ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಮರ್ನಾಲ್ಕು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಕೆರೆ ಬಾವಿ, ನದಿಗಳು ತುಂಬಿ ಹರಿಯುತ್ತಿವೆ. ರಭಸವಾದ ಗಾಲಿ ಮಳೆಗೆ ಕೆಲವೆಡೆ ರಸ್ತೆ, ಮನೆಗಳ ಮೇಲೆ ಮರಬಿದ್ದು ಮನೆಯಲ್ಲಿದ್ದವರಿಗೆ ಗಾಯ ಆಗಿದೆ. ವಿದ್ಯುತ ಕಂಬಗಳು ಅಲ್ಲಲ್ಲಿ ಧರೆಗುರುಳಿವೆ. ಇದರಿಂದ ವಿದ್ಯುತ ಕಣ್ಣುಮುಚ್ಚಾಲೆ ಸಾಮಾನ್ಯವೆಂಬಂತಾಗಿದೆ. ತಾಲೂಕಿನ ಕುಂದರಗಿಗ್ರಾಪಂ ವ್ಯಾಪ್ತಿಯ ಭರತನಹಳ್ಳಿಯಿಂದ ಉಚಗೇರಿ ತೆರಳುವ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಹಾನಿಯಾಗಿದೆ ಅದೃಷ್ಟವಶಾತ್ ಜೀವಕ್ಕೇನು ಅಪಾಯವುಂಟಾಗಿಲ್ಲ.ತಾರೇಹಳ್ಳಿ ಯ ಗೀತಾ ಪುಟ್ಟಾ ಸಿದ್ದಿ ಅವರ ವಾಸದ ಮನೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದ್ದು ಯಾವದೇ ಜೀವಹಾನಿಯಾಗಿಲ್ಲ
ಪಟ್ಟಣದ ಉದ್ಯಮ ನಗರದಲ್ಲಿ ದಸ್ತಗಿರಿ ಗೋರಿಸಾಬ್ ಕಪಟಗಿರಿ ಅವರ ವಾಸ್ತವ್ಯದ ಮನೆಮೆಲೆ ತೆಂಗಿನ ಮರ ಮುರಿದು ಬಿದ್ದು ಹಾನಿಯಾಗಿದೆ.ನೂತನ ನಗರ ಜಡ್ಡಿಯಲ್ಲಿ ಗಾಳಿ ಮಳೆಗೆ ಮಹಾಬಲೇಶ್ವರ ಗಾಗು ನಾಯ್ಕ ಇವರ ವಾಸ್ತವ್ಯದ ಮನೆಯ ಮಾರಿಗೆ ಗೋಡೆ ಕುಸಿದು ಬಿದ್ದು ಮೇಲ್ಛಾವಣಿ ಮುರಿದು ಬಿದ್ದು ಹಾನಿಯಾಗಿರುತ್ತದೆ.ಘಟನೆ ವೇಳೆ ಮಹಾಬಲೇಶ್ವರ ಗಾಗು ನಾಯ್ಕ ಇವರ ತಲೆಗೆ ಹಾಗೂ ಕಾಲಿಗೆ ಪೆಟ್ಟು ಬಿದ್ದು ಸರ್ಕಾರಿ ಆಸ್ಪತ್ರೆ ಯಲ್ಲಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್ ಭೇಟಿ ನೀಡಿ ಆರೋಗ್ಯ್ ವಿಚಾರಿಸಿದರು.ಸ್ಥಳಕ್ಕೆ ಶ್ರೀಧರ್ ಯಲಿಗೌಡ್ ಗ್ರಾಮಲೆಕ್ಕಿಗ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಈ ವೇಳೆ ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ ಅಲಿ ಕೆ ಹಮೀದ್ ಇದ್ದರು.
Leave a Comment