ಪ್ರಾಣ ಉಳಿಸಿತೇ ಪ್ರಾಣಾಯಾಮ ?

ಹೊನ್ನಾವರ : ಪ್ರಾಣಾಯಾಮ, ಆತ್ಮವಿಶ್ವಾಸ ಮತ್ತು ಸಕಾಲದಲ್ಲಿ ಚಿಕಿತ್ಸೆ ತೀವ್ರ ಹೃದಯಾಘಾತವಾದ ರೋಗಿಯನ್ನು ಉಳಿಸಬಹುದು ಎಂಬುದಕ್ಕೆ ಮಂಗಳೂರು ಕೆಎಂಸಿಯ ಖ್ಯಾತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಇತ್ತೀಚಿನ ಒಂದು ಉದಾಹರಣೆ ನೀಡಿದ್ದಾರೆ. ಡಾ. ಪದ್ಮನಾಭ ಕಾಮತ್ ಕಾರವಾರದ ಗ್ರಾಮಾಂತರ ಮೂಲದ ವ್ಯಕ್ತಿಯೊಬ್ಬನಿಗೆ ತೀವ್ರ ಹೃದಯಾಘಾತವಾಗುತ್ತದೆ, ಎದೆನೋವಿನಿಂದ ಬಳಲುತ್ತಿದ್ದ ಅವನಿಗೆ ಮಂಗಳೂರಿಗೆ ಬರುವಂತೆ ಸ್ನೇಹಿತರು ಸಲಹೆ ನೀಡುತ್ತಾರೆ. ಕಾರವಾರದಿಂದ ಹೊರಟು ಹೊನ್ನಾವರಕ್ಕೆ ಬರುವಷ್ಟರಲ್ಲಿ ಎದೆನೋವು ತೀವ್ರವಾಗುತ್ತದೆ. ಇಸಿಜಿ ಮಾಡಿ ಸಿಎಡಿಗೆ ಕಳಿಸಿದಾಗ ತುರ್ತು ಚಿಕಿತ್ಸೆಗೆ ಸಲಹೆಯನ್ನು ನೀಡಲಾಗುತ್ತದೆ. … Continue reading ಪ್ರಾಣ ಉಳಿಸಿತೇ ಪ್ರಾಣಾಯಾಮ ?