ಭಟ್ಕಳ: ಕೊರೋನಾ ಮಹಾಮಾರಿಯಿಂದಾಗಿ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಸನ್ನಿಧಿಯಲ್ಲಿ ಸ್ಥಗಿತಗೊಂಡಿದ್ದ ಹಣ್ಣುಕಾಯಿ ಪೂಜೆ ಹಾಗೂ ಇತರ ಎಲ್ಲಾ ಸೇವೆಗಳು ಮಂಗಳವಾರದಿಂದ ಸರಕಾರದ ಮಾರ್ಗಸೂಚಿಯ ಪಾಲನೆಯಂತೆ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು ಭಕ್ತರು ತಮ್ಮ ಸೇವೆ ಸಲ್ಲಿಕೆಗೆ ಆಗಮಿಸಿದ್ದಾರೆ.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ಬರುವ ಸೋಡಿಗದ್ದೆದೇವಸ್ಥಾನದಲ್ಲಿ ಭಕ್ತರಿಗೆ ಸೇವೆ ಕೈಂಕರ್ಯ ಸಲ್ಲಿಸಲು ಅವಕಾಶ ನೀಡಿದ ಬೆನ್ನಲ್ಲೇ ನೂರಾರು ಮಂದಿ ದೇವಸ್ಥಾನಕ್ಕೆ ಭಕ್ತರು ಮುಂಜಾನೆಯೇ ಸೇವೆ ಸಲ್ಲಿಸಲು ಬರಲಾರಂಭಿಸಿದ್ದರು.
ಕೆಲ ದಿನದ ಹಿಂದೆ ದೇವಾಲಯ ತೆರೆದು ಅರ್ಚಕರು ಕೇವಲ ಪೂಜೆ ಸಲ್ಲಿಸಬಹುದೆಂದ ಆದೇಶ ಪಾಲನೆ ಮಾಡಿಕೊಂಡು ಬಂದಿದ್ದು, ಈಗ ಎರಡು ತಿಂಗಳ ಬಳಿಕ ಭಕ್ತರಿಗೆ ದೇವರ ದರ್ಶನ ಸೇವೆಗೆ ಮುಕ್ತ ಅವಕಾಶ ಸಿಕ್ಕಂತಾಗಿದೆ. ಇನ್ನು ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಸರಕಾರ ರೂಪಿಸಿರುವ ಕೋವಿಡ್ 19 ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ದೇವಸ್ಥಾನದ ಆಡಳಿತ ಅಧಿಕಾರಿ ತಹಸೀಲ್ದಾರ ರವಿಚಂದ್ರ ಎಸ್. ಅವರು ಸೂಚನೆಯಂತೆ ದೇವಸ್ಥಾನ ಮೇಲ್ವಿಚಾರಕರು, ಸಿಬ್ಬಂದಿಗಳು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದಂತೆ ಭಕ್ತರಿಗೆ ಸಾಮಾಜಿಕ ಅಂತರ, ಮಾಸ್ಕ ಕಡ್ಡಾಯ ಪಾಲನೆಯಂತೆ ದರ್ಶನ ಸೇವೆಗೆ ಅವಕಾಶ ನೀಡಲಾಯಿತು.
ಇವನ್ನು ದೇವಸ್ಥಾನದ ಪ್ರಾಂಗಣದಲ್ಲಿ ಹಣ್ಣು ಕಾಯಿಗೆ ವಿಶೇಷ ಸ್ಥಳವನ್ನು ನಿಗದಿ ಪಡಿಸಲಾಗಿತ್ತು. ಹಣ್ಣು ಕಾಯಿಯನ್ನು ಪಡೆದು ಸರದಿ ಸಾಲಿನಲ್ಲಿ ನಿಂತು ಪೂಜಾ ಸೇವೆಯನ್ನು ಅರ್ಪಿಸಿದರು. ಇನ್ನು ಸಾಕಷ್ಟು ಮಂದಿ ತಾಲೂಕು ಹಾಗೂ ತಾಲೂಕಿನ ವಿವಿಧ ಪ್ರದೇಶದಿಂದ ಬಂದ ಮೀನುಗಾರರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅದರಂತೆ ದೇವಿಗೆ ಕೋರೋನಾ ನಿರ್ಮೂಲನೆ ಆಗುವಂತೆ ಸಮಸ್ತ ಭಕ್ತರ ಪರವಾಗಿ ವಿಶೇಷ ಸಂಕಲ್ಪಿತ ಪೂಜೆಯನ್ನು ಸಲ್ಲಿಸಲಾಯಿತು.
ಇನ್ನು ಕೆಲವರು ದೇವಿಯಲ್ಲಿ ಅವರ ಇಷ್ಟಾರ್ಥ ಸೇವೆಯ ಈಡೇರಿಕೆಗೆ ಪ್ರಸಾದ ಕೇಳುವ ಪದ್ದತಿಯಿದ್ದು ಸಾಕಷ್ಟು ಭಕ್ತರು ಈ ಸೇವೆಯನ್ನು ನೀಡಿದರು. ಒಟ್ಟಾರೆ ಲಾಕ್ ಡೌನ ಮುಗಿದು ಎಲ್ಲವೂ ಸಹಜ ಸ್ಥಿತಿಯತ್ತ ಪರಿಸ್ಥಿತಿ ಬರುತ್ತಿದ್ದು ಅತ್ತ ದೇವರ ದರ್ಶನ, ಪೂಜೆ ಕಾಯುತ್ತಿದ್ದ ಭಕ್ತರಿಗೆ ಸಿಕ್ಕ ಅವಕಾಶ ಸಂತಸ ತಂದಂತಾಗಿದೆ.
Leave a Comment