ಹೊನ್ನಾವರ ತಾಲೂಕ ಆಸ್ಪತ್ರೆಯ ರೋಗಿಗಳ ಅನೂಕೂಲತೆಗಾಗಿ ೨೦ ಲಕ್ಷ ವೆಚ್ಚದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ ಶಾಸಕರ ಪ್ರವೇಶಾಭಿವೃದ್ದಿ ನಿಧಿಯಿಂದ ತಲಾ ೨೦ ಲಕ್ಷ ವೆಚ್ಚದಲ್ಲಿ ಅಂಬುಲೆನ್ಸ ನೀಡಲಾಗಿತ್ತು. ಒಂದು ಅಂಬುಲೆನ್ಸ ಭಟ್ಕಳ ಹಾಗೂ ಇನ್ನೊಂದು ಹೊನ್ನಾವರ ತಾಲೂಕ ಆಸ್ಪತ್ರೆಗೆ ಮೇ ೩೦ ರಂದು ಇಡಗುಂಜಿಯಲ್ಲಿ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಸ್ತಾಂತರಿಸಿದ್ದರು. ಈ ಅಂಬುಲೆನ್ಸ ಬಡವರಿಗೆ ಅನೂಕೂಲವಾಗಲಿದೆ ಎಂದು ಶಾಸಕ ಸುನೀಲ ನಾಯ್ಕ ಹಾಗೂ ಸಾರ್ವಜನಿಕರು ಆಶಾಭಾವನೆ ಹೊಂದಿದ್ದರು.
ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ತಾಲೂಕಿನ ಜನತೆಗೆ ಬಹುಉಪಯೋಗವಾಗಲಿದೆ ಎಂದು ಅಭಿನಂದಿಸಿದ್ದರು. ಆದರೆ ಕಳೆದ ೨೦ ದಿನದಲ್ಲಿ ಈ ಅಂಬುಲೆನ್ಸ ಒಮ್ಮೆ ಕಾರವಾರಕ್ಕೆ ಹೋಗಿ ರಿಜಿಸ್ಟೇಶನ್ ಮಾಡಿ ಅದೇ ದಿನ ಉಡುಪಿಗೆ ಒರ್ವ ರೋಗಿಯನ್ನು ತಲುಪಿಸಿದ್ದು ಬಿಟ್ಟರೆ ಮತ್ತೆ ಉಪಯೋಗಿಸಿಲ್ಲ. ಈ ಬಗ್ಗೆ ವಿಚಾರಿಸಿದಾಗ ಒರ್ವರು ಖಾಯಂ ಹಾಗೂ ಇರ್ವರು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊಸ ಚಾಲಕರ ನೇಮಿಸಿಕೊಳ್ಳದೆ ಇರುದರಿಂದ ಈ ಅಂಬುಲೆನ್ಸ ಬಳಸಲು ಸಾಧ್ಯವಿಲ್ಲದೇ ಇರುದರಿಂದ ಶವಗಾರದ ಪಕ್ಕದ ಖಾಲಿ ಜಾಗದಲ್ಲಿ ಗೇಟಿನ ಒಳಗಡೆ ನಿಲ್ಲಿಸಿ ಬೀಗ ಜಡಿಯಲಾಗಿದೆ. ಸೋಮವಾರ ಕುಮಟಾ ಶಾಸಕ ದಿನಕರ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿದಾಗ ಈಗಾಗಲೇ ಎರಡು ಅಂಬುಲೆನ್ಸ ಕುಮಟಾಕ್ಕೆ ನೀಡಿದ್ದು ಇನ್ನೊಂದು ಕೆಲವೇ ದಿನದಲ್ಲಿ ಆಗಮಿಸಲಿದೆ.
ಆದರಿಂದ ತುರ್ತಾಗಿ ಕುಮಟಾ ಅಂಬುಲೆನ್ಸ ಹೊನ್ನಾವರಕ್ಕೆ ನೀಡುತ್ತೇನೆ ಎಂದಾಗ ಒಪ್ಪಿದ ವೈದ್ಯಾಧಿಕಾರಿಗಳು ಶಾಸಕರಿಗೆ ಅಭಿನಂದಿಸಿದ್ದಾರೆ.ವಾಸ್ತವದಲ್ಲಿ ಶಾಸಕ ಸುನೀಲ ನಾಯ್ಕ ನೀಡಿದ ಒಂದು ಅಂಬುಲೆನ್ಸ ಹಾಗೇ ನಿಲ್ಲಿಸಿಟ್ಟು ಅದರ ಪಕ್ಕ ಇನ್ನೊಂದು ಅಂಬುಲೆನ್ಸ ನೀಡುದಕ್ಕೊ ಅಥವಾ ಎರಡು ಅಂಬುಲೆನ್ಸ ಪಡೆದು ಕಳೆದ ವರ್ಷ ಆಸ್ಪತ್ರೆಯ ಮೇಲ್ಛಾವಣೆಗೆ ಮುಚ್ಚಿದ ಪ್ಲಾಸ್ಟಿಕ್ ಮುಚ್ಚಿಡಲೋ ಎಂದು ತಿಳಿಯುತ್ತಿಲ್ಲ. ಶಾಸಕರು ಕೂಡಾ ಎಷ್ಟು ಅಂಬುಲೆನ್ಸ ಇದೆ. ಎಷ್ಟು ಚಾಲಕರಿದ್ದಾರೆ ಅವಶ್ಯವಿದೆಯೋ ಎಂದು ಅರಿವಿಲ್ಲದೆ ಸರ್ಕಾರದ ಅನುದಾನದಲ್ಲಿ ಮಂಜೂರಿ ಮಾಡಿಸಿ ತಾಲೂಕಿಗೆ ಕೂಡುಗೆ ನೀಡಲಾಗಿದೆ ಎಂದು ತೋರಿಸಲು ಈ ಬಗ್ಗೆ ವಿಚಾರಿಸದೇ ನೀಡುತ್ತಿದ್ದಾರೆ ಎನ್ನುವ ಆರೋಪವು ಕೇಳಿಬರುತ್ತಿದೆ. ಶಾಸಕರು ಹಾಗೂ ತಾಲೂಕ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯ ಒದಗಿಸುವ ಕಾರ್ಯ ಮಾಡಲಿ ಅನಾವಶ್ಯಕ ದುಂದುವೆಚ್ಚಕ್ಕೆ ಕಡಿವಾಣ ಹಾಕಲಿ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
Leave a Comment