ಹೊನ್ನಾವರ ; ಪಟ್ಟಣದ ಪ್ರಭಾತನಗರದ ರಜತಗಿರಿ ಕಾಲೋನಿಯ ನಿವಾಸಿಗಳು ಕಳೆದ ಮೂರು ವರ್ಷದಿಂದ ಸಾರ್ವಜನಿಕ ಗಣೆಶೊತ್ಸವ ಆಚರಿಸುತ್ತಿದ್ದರು. ಇಲಾಖೆಯ ಸ್ಥಳದಲ್ಲಿ ಐದು ದಿನಗಳ ಗಣಪತಿ ಪ್ರತಿಷ್ಟಾಪಿಸಿ ಪೂಜೆಸುತ್ತಿದ್ದರು. ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಹಿನ್ನಲೆ ಈ ಬಾರಿ ಶಡ್ ನಿರ್ಮಾಣ ಮಾಡಿ ಪ್ರತುಷ್ಟಾಪಿಸಲು ಮುಂದಾಗಿ ವಾರದ ಹಿಂದೆಯೆ ಶಡ್ ನಿರ್ಮಿಸಿದ್ದರು.
ಅರಣ್ಯ ಇಲಾಖೆಯ ಯಾವುದೆ ಗಿಡಮರಗಳು ಇಲ್ಲದಿರುವ ಕಲ್ಲುಬಂಡೆಯ ಸ್ಥಳವಾಗಿರುದರಿಂದ ಇಲ್ಲಿನ ನಿವಾಸಿಗಳ ಬೇಡಿಕೆಯಂತೆ ಇಲಾಖೆಯವರು ತಟಸ್ಥವಾಗಿದ್ದರು. ಮಂಗಳವಾರ ರಾತ್ರಿ ೯ ಗಂಟೆಗೆ ಜೆಸಿಬಿ ಯಂತ್ರದ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಡ್ ತೆರವು ಮಾಡಿರುದರಿಂದ ಸ್ಥಳಿಯ ನಿವಾಸಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ಸ್ಥಳದಿಂದ ಅಧಿಕಾರಿಗಳು ಜೆಸಿಬಿ ಬಿಟ್ಟು ಹೋಗಿದ್ದರು. ಬುಧವಾರ ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಆಗಮಿಸಿ ಸ್ಥಳಿಯರಿಂದ ಮಾಹಿತಿ ಪಡೆದರು.
ಘಟನೆ ಕುರಿತು ವಲಯ ಅರಣ್ಯಧಿಕಾರಿ ಶರತ್ ಶೆಟ್ಟಿ ಬಗ್ಗೆ ಪ್ರಶ್ನಿಸಿದಾಗ ಇಲಾಖೆಯ ಸ್ಥಳ ಏಕಾಏಕಿ ಕೆಳ ಅಧಿಕಾರಿಗಳು ತೆರವು ಮಾಡಿರುದು ಕಾನೂನು ಪ್ರಕಾರ ತಪ್ಪಿಲ್ಲ ಎಂದರು. ಮರಗಿಡ ಬೆಳೆಸಲು ಸಾಧ್ಯವಿಲ್ಲದೆ ಇರುದರಿಂದ ಸಾರ್ವಜನಿಕ ಗಣೆಶೊತ್ಸವ ಸಮಯದಲ್ಲಿ ಗಣಪತಿ ಪ್ರತಿಷ್ಟಾಪನೆ ನಡೆಸಲು ಶಡ್ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಶಾಸಕ ದಿನಕರ ಶೆಟ್ಟಿ ಮಾತನಾಡಿ ಪ್ರಭಾತನಗರದ ನಿವಾಸಿಗಳು ಗಣೇಶೋತ್ಸವ ಆಚರಣೆಗಾಗಿ ಚಿಕ್ಕದಾದ ಶೆಡ್ ನಿರ್ಮಾಣ ಮಾಡಿಕೊಂಡಿದ್ದರು ಅರಣ್ಯ ಇಲಾಖೆ ಸ್ಥಳವಾಗಿರುದರಿಂದ ಸಮಸ್ಯೆ ಉದ್ಬವಿಸಿತ್ತು. ಇಂದು ಸಂಭದಪಟ್ಟ ಇಲಾಖೆಯವರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ. ಇದು ಅರಣ್ಯ ಇಲಾಖೆಯ ಪ್ರದೇಶವಾದರು ಇಲ್ಲಿ ಮರ-ಗಿಡಗಳನ್ನು ಬೆಳೆಸಲು ಸಾಧ್ಯವಿಲ್ಲ. ಕಲ್ಲು ಗುಡ್ಡ ಪ್ರದೇಶ ಆಗಿರುವುದರಿಂದ ಇಲ್ಲಿ ಗಣೆಶೊತ್ಸವ ಸಮಯದಲ್ಲಿ ಮಾತ್ರ ಬಳಸಲು ಶಡ್ ನಿರ್ಮಿಸಲು ಕಮಿಟಿಯ ಅಧ್ಯಕ್ಷರ ಜೊತೆ ಕಾರ್ಯಕರ್ತರ ಜೊತೆ ಈ ಭಾಗದ ಸಾರ್ವಜನಿಕರಿಗೆ ಮನವಿ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಹೊನ್ನಾವರ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಸದಸ್ಯರಾದ ನಾಗರಾಜ್ ಭಟ್ಟ, ವಿಜಯ ಕಾಮತ್, ಸಿ.ಪಿ.ಐ ಶ್ರೀಧರ ಎಸ್.ಆರ್. ಪಿಎಸೈ ಶಶಿಕುಮಾರ, ನಿರಂಜನ ಬಿಜೆಪಿ ಮುಖಂಡರಾದ ಎಮ್.ಎಸ್ ಹೆಗಡೆ ಕಣ್ಣಿ, ವಕಿಲರಾದ ಕೆ ಆರ್.ನಾಯ್ಕ, ಎಲ್.ಆರ್ ನಾಯ್ಕ, ಶೇಖರ್ ನಾಯ್ಕ, ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.
Leave a Comment