ಯಲ್ಲಾಪುರ: ಸಮಾಜದಲ್ಲಿ ಉಳ್ಳವರು ತುಂಬಾ ಜನರಿದ್ದಾರೆ ಆದರೆ ಉದಾರದಾನಿಗಳು ,ಸಮಾಜಕ್ಕೆ ನೆರವವಾಗುವರು ವಿರಳ ಆದರೆ ಉದ್ಯಮಿ ಬಾಲಕೃಷ್ಣ ನಾಯಕ ಇದಕ್ಕೆ ಅಪವಾದವಾಗಿದ್ದಾರೆ.ಅವರು ಸ್ವಂತ ದುಡಿಮೆಯಿಂದ ಹಣ ಹೆಸರು ಗಳಿಸುವುದರ ಜೊತೆಗೆ ತಾಲೂಕಾ ಆಸ್ಪತ್ರೆಗೆ೨೪ ಲಕ್ಷ ರೂ ಬೆಲೆಯ ಅತ್ಯಾಧುನಿಕ ಅಂಬುಲೆನ್ಸ್ ನ್ನು ಕೊಡುಗೆಯಾಗಿ ನೀಡುವವುದರ ಮೂಲಕ ಸಮಾಜದ ಸ್ವಾಸ್ಥö್ಯರಕ್ಷಣೆಗೆ ಕೈಜೋಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಶನಿವಾರ ಉದ್ಯಮಿ ಬಾಲಕೃಷ್ಣ ನಾಯಕ ಕೊಡುಗೆಯಾಗಿ ನೀಡಿದ ಅತ್ಯಾಧುನಿಕ ಅಂಬುಲೆನ್ಸ್ ನ್ನು ತಾಲೂಕಾ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಹಸ್ತಾಂತರಿಸಿ ನಂತರ ಮಾತನಾಡಿ ತಾಲೂಕಿನ ಆಸ್ಪತ್ರೆಗಳಲ್ಲಿಯೇ ಹೈಟೆಕ್ ಸೌಲಭ್ಯ ಕಲ್ಪಿಸುವ ಮೂಲಕ ಜಿಲ್ಲೆಯಲ್ಲಿ ಹೈಟೆಕೆ ಆಸ್ಪತ್ರೆಯ ಇಲ್ಲವೆಂಬ ಕೊರಗು ನೀಗಲಿದೆ.ಆ ದಿಶೆಯಲ್ಲಿ ಯಲ್ಲಾಪುರ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ಆಯಾಮ ಪಡೆಯುತ್ತಲಿದೆ.
ಜಿಲ್ಲೆಯಲ್ಲಿಯೇ ಕೇವಲ ೧೩ ಅಂಬುಲೆನ್ಸ ಗಳಿದ್ದವು. ಇದೀಗ ಜಿಲ್ಲೆಯ ಎಲ್ಲ ಶಾಸಕರು ಹೆಚ್ಚುವರಿಯಾಗಿ ೨೫ ಅಂಬುಲೆನ್ಸ ನೀಡಿದ್ದಾರೆ. ಇಲ್ಲಿ ಡಯಾಲಿಸಿಸ್ ಇಲ್ಲದೇ ರೋಗಿಗಳಿಗೆ ತೊಂದರೆಯಾಗುತ್ತಿದ್ದು ನಮ್ಮ ಕಂಪನಿಯಿAದ ಎರಡು ಮಶೀನ ನೀಡಲಾಗುತ್ತಿದ್ದು ಆ ಸೌಲಭ್ಯವೂ ಇನ್ನೊಂದು ವಾರದಲ್ಲಿ ಇಲ್ಲಿ ಲಭ್ಯವಾಗಲಿದೆ.ಕೋವಿಡ ಮೂರನೇ ಅಲೆಗೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಮಕ್ಕಳಿಗೆ ಅನಾರೋಗ್ಯ ಕಂಡುಬAದರೆ ನಿರ್ಲಕ್ಷಿಸದೇ ತ್ವರಿತವಾಗಿ ಚಿಕಿತ್ಸೆ ಕೊಡಿಸುವಲ್ಲಿ ಹಿಂಜರಿಯಬಾರದು.ನನ್ನ ಕ್ಷೇತ್ರವೂ ಆರೋಗ್ಯ ಸಮಸ್ಯೆಯಿಂದ ದೂರಾವಾಗಬೇಕೆಂಬುದೇ ನನ್ನ ಹೆಬ್ಬಯಕೆ ಎಂದರು. ಈ ಸಂದರ್ಭದಲ್ಲಿ ಉದ್ಯಮಿ ಬಾಲಕೃಷ್ಣ ನಾಯಕ,ತಹಶೀಲ್ದಾರ ಶ್ರೀಕೃಷ್ಣ ಕಾಮಕರ, ಪಪಂ ಅಧ್ಯಕ್ಷೆ ಸುನಂದಾದಾಸ,ಉಪಾದ್ಯಕ್ಷೆ ಶ್ಯಾಮಿಲಿ ಪಾಠಣಕರ, ಪ್ರಮುಖರಾದ ಮುರುಳಿ ಹೆಗಡೆ ವಿವೇಕ ಹೆಬ್ಬಾರ,ಶಿರೀಷ ಪ್ರಭು,ರವಿ ಶಾನಭಾಗ,ರವಿಭಟ್ಟ ಬರಗದ್ದೆ, ವೈದ್ಯಾಧಿಕಾರಿ, ಡಾ.ನರೇಂದ್ರ ಪವಾರ ,ಡಾ ದೀಪಕ ಭಟ್ಟ , ಡಾ ಸೌಮ್ಯಾ ಕೆ.ವಿ,ಅಂಕೋಲಾದ ಭಾಸ್ಕರ ನಾರ್ವೇಕರ ಮುಂತಾದವರು ಇದ್ದರು.
ಅಂಬುಲೆನ್ಸ ಚಲಾಯಿಸಿದ ಸಚಿವ : ಸಚಿವ ಶಿವರಾಮ ಹೆಬ್ಬಾರ ಬಾಲು ನಾಯ್ಕ ಅವರೊಂದಿಗೆ ಅಂಬುಲೆನ್ಸ ಏರಿ ಯವದೇ ಹಿಂಜರಿಕೆಯಿಲ್ಲದೇ ಸರಾಗವಾಗಿ ಅಂಬುಲೆನ್ಸ ಚಲಾಯಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದು ವಿಶೇಷವಾಗಿತ್ತು.
Leave a Comment