ಹೊನ್ನಾವರ; ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಘಟಕ ಕಳೆದ ಮೂರು ತಿಂಗಳನಿಂದ ನಿರ್ವಹಣೆ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ವೈಯಕ್ತಿಕವಾಗಿ ೫೦ ಸಾವಿರ ಮೊತ್ತದ ಚೆಕ್ ಶುಕ್ರವಾರ ಹಸ್ತಾಂತರಿಸುವ ಮೂಲಕ ನೆರವಾಗಿದ್ದಾರೆ.
ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಚೆಕ್ ಸ್ವೀಕರಿಸಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಕಳೆದ ಮೂರು ತಿಂಗಳಿನಿಂದ ಡಯಾಲಿಸಿಸ್ ನಿರ್ವಹಣೆ ಸಮಸ್ಯೆ ಬಗ್ಗೆ ಕೆಲ ದಿನದ ಹಿಂದೆ ನನ್ನ ಗಮನಕ್ಕೆ ಬಂದಾಗ ತಗಲುವ ವೆಚ್ಚದ ಬಗ್ಗೆ ವಿಚಾರಿಸಿದಾಗ ಔಷಧಿ ಹಾಗೂ ಇತರೆ ಖರ್ಚುಗಳ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತ ಖರ್ಚಾಗುತ್ತದೆ ಎಂದು ಗಮನಕ್ಕೆ ಬಂದಿದೆ.
ಇದರಿಂದ ವೈಯಕ್ತಿಕವಾಗಿ ನೆರವಾಗುವ ಕಾರಣಕ್ಕೆ ೫೦ ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಿದ್ದೇನೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ರಾಮಚಂದ್ರ ನಾಯ್ಕ, ನವೀನ ನಾಯ್ಕ, ಗೀರೀಶ ಗೌಡ, ಬ್ಲಾಕ್ ಅಧ್ಯಕ್ಷ ಜಗದೀಪ ತೆಂಗೇರಿ, ಜಗದೀಶ ಭಾವೆ, ಪಕ್ಷದ ಮುಖಂಡರಾದ ಎಂ.ಎನ್. ಸುಬ್ರಹ್ಮಣ್ಯ, ರವಿ ಶೆಟ್ಟಿ ಕವಲಕ್ಕಿ, ಹರಿಶ್ಚಂದ್ರ ನಾಯ್ಕ, ವಿನೋದ ನಾಯ್ಕ, ಶ್ರೀನಾಥ ಶೆಟ್ಟಿ, ವಿನಾಯಕ ನಾಯ್ಕ, ಕಿರಣ ಭಂಡಾರಿ ಉಪಸ್ಥಿತರಿದ್ದರು.
Leave a Comment