ಕಳ ಮತ್ತು ಹೊನ್ನಾವರ ತಾಲೂಕು ಆಸ್ಪತ್ರೆಗಳಿಗೆ ತಮ್ಮ ಪ್ರಾದೇಶಿಕಾಭಿವೃದ್ಧಿ ನಿಧಿ ಯೋಜನೆಯಲ್ಲಿ ನೀಡಿದ ಎರಡು ಅಂಬ್ಯುಲೆನ್ಸ ಹಸ್ತಾಂತರಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
‘ದೇಶಪಾಂಡೆ ಅವರು ಜಿಲ್ಲೆಯ ಹಿರಿಯ ಮುತ್ಸದಿಗಳು. ಇವರೇ ಒಪ್ಪಿಕೊಂಡಿರುವಂತೆ ನಿಮ್ಮ ಅವಧಿಯಲ್ಲಿ ಇಲ್ಲಿನ ಮಾಜಿ ಶಾಸಕರು ನಿಮ್ಮ ಮುಖಂಡರಿಂದಲೇ ಜನರಿಗೆ ಸಮಸ್ಯೆ ಆಗಿದೆ. ಇದರಲ್ಲಿ ನನ್ನ ವೈಯಕ್ತಿಕ ವಿಚಾರ ಏನು ಇಲ್ಲ. ನನಗೆ ಅನುಭವವಿಲ್ಲ ಹಾಗಿದ್ದರೆ ಎಲ್ಲ ಗೊತ್ತಿರುವ ನೀವುಗಳೇ ಈ ರೀತಿ ಜನರಿಗೆ ತೊಂದರೆ ಕೊಟ್ಟಿರುವ ಕಾರಣ ಏನು. ಇದೇ ಮಾಜಿ ಶಾಸಕರು ಶಿರಾಲಿಯಲ್ಲಿ ನಡೆದ ರಸ್ತೆ ಅಗಲೀಕರಣದ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ನೆನಪಿದೆಯಾ? ನೀವೇ ಬೆಳೆಸಿರುವ ಕೂಸುಗಳಿವರೆಲ್ಲರು ಎಂದು ತಿರುಗೇಟು ನೀಡಿದರು.
ನನಗೆ ಪ್ರಚಾರದ ಅವಶ್ಯಕತೆ ಇಲ್ಲ. ಜನರ ಸೇವೆಗೆ ನಾನು ಬಂದಿದ್ದು ಆ ಕಾರಣದಿಂದ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಆಡದೇ ಮಾಡುವವನು ರೂಡಿಯಲ್ಲಿ ಉತ್ತಮನು ಎಂಬ ಮಾತಿನಂತೆ ಕ್ಷೇತ್ರದಲ್ಲಿ ನನ್ನಿಂದಾಗುವ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದೇನೆ. ಸದ್ಯ ರಸ್ತೆ ಅಗಲೀಕರಣದಿಂದ ಭಟ್ಕಳದ ಪರಿಸ್ಥಿತಿ ಅವಲೋಕಿಸಿ. 45 ಮೀ. ರಸ್ತೆ ಅಗಲೀಕರಣವೂ ಆದೇಶವಾಗಿದ್ದನ್ನ 30 ಮೀ. ಗೆ ಬದಲಾಯಿಸುತ್ತೀರಿ ಎಂದರೆ ಇದರ ಬಗ್ಗೆ ಜನರಿಗೆ ನೀವೆ ಉತ್ತರಿಸಬೇಕು ಎಂದರು.
ನನಗೆ ಅನುಭವವಿಲ್ಲ ಆದರೆ ದಾಖಲೆ ಸಮೇತ ಬಂದಿದ್ದಲ್ಲಿ ನಿಮ್ಮೆಲ್ಲ ತಪ್ಪನ್ನ ನಾನು ಸಹ ದಾಖಲೆ ಸಹಿತ ನಿಮ್ಮ ಮುಂದೆ ಬಂದು ಕುಳಿತುಕೊಳ್ಳುವೆ. ನಾನು ವಯಸ್ಸಿನಲ್ಲು ಅನುಭವದಲ್ಲು ಚಿಕ್ಕವನು ಆದರೆ ತಪ್ಪನ್ನು ಎತ್ತಿ ಹಿಡಿಯಲು ಇದ್ಯಾವುದು ಗಣನೆಗೆ ಬರುವುದಿಲ್ಲ. ಸದ್ಯ ಹೆದ್ದಾರಿ ಅಗಲೀಕರಣದ ಸಂಪೂರ್ಣ ಹೊಣೆಗಾರಿಕೆ ಆರ್.ವಿ. ದೇಶಪಾಂಡೆ ಎಂಬುದನ್ನು ಪುನರುಚ್ಚರಿಸಲಿದ್ದೇನೆ ಎಂದರು.
ಮೊನ್ನೆ ತಾನೇ ಭಟ್ಕಳಕ್ಕೆ ಬಂದು ಮಾಸ್ಕ, ಮೆಡಿಸಿನ್ ಹಾಗೂ ಆಕ್ಸಿಜನ್ ಸಿಲಿಂಡರ್ ವಿತರಣೆಗೆ ಹಳಿಯಾಳದಿಂದ ಬಂದಿದ್ದು ತಮ್ಮ ಪ್ರಚಾರಕ್ಕೆ ಅಲ್ಲವೇ.? ಇಲ್ಲಿನ ನಿಮ್ಮ ಕಾರ್ಯಕರ್ತರ ಮುಖೇನಾ ನೀಡಬಹುದಾಗಿದ್ದರು ತಾವು ಕುದ್ದು ಬಂದಿದ್ದು ಯಾಕೆಂಬುದಕ್ಕೆ ಉತ್ತರ ನಿಮ್ಮ ಬಳಿಯೇ ಇದೆ.
ನಿಮ್ಮಲ್ಲಿನ ರಾಜಕೀಯ ಶಕ್ತಿಗೆ ಹಿರಿತನಕ್ಕೆ 35 ವರ್ಷದ ಆಳಿದ್ದರು ನಮ್ಮ ಕೊಡುಗೆಯಾಗಿ ಜಿಲ್ಲೆಯಲ್ಲಿ ಇಷ್ಟು ವರ್ಷದಲ್ಲಿ ಎರಡು ಸೂಪರ ಸ್ಪೇಷಾಲಿಟಿ ಆಸ್ಪತ್ರೆ ತೆರೆದು ಜನರ ಸೇವೆ ಮಾಡಬಹುದಾಗಿತ್ತು ಆದರೆ ಅವರು ಏನು ಮಾಡಿದ್ದಾರೆಂಬುದು ಜನರಿಗೆ ತಿಳಿದಿದೆ. ಈಗಲು ನಿಮಗೆ ಎರಡು ಆಸ್ಪತ್ರೆಗೆ ನಿರ್ಮಾಣ ಮಾಡುವ ಶಕ್ತಿಯಿದೆ ಉಚಿತವಾಗಿ ಅಲ್ಲದಿದ್ದರು ಜನರಿಗೆ ಆಸ್ಪತ್ರೆ ಬೇಕಿದೆ ಅದರ ಬಗ್ಗೆ ಗಮನ ಹರಿಸುತ್ತೀರಿ ಎಂದು ತಿಳಿದುಕೊಂಡಿದ್ದೇನೆ ಎಂದು ಪ್ರತ್ಯುತ್ತರಿಸಿದರು.
Leave a Comment