ಹೊನ್ನಾವರ ; ತಾಲೂಕಿನ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಶ್ರೀ ಮೂಡಗಣಪತಿ ದೇವಸ್ಥಾನದ ಆವರಣದಲ್ಲಿ ಸೋಮವಾರ ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಯೋಗಾಭ್ಯಾಸ ಜರುಗಿತು.
ಯೋಗಭ್ಯಾಸದಲ್ಲಿ ಭಾಗವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಮೊದಲು ಜಗತ್ತಿಗೆ ಯೋಗ ಶಿಕ್ಷಣ ಪರಿಚಯಿಸಿದ್ದು ಭಾರತ ದೇಶ ಎನ್ನುವ ಹೆಮ್ಮೆ ಇದೆ. ಯೋಗ ಶಿಕ್ಷಣ ಭಾರತೀಯರ ಬದುಕಿನಲ್ಲಿ ಅಡಕವಾದ ಆಸ್ತಿಯಾಗಿತ್ತು. ದೇಶದ ಪ್ರಧಾನಮಂತ್ರಿ ಶ ನರೇಂದ್ರ ಮೋದಿಯವರು ಈ ಯೋಗ ಶಿಕ್ಷಣ ಕೇವಲ ಭಾರತಕ್ಕೆ ಅಷ್ಟೇ ಅಲ್ಲ ಇದು ಜಗತ್ತಿನ ಜನರಿಗೆ ತಲುಪಬೇಕು, ಎನ್ನುವ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆ ಜೊತೆಯಲ್ಲಿ ಯೋಗಾಭ್ಯಾಸ ಶಿಕ್ಷಣದ ಕುರಿತು ಮಾಹಿತಿ ನೀಡಿದ ಕಾರಣದಿಂದಾಗಿ ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಜೂನ್ 21 ರಂದು ಆಚರಣೆಗೆ ತರಲಾಗಿದೆ. ಇಂದು ನಾವು ಜಗತ್ತಿನ 7 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಸುತ್ತಿದ್ದೇವೆ. ಪ್ರತಿದಿನವೂ ನಮ್ಮ ಜೀವನದಲ್ಲಿ ಯೋಗಾಭ್ಯಸ ಅಳವಡಿಸಿಕೊಂಡು ಇತರರಿಗೂ ಮಾಹಿತಿ ನೀಡುವಂತೆ ಕರೆ ನೀಡಿದರು.
ಯೋಗಾಭ್ಯಾಸ ಶಿಕ್ಷಕರಾಗಿ ನಿವೃತ್ತ ಶಿಕ್ಷಕರಾದ ಕೆ.ಡಿ.ನಾಯಕ ಮಾಹಿತಿ ನೀಡಿ, ವಿವಿಧ ಬಂಗಿಯ ಆಸನ ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಪಂಚಾಯತ ಸದಸ್ಯರಾದ ಶ್ರೀಕಲಾ ಶಾಸ್ತ್ರಿಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಹೆಗಡೆ, ರಾಷ್ಟ್ರೀಯ ಪರಿಷತ್ ಸದಸ್ಯರಾದ ಎಮ್.ಜಿ.ನಾಯ್ಕ, ಮಂಡಲ ಅಧ್ಯಕ್ಷರಾದ ರಾಜೇಶ ಭಂಡಾರಿ,ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ್ ಮೇಸ್ತಾ, ಸದಸ್ಯ ವಿಜಯ ಕಾಮತ್, ಭಾಗ್ಯ ಮೇಸ್ತ ,ಪಕ್ಷದ ಕಾರ್ಯಕರ್ತರಾದ ಎಂ.ಎಸ್.ಹೆಗಡೆ, ಗಣಪತಿ ನಾಯ್ಕ ಬಿಟಿ, ಉಮೇಶ ಸಾರಂಗ, ಉಲ್ಲಾಸ ನಾಯ್ಕ, ಶ ದತ್ತಾತ್ರೇಯ ಮೇಸ್ತ ಇತರರು ಉಪಸ್ಥಿತರಿದ್ದರು.
Leave a Comment