ಭಟ್ಕಳ: ಕಳೇದ ವಾರ 13 ರಷ್ಟಿದ್ದ ಫಾಸಿಟಿವ್ ದರ ಇಂದು 6ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಕೋವಿಡ್ ಇಳಿಮುಖ ಕಾಣುತ್ತಿದ್ದು, ಪ್ರತಿ ಗ್ರಾಮ ಪಂಚಾಯ್ತಿಯನ್ನು ಕೋವಿಡ್ ಮುಕ್ತ ಮಾಡಲು ಕ್ರಮ ವಹಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭುಡವಾರ ಸಂಜೆ ಹೇಳಿದರು .
ಜಿಲ್ಲೆಯಲ್ಲಿ ಅರಂಭದಲ್ಲಿಯೇ ಬೆಂಗಳೂರಿನಿಂದ ಬಂದಂತಹ ಕುಟುಂಬಗಳನ್ನು ಗುರುತಿಸಿ ಕೋವಿಡ್ ಪರೀಕ್ಷೆಗೊಳಪಡಿಸಿದ ಕಾರಣ ಹೆಚ್ಚು ಕೇಸ್ ದಾಖಲಾಗಲಿಲ್ಲ. ಅದರೆ ಪರೀಕ್ಷೆ ವರದಿ ಬರಲು ತಡವಾದ ಕಾರಣ ಫಾಸಿಟಿವ್ ದರ ಹೆಚ್ಚಾಯಿತು. ಅದರೆ ಕೇಸ್ ಜಾಸ್ತಿ ಇರದ ಕಾರಣ ಬೇರೆ ಜಿಲ್ಲೆಯ ರೀತಿಯಲ್ಲಿ ನಮಗೆ ಹಾಸಿಗೆ, ಆಮ್ಲಜನಕಗಳ ಕೊರತೆ ಅಗಲಿಲ್ಲ ಎಂದ ಅವರು ಜಿಲ್ಲೆಯಲ್ಕಿ ಪ್ರತಿ ಗ್ರಾಮ ಪಂಚಾಯ್ತಿ ಕೋವಿಡ್ ಮುಕ್ತ ಮಾಡಲು ಮಾರ್ಗದರ್ಶನ ನೀಡಲಾಗಿದೆ. ನಾವು ಖುದ್ದು ಸ್ಥಳ ಪರಿಶೀಲನೆ ಮಾಡಿ ಅಗಬೇಕಾದ ಕೆಲಸಗಳ ಬಗ್ಗೆ ಸೂಚನೆ ನೀಡಿದ್ದೇವೆ. ಜಿಲ್ಲೆಯಲ್ಲಿ ಫಾಸಿಟಿವ್ ದರ ಇಳಿಮುಖವಾಗಿದೆ ಎಂದು ಜನರು ನಿರ್ಲಕ್ಷ್ಯ ಮಾಡುವುದು ಬೇಡಾ. ಸೋಂಕಿನ ಲಕ್ಷಣ ಇದ್ದರೆ ತಪಾಷಣೆ ಮಾಡಿಸಿಕೊಳ್ಳಿ ಎಂದರು.
ಕೋವಿಡ್ ಪರೀಕ್ಷೆಗಾಗಿ ಹೆಚ್ಚುವರಿ ಘಟಕವನ್ನು ಶಿರಸಿಯಲ್ಕಿ ಸ್ಥಾಪನೆ ಮಾಡಲಾಗಿದೆ ಎಂದರು. ಭಟ್ಕಳದಲ್ಲಿ ಲಸಿಕೆ ನೀಡಲು ಎಲ್ಲಾ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅದ್ಯತೆಯ ಮೇರೆಗೆ ಹಂತಹಂತವಾಗಿ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರು. ಮೊದಲನೇ ಲಸಿಕೆ ಪಡೆದ ಸಾರ್ವಜನಿಕರು ಅವಧಿ ಮುಗಿದರೂ 2ನೇ ಲಸಿಕೆ ತೆಗೆದುಕೊಳ್ಳಲು ಮುಂದೆ ಬರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಯಾರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೇ 2 ನೇ ಲಸಿಕೆ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದರು.
ಮಳೆಗಾಲಕ್ಕೆ ಸಿದ್ದತೆ : ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರಕೃತಿ ವಿಕೋಪಗಳಿಗೆ ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಮಳೆಗಾಲದಲ್ಲಿ ಅತೀವೃಷ್ಠಿಗೆ ತುತ್ತಾಗುವ ಗುಂಡಬಾಳ, ಹಡೀನಬಾಳ, ಚಿಕ್ಕನಕೇರಿ ಪ್ರದೇಶಗಳಿಗೆ ಭೇಟಿ ನೀಡಿ ಮುಂಜಾಗ್ರತ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ತಾಲ್ಲೂಕಿನಲ್ಲಿ ಮಳೆಗಾಲದಲ್ಲಿ ವಹಿಸಬೇಕಾದ ಮುಂಜಾಗ್ರತೆಗಳ ಕೆಲಸಗಳ ಬಗ್ಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಸಭೆ ನಡೆಸಿ ಸೂಚಿಸಲಾಗಿದೆ ಎಂದರು. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಅಯಾ ಗ್ರಾಮಪಂಚಾಯ್ತಿ ಮಟ್ಟದಲ್ಲಿ ತಕ್ಷಣ ಸ್ಪಂದಿಸುವ ತಂಡವನ್ನು ರಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಭಟ್ಕಳ ಶಾಸಕ ಸುನೀಲ ನಾಯ್ಕ, ಉಪವಿಭಾಗಾಧಿಕಾರಿ ಮಮತಾ ದೇವಿ, ತಹಶೀಲ್ದಾರ ರವಿಚಂದ್ರ ಇದ್ದರು.
Leave a Comment