ಅಂಕೋಲಾ;
ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಬೈಕ್ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಅಜ್ಜಿಕಟ್ಟಾ ಶೇಡ್ ಗೇರಿಯ ಅನ್ವರ್ ಗೌಸ್ ಸೈಯದ್(30) ಕೋಟೆ ವಾಡದ ಮಂಜುನಾಥ್ ಶಿವಾಜಿ ವಾಸ್ಟರ್ (31) ಬಂಧಿತ ಆರೋಪಿಗಳು.
ಇವರು ಭಾನುವಾರ ತಾಲೂಕಿನ ರಾಹೆ 66ಬಾಳೇಗುಳಿ ಸಮೀಪದ ಕೃಷ್ಣಾಪುರ ತಿರುವಿನಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಬಂಧಿಸಲಾಗಿದ್ದು .ಅವರಿಂದ 10,500 ಮೌಲ್ಯದ 270ಗ್ರಾಂ ಗಾಂಜಾ ಬೈಕ್ ಹಾಗೂ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ. ಪಿ ಐ ಸಂತೋಷ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಎಸ್ಐ ಗಳಾದ ಪ್ರವೀಣ್ ಕುಮಾರ್ R. ಪ್ರೇಮನ ಗೌಡ ,ಅಪರಾಧ ವಿಭಾಗದ ಸಿಬ್ಬಂದಿಗಳಾದ ಮೋಹನದಾಸ ಶೇಣ್ವಿ ಮಂಜುನಾಥ ಲಕ್ಮಾಪುರ,ಆಶೀಪ್ ಕುಂ ಕೊರು ಶ್ರೀಕಾಂತ, ರೊ ೕಹಿದಾಸ ದೇವಾಡಿಗ ,ಚಾಲಕರಾದ ಸತಿ ೕಶ ನಾಯ್ಕ, ಜಗದೀಶ ನಾಯ್ಕ ಪಾಲ್ಗೊಂಡಿದ್ದರು.
Leave a Comment