ಹೊನ್ನಾವರ;
ಗುಂಡಬಾಳ ದೇವಸ್ಥಾನ ಹಾಗೂ ಕೋಟೆ ಭಾಗಗಳಲ್ಲಿ ಗೂಳಿಯೊಂದರ ಕಾಟದಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಗೂಳಿಯನ್ನು ಹಿಡಿದು ತಮಗೆ ರಕ್ಷಣೆ ನೀಡಬೇಕು ಎಂದು ಭಾಗದ ಕೆಲವರು ಸ್ಥಳೀಯ ಚಿಕ್ಕನ ಕೋಡ್ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದಾರೆ.
ಗೂಳಿ ಸಿಕ್ಕವರನ್ನು ತಿಳಿಯುತ್ತಿದೆ. ದ್ವಿಚಕ್ರವಾಹನಗಳನ್ನು ಬೆನ್ನಟ್ಟಿ ಬೀಳುವಂತೆ ಮಾಡುತ್ತದೆ . ಈಗಾಗಲೇ ಗೂಳಿ ದಾಳಿಯಿಂದ ಕೆಲವರು ಗಾಯಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ. ರಾತ್ರಿ-ಬೆಳಗಾಗುವುದರೊಳಗಾಗಿ ಇಂಥ ಗೂಳಿಗಳು ಕಂಡುಬರುತ್ತವೆ.
ಅಲ್ಲಲ್ಲಿ ತಿರುಗಾಡುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ ಆಮೇಲೆ ಇವುಗಳನ್ನು ಎಲ್ಲಿಗೆ ಒಯ್ಯುತ್ತಾರೆ ತಿಳಿಯುವುದಿಲ್ಲ . ಉಳುಮೆಗೆ ಗೂಳಿಗಳನ್ನು ಉಪಯೋಗಿಸುತ್ತಿಲ್ಲ ದಿರುವುದರಿಂದ ಅವುಗಳನ್ನು ಕೊಳ್ಳುವವರಿಲ್ಲ . ಕಸಾಯಿಖಾನೆಗೆ ಅಧಿಕೃತವಾಗಿ ತಾಗಿಸಲು ಕಾನೂನು ತೊಡಕಿದೆ. ಗೂಳಿ ತಮ್ಮದೆಂದು ಹೇಳುವ ಅದರ ಮಾಲೀಕರು ಮುಂದೆ ಬರುತ್ತಿಲ್ಲ. ಎಂದು ಕೆಲವು ಸಾರ್ವಜನಿಕರು ತಿಳಿಸಿದರು.
ಗೂಳಿಯನ್ನು ಹಿಡಿಯಲು ಮಾಡಿದ ಕೆಲವು ಪ್ರಯತ್ನ ವಿಫಲವಾಗಿದೆ. ಗೂಳಿಗೆ ಅರವಳಿಕೆ ನೀಡಿ ಅದನ್ನು ಗೋಶಾಲೆಗೆ ಸಾಗಿಸಬೇಕು ಎಂದು ಮಂಗಳವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
Leave a Comment