
ಭಟ್ಕಳ: ಅಕ್ರಮವಾಗಿ ಹಣ್ಣಿನ ವಾಹನವೊಂದರಲ್ಲಿ 500 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ ಶಿರಾಲಿ ಪೊಲೀಸ ಚೆಕ್ ಪೋಸ್ಟ ಬಳಿ ವಾಹನ ತಡೆದು ಮೂವರು ಆರೋಪಿಗಳನ್ನು ಬಂದಿಸಿದ ಘಟನೆ ಮಂಗಳವಾರ ನಡೆದುದೆ
ಆರೋಪಿಗಳಾದ ಮೌಲಾಲಿ ಭಾಷಾಸಾಬ್,ಜಿಲಾನಿ ಗೌಸ್ ಹಾಗೂ ಮುಜಾಫರ್ ಎಂದು ತಿಳಿದು ಬಂದಿದೆ.
ಶಿರಾಲಿ ಪೊಲೀಸ ಚೆಕ್ ಪೋಸ್ಟನಲ್ಲಿ
ವಾಹನ ಹಿಂಬದಿಯಲ್ಲಿ ಸುಮಾರು 1 ಲಕ್ಷ ಮೌಲ್ಯದ ಸುಮಾರು 500 ಕೆ.ಜಿ. ಆಗುವಷ್ಟು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಯಾವುದೇ ಪರವಾನಿಗೆ ಪಡೆಯದೇ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ವೇಳೆ ಶಿರಾಲಿ ಪೊಲೀಸ ಚೆಕ್ ಪೋಸ್ಟನಲ್ಲಿ ವಾಹನ ಸಮೇತ ಸಿಕ್ಕಿ ಬಿದ್ದಿದ್ದಾರೆ.ದನ ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಹಣ್ಣು ತುಂಬುವ ಖಾಲಿ ಟ್ರೇ ಹಾಗೂ ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಗ್ರಾಮೀಣಾ ಠಾಣಾ ಎಎಸೈ ಕೃಷ್ಣಾನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Leave a Comment